ಇಂಡಿ :ಅಕ್ಷರ ದಾಸೋಹಿ ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳ ೧೨೪ನೇ ಜಯಂತೋತ್ಸವ ಅಂಗವಾಗಿ ಗ್ರಾಮದ ಉದ್ದಗಲಕ್ಕೂ ಶಿವಯೋಗಿಗಳ ಭಾವಚಿತ್ರ ಅದ್ದೂರಿ ಹಾಗೂ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು.
ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ, ಸಂಗನಬಸವೇಶ್ವರ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ, ವೃಷಭಲಿಂಗೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕ ಅಪ್ಪಣ್ಣ ಕಲ್ಲೂರ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ತದನಂತರ ಮೆರವಣಿಗೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಹತ್ತಿರದ ಬಂಥನಾಳ ಶಿವಯೋಗಿಗಳ ಶಿಲಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ನಂತರ ವೀರಕ್ತ ಮಠ, ಹನುಮಾನ ಮಂದಿರ, ಮಹಾಲಕ್ಷಿö್ಮ ದೇವಸ್ಥಾನ ಮಾರ್ಗ, ಇನ್ನಿತರ ಬಡಾವಣೆಗಳಲ್ಲಿ ಈ ಭವ್ಯ ಮೆರವಣಿಗೆ ನಡೆಸಲಾಯಿತು. ಯುವಕರು ಮೆರವಣಿಗೆ ಉದ್ದಕ್ಕೂ ಪಟಾಕ್ಷಿ ಸಿಡಿಸಿ, ಜಯ ಘೋಷಣೆ ಹಾಕಿ ಸಂಭ್ರಮಿಸಿದರು. ಈ ಮೆರವಣಿಗೆ ಮರಳಿ ಮೂಲ ಸ್ಥಳಕ್ಕೆ ಬರುತ್ತಿದ್ದಂತೆ ಭಕ್ತರ ಸಂಭ್ರಮ ಮಗಿಲು ಮುಟ್ಟಿತು.
ಸಂಗನಬಸವೇಶ್ವರ ಪ್ರೌಢ ಶಾಲೆ, ಎಸ್.ಎಸ್.ಪಿಯು ಕಾಲೇಜ್, ವೃಷಭಲಿಂಗೇಶ್ವರ ಕಿರಿಯ ಪ್ರಾಥಮಿಕ ಶಾಲೆ, ಎಸ್.ಆರ್. ಮಾಳಗೆ ಪದವಿ ಕಾಲೇಜ್, ಕೈಗಾರಿಕ ತರಬೇತಿ ಸಂಸ್ಥೆ ಮತ್ತು ವಿವಿಧ ಶಾಲಾ ಮಕ್ಕಳು, ಮೆರವಣ ಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣ ಗೆಯಲ್ಲಿ ಜೆ.ಎಸ್.ಹತ್ತಳ್ಳಿ, ಅಶೋಕ ಕುಲಕಣ ð, ಮಲ್ಲಿಕಾರ್ಜುನ ಕೇಮಶೆಟ್ಟಿ, ಮಲಕಪ್ಪ ಸೋಮನಿಂಗ, ಎಸ್.ಎಸ್.ಕನ್ನಳ, ಎಸ್.ಡಿ. ಭಂಟನೂರ, ಜೆ.ಆರ್. ಪೂಜಾರಿ, ಪಿ.ಬಿ.ಕಾಡಯ್ಯನಮಠ ಹಾಗೂ ಪಾಲ್ಗೊಂಡಿದ್ದರು.
ತಾಂಬಾ ಅಕ್ಷರ ದಾಸೋಹಿ ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳ ೧೨೪ನೇ ಜಯಂತೋತ್ಸವ ಅಂಗವಾಗಿ ಗ್ರಾಮದ ಸಂಗನಬಸವೇಶ್ವರ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಸಂಘದ ನಿರ್ದೇಶಕ ಅಪ್ಪಣ್ಣ ಕಲ್ಲೂರ ಮೆರವಣಗೆಗೆ ಚಾಲನೆ ನೀಡಿದರು.