ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪರಿಪೂರ್ಣ ಸತ್ಯವಲ್ಲ. ನೋಡಿಕೊಂಡು ಹೋದರೆ ಅದು ನಿಮ್ಮ ದಿಕ್ಕನ್ನೆ ತಪ್ಪಿಸುತ್ತದೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪರಿಪೂರ್ಣ ಸತ್ಯವಲ್ಲ. ನೋಡಿಕೊಂಡು ಹೋದರೆ ಅದು ನಿಮ್ಮ ದಿಕ್ಕನ್ನೆ ತಪ್ಪಿಸುತ್ತದೆ. ವಿದ್ಯಾರ್ಥಿಗಳು ಜಾಣನಾದರೆ ಸಾಲದು ಬುದ್ಧಿವಂತನಾಗಬೇಕು. ಜಾಣತನ ಕಾಲೇಜಿನ ಪಠ್ಯ ಪುಸ್ತಕಗಳ ವಿಷಯಕ್ಕೆ ಸಂಬಂಧಿಸಿದರೆ ಏನನ್ನು ಸಾಧಿಸಿದಂತೆ ಆಗುವುದಿಲ್ಲ. ಬುದ್ದಿವಂತನಾದರೆ ನೀವು ಜೀವನದಲ್ಲಿ ಗೆಲುವನ್ನು ಸಾಧಿಸಬಹುದು ಎಂದು ಡಿವೈಎಸ್ಪಿ ಬಾಹುಬಲಿ ನಂದಗಾವಿ ಹೇಳಿದರು.
ಅರಿಹಂತ ಕಾಲೇಜಿನಲ್ಲಿ ನಡೆದ ದತ್ತಿ ಉಪನ್ಯಾಸ ಹಾಗೂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ಅಪಾರವಾದ ಇತಿಹಾಸವಿದ್ದು, ಹಿಂದಿನ ರಾಜ ಮಹಾರಾಜರ ಆಸ್ಥಾನದ ಕವಿಗಳುಜೈನರಾಗಿದ್ದರು. ವಿಶ್ರಾಂತ ಕುಲಪತಿ ಡಾ.ಹೆಚ್ ಬಿ.ವಾಲಿಕಾರ ಮಾತನಾಡಿ, 16 ಜೈನ ಕವಿಗಳನ್ನು ಗುರುತಿಸಿ ಅವರ ಕೃತಿಗಳು ಜೈನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯ, ಪೊನ್ನನ ಶಾಂತಿ ಪುರಾಣ, ರನ್ನನ ಅಜಿತ ಪುರಾಣ, ಗದಾಯುದ್ದ, ನಾಗವರ್ಮನ ವರ್ಧಮಾನ ಪುರಾಣ, ಶಾಂತಿನಾಥನ ಸುಕಮಾರ ಚರಿತೆ, ನಾಗಚಂದ್ರನ ಮಲ್ಲಿನಾಥ ಪುರಾಣ, ರಾಮ ಚಂದ್ರ ಚರಿತೆ ಪುರಾಣ, ಬ್ರಹ್ಮಶಿವ ಸಮಯ ಪರೀಕ್ಷೆ, ನಯನಸೇನನ ಧರ್ಮಾಮೃತ ಸೇರಿ ಹೀಗೆ 16 ಜೈನ ಕವಿಗಳನ್ನು ಗುರುತಿಸಿದ್ದಾರೆ. ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಸಗರಿ ಅವರು 32 ಜೈನ ಕವಿಗಳನ್ನು ಗುರುತಿಸಿದ್ದಾರೆ ಎಂದರು.
ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಸಗರಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತ ಸುಭಾಷಗೌಡ ಪಾಟೀಲ ಮನಗೂಳಿ, ಮಹಾ ದಾನಿ ತವನಪ್ಪಬಾಬಾ ಮುತ್ತಿನ, ಅಲ್ಪಸಂಖ್ಯಾತರ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಅಪ್ಪಾಸಾಹೇಬ ಮುತ್ತಿನ, ಉದ್ಯಮಿ ಗುಣಧರ ರಾಜೇಂದ್ರ ಮುತ್ತಿನ, ವರ್ಷಾ ಮುತ್ತಿನ, ಹಿರಿಯ ಸಾಹಿತಿ ಎಸ್. ಬಿ. ಕನ್ನೂರ, ಅಬ್ದುಲ್ ರೆಹಮನ್ ಬಿದರಕುಂದಿ, ರಾಜಶೇಖರ ಮ್ಯಾಗೇರಿ, ಬಸವರಾಜ ಕಟ್ಟಿಮನಿ, ಮುಂಖಡರಾದ ಜಿನದತ್ತ ಆಲದಿ, ಎ.ಟಿ.ತಂಗಾ ವಿಜಯಪುರ, ಗೋಮಟೇಶ್ವರ ಸಗರಿ, ಬಾಹುಬಲಿ ಗೋಗಿ, ಮಾಣಿಕ ಸಗರಿ, ಅಜೀತ ಗೊಂಗಡಿ, ಮಹಾ ವೀರ ಮಂಕಣಿ, ರಮೇಶ ದೊಡ್ಡಮನಿ, ಮಹಾವೀರ ದಶರಥ, ಹೀರಾಚಂದ ಅಳಗಿ, ಸುನಿಲ ಸಗರಿ, ಲಲಿತಾ ಸಗರಿ, ಸುನಿತಾ ಸಗರಿ, ನಮ್ರತಾ ಸಗರಿ, ಅಕ್ಷತಾ ಸಗರಿ ಹಾಗೂ ಪ್ರಾಚಾರ್ಯ ವಿಪುಲ್ ಸಗರಿ, ಸೇರಿದಂತೆ ಕಾಲೇಜ್ ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.