ನೇತಾಜಿ ಪ್ರಿಮಿಯರ್ ಲೀಗ್ ಸೀಸನ್ 4ನ ಹರಾಜು ಪ್ರಕ್ರಿಯೆಗೆ ಚಾಲನೆ
ಹನೂರು: ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 127ನೇ ಜನ್ಮದಿನ ಸ್ಮರಣಾರ್ಥ ನೇತಾಜಿ ಕ್ರಿಕೆಟರ್ಸ್ ಹಾಗೂ ಎಂ ಆರ್ ಮಂಜುನಾಥರವರ ಸಹಯೋಗದಲ್ಲಿ ನೇತಾಜಿ ಪ್ರೀಮಿಯರ್ ಕ್ರಿಕೆಟ್ ಲೀಗ್ ನ ನಾಲ್ಕನೆಯ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಸಲಾಯಿತು. ಟೂರ್ನಿಯಲ್ಲಿ ಎಂಟು ತಂಡಗಳಾದ ಮಾನಸ ಸ್ಟಾರ್ ಬಾಯ್ಸ್, ಎಂ ಸಿ ಸಿ ಬೆಟ್ಟ,ರೈಸಿಂಗ್ ಸ್ಟಾರ್, ಪವರ್ ವಾರಿಯರ್ಸ್, ತಾಡೋ ವಾರಿಯರ್ಸ್, ಬಿ ಎಸ್ ಎಫ್ ಟೈಗರ್ಸ್, ಎ ವಿ ಎಂ ಟೈಟಾನ್ಸ್ ಹಾಗೂ ಗೋಕುಲ ಕ್ರಿಕೆಟರ್ಸ್ ತಂಡಗಳು ಭಾಗವಹಿಸಲಿವೆ.
ಅಖಿಲ ಕರ್ನಾಟಕ ಒಕ್ಕಲಿಗ ಸಂಘದ ಚಾಮರಾಜನಗರ ಜಿಲ್ಲಾಧ್ಯಕ್ಷರಾದ ನಾಗೇಂದ್ರಗೌಡರವರು ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ನಂತರ ಮಾತನಾಡಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಹುಮುಖ್ಯ ಪಾತ್ರ ವಹಿಸಿದ ವೀರಸೇನಾನಿ ನೇತಾಜಿಯವರ ಜನ್ಮದಿನ ಸ್ಮರಣಾರ್ಥ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡಲು ಕ್ರಿಕೆಟ್ ಪ್ರೀಮಿಯರ್ ಲೀಗ್ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಇದರಿಂದ ಉತ್ತಮ ದರ್ಜೆಯ ಆಟಗಾರರು ಹೊರಬರಲು ಸಾಧ್ಯ ಎಂದರು,
ಕರ್ನಾಟಕ ಪತ್ರಕರ್ತ ಹನೂರು ಘಟಕದ ಅಧ್ಯಕ್ಷರಾದ ಬಂಗಾರಪ್ಪ ಮಾತನಾಡಿ ಕ್ರೀಡೆಯಿಂದ ಆಟಗಾರರಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉನ್ನತಿಯಾಗಿ ಆಟಗಾರರಲ್ಲಿ ಸಾಮರಸ್ಯ ಬೆಳೆಯಲಿದೆ ಇದೇ ನಿಟ್ಟಿನಲ್ಲಿ ಇನ್ನಷ್ಟು ಟೂರ್ನಿ ಆಯೋಜಿಸಲು ಆಯೋಜಕರಾದ ಶಶಿ, ಚೇತನ್ ಹಾಗೂ ಸಂತೋಷ್ ರವರಿಗೆ ಎಲ್ಲ ಸಹಕಾರ ಕೊಡುವುದಾಗಿ ತಿಳಿಸಿದರು ಕೌದಳ್ಳಿ ಗ್ರಾಮದ ಲುಕ್ ಮನ್ 2750ರೂ ಗಳಿಗೆ ಪವರ್ ವಾರಿಯರ್ಸ್ ತಂಡಕ್ಕೆ, ಕಾರ್ತಿಕ್ 1500ರೂ ಗಳಿಗೆ ಎಂ ಸಿ ಸಿ ಬೆಟ್ಟ ತಂಡಕ್ಕೆ ಹಾಗೂ ಅಪ್ಪು 1450ರೂ ಗಳಿಗೆ ಮಾನಸ ಸ್ಟಾರ್ ಬಾಯ್ಸ್ ತಂಡಕ್ಕೆ ಹರಜಾದ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದು ವಿಶೇಷ ವಾಗಿತ್ತು.
ಇದೇ ಸಂದರ್ಭದಲ್ಲಿ ಸದ್ಭಾವ ಸೇವಾ ಸಮಿತಿಯ ಅಧ್ಯಕ್ಷ ರಾದ ಗಂಗಾಧರ್,ಚೆಸ್ಕಾಂ ಗುತ್ತಿಗೆದಾರ ರವಿ, ತಂಡಗಳ ಮಾಲೀಕರಾದ ನಿವೃತ್ತ ಯೋಧ ಮಹದೇವು, ಮಹೇಶ್, ಮಾದೇವಸ್ವಾಮಿ, ಮೇಘರಾಜ್, ರುದ್ರ ನಾಯಕ್, ರಾಮಚಂದ್ರು, ಸುನಿಲ್, ಮಣಿ, ಶಿವು ಮುತ್ತು, ಕುಮಾರ್,ಸಂಜು, ಸನತ್ ಹಾಜರಿದ್ದರು.