ಲಿಂಗಸೂಗೂರು: ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ವತಿಯಿಂದ ಮುದಗಲ್ ಪಟ್ಟಣದ ಬ್ರಹ್ಮ ಶ್ರೀ ಹೊಟೇಲ್ ನಲ್ಲಿ ಪ್ರೊ. ಬಿ ಕೃಷ್ಣಪ್ಪ ಅವರ 85 ನೇ ಜಯಂತಿಯನ್ನು ಆಚರಿಸಲಾಯಿತು.
ತಾಲೂಕು ಸಮಿತಿಯ ಸಂಚಾಲಕ ಶರಣಪ್ಪ ಕಟ್ಟಿಮನಿ, ಹನುಮಂತ ಆಶಿಹಾಳ ಪ್ರೊ. ಕೃಷ್ಣಪ್ಪ ಭಾವಚಿತ್ರಕ್ಕೆ
ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ನಂತರ ಬಸವರಾಜ ಬಂಕದಮನಿ, ಶರಣಪ್ಪ ಕಟ್ಟಿಮನಿ ಮಾತನಾಡಿ ಪ್ರೊ. ಬಿ. ಕೆ ಅವರು ಹುಟ್ಟುಹಾಕಿದ ಈ
ಸಂಘಟನೆ ಆಗಿದ್ದು, ಇವರು ದಲಿತರ ಪರ ಹೋರಾಡಿ
ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟವರು ಇವರ
ಹೋರಾಟದ ಮನೋಭಾವವನ್ನು ನಾವೆಲ್ಲರೂ
ಅಳವಡಿಸಿಕೊಳ್ಳಬೇಕು. ಅವರ ಆದರ್ಶ ಗುಣಗಳನ್ನು
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಸಂಘಟನೆ ಸಂಚಾಲಕ ಹಾಜಪ್ಪ ಕಡಕಲ್ಲ, ಲಕ್ಕಪ್ಪ ನಾಗರಹಾಳ, ಬಸವರಾಜ ಬಂಕದಮನಿ, ನೀರುಪಾದಿ ರೇವಣಿಕೆ, ಮೋಹನ್ ಬಂಡಾರಿ, ಪರುಶುರಾಮ ರಾಮತ್ನಾಳ, ಪರುಶುರಾಮ ಖೈರವಾಡಗಿ, ಮುತ್ತಪ್ಪ ಗುರುಗುಂಟಾ, ದುರಗಪ್ಪ ರಾಯದುರ್ಗ, ಬಾಲರಾಜ, ಅಮರೇಶ, ಬಸವರಾಜ ಬನ್ನಿಗೋಳ್, ಗದ್ದೆಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.