ಇಂಡಿ : ಅಂತ್ಯಸಂಸ್ಕಾರ ವೇಳೆ ಪಟಾಕಿ ಕಿಡಿ ಸಿಡಿದ ಪರಿಣಾಮ ತೋಟದ ವಸತಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಇಂಡಿ ತಾಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಬೆಂಕಿ ಅವಘಡದಲ್ಲಿ ಆರು ಬೈಕ್ಗಳು ಭಸ್ಮವಾಗಿವೆ. ಜಯನಗೌಡ ಪಾಟೀಲ ಎಂಬುವರಿಗೆ ವಸತಿಯಲ್ಲಿ ಘಟನೆಯಿಂದ ಅಪಾರ ಹಾನಿಯಾಗಿದೆ. ಬೆಂಕಿ ಅವಘಡದಲ್ಲಿ ಗುಡಿಸಲಿನಲ್ಲಿದ್ದ ಹತ್ತು ಚೀಲ ತೋಗರಿ ಸೇರಿದಂತೆ ಅನೇಕ ವಸ್ತುಗಳು ಹಾನಿಯಾಗಿದೆ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಬೇಟಿ ನೀಡಿದ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಹಾನಿಗೊಳಗಾದ ಕುಟುಂಬ ಸದಸ್ಯರಿಗೆ ಸ್ವಾಂತನ ಹೇಳಿದರು. ಹಾಗೆ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಇದೆ ಸಂದರ್ಭದಲ್ಲಿ ಸೋಮಶೇಖರ್ ಬ್ಯಾಳಿ, ತಮ್ಮಣ್ಣ ಪೂಜಾರಿ, ಸಿದ್ದು ಡಂಗಾ, ನಿಂಗಪ್ಪ ಗಬ್ಬೂರ, ದರೇಪ್ಪ ಮೇತ್ರಿ, ಸಂಜು ಇಂಡಿ, ಸಂಜೀವ ಪಾಟೀಲ, ಅಶೋಕ ಹೂಸಮನಿ, ರೇವಪ್ಪ ಪೂಜಾರಿ ಉಪಸ್ಥಿತರಿದ್ದರು.