ಮುದ್ದೇಬಿಹಾಳ : ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ನೂರು ದಿನಗಳ ಖಾತರಿ ಕೊಡುವ ಯೋಜನೆಯಾಗಿದ್ದು 370 ರೂ.ದಿನಗೂಲಿ ನೀಡಲಾಗುತ್ತದೆ ಎಂದು ತಾಪಂ ನೂತನ ಪ್ರಭಾರ ಸಹಾಯಕ ನಿರ್ದೇಶಕರಾದ ಎಸ್.ಎಸ್.ಗಣಾಚಾರಿ(ಮುತ್ತು) ಹೇಳಿದರು.
ಇಲ್ಲಿನಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಹಿಂದಿನ ಅಧಿಕಾರಿ ಪಿ.ಎಸ್.ಕಸನಕ್ಕಿ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ನೇಮಕವಾದ ಬಳಿಕ ಅಧಿಕಾರವನ್ನು ಸ್ವೀಕರಿಸಿ ಅವರು ಮಾತನಾಡಿದ.ರೈತರ ಹೊಲದಲ್ಲಿ ಬದು ನಿರ್ಮಾಣ, ಕೃಷಿ ಹೊಂಡ,ಚಕ್ಕೆ ಡ್ಯಾಮ್, ಅಂಗನವಾಡಿ ಕೇಂದ್ರಕ್ಕೆ ಶೌಚಾಲಯ, ಸರಕಾರಿ ಶಾಲೆ ಆಟದ ಮೈದಾನ, ಶಾಲೆಗೆ ಕಾಂಪೌಂಡ್ ಶೌಚಾಲಯ, ಮಹಿಳೆಯರಿಗೆ, ನಾಗರಿಕರಿಗೆ ಕೆಲಸಗಳಿಗೆ ಪಂಚಾಯಿತಿಯಿಂದ ಆದ್ಯತೆ ನೀಡಲಾಗುತ್ತಿದ್ದು ಎಂದು ತಿಳಿಸಿದರು.
ತಾಪಂ ಇಒ ವೆಂಕಟೇಶ ವಂದಾಲ ಮಾತನಾಡಿ, ಗ್ರಾಮೀಣ ಜನರಿಗೆ ನಿರಂತರ ನೂರು ದಿನಗಳ ಉದ್ಯೋಗ ಒದಗಿಸುವ ಮೂಲಕ ನಿರುದ್ಯೋಗ,ಗ್ರಾಮೀಣ ಜನರಿಗೆ ಸಮಸ್ಯೆಯನ್ನು ಉದ್ಯೋಗ ಖಾತ್ರಿ ಯೋಜನೆ ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಯೋಜನಾ ನಿರ್ದೇಶಕ ಖುಭಾಸಿಂಗ್ ಜಾಧವ್,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಕೆ ಎಚ್ ಕುಂಬಾರ, ಆನಂದ ಹಿರೇಮಠ, ಪಿ.ಎಸ್.ನಾಯ್ಕೋಡಿ, ವೀರೇಶ ಹೂಗಾರ, ಹಡಲಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಹಣಮಂತ ತಳ್ಳಿಕೇರಿ, ರಮೇಶ ಬಿರಾದಾರ, ಗುತ್ತಿಗೆದಾರ ಯಲ್ಲಪ್ಪ ಚಲವಾದಿ,ರಮೇಶ ಬಿರಾದಾರ,ಉಪಾಧ್ಯಕ್ಷ ಅಬ್ದುಲರಜಾಕ ಮಕಾಶಿ,ಚಂದು ಕರೇಕಲ್, ಹಡಲಗೇರಿ ಗ್ರಾಪಂ ಸಿಬ್ಬಂದಿಗಳಾದ ಆದೇಪ್ಪ ನೆರಬೆಂಚಿ, ವೆಂಕಟೇಶ ಭಜಂತ್ರಿ ಸೇರಿದಂತೆ ಉಪಸ್ಥಿತರಿದ್ದರು.