ಇಂಡಿ : ರಾಜ್ಯದ 224 ಮತ ಕ್ಷೇತ್ರದಲ್ಲಿಯೂ ಸಹ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಮಾರ್ಪಾಟಾಗಿದೆ ಎಂದು ಪಕ್ಷದ ಮುಖಂಡ ಬೋಗೆಶ್ ಸೋಲಾಪುರ ತಿಳಿಸಿದರು.
ಭಾನುವಾರ ರಂದು ಪಟ್ಟಣದ ಸಿಂದಗಿ ರಸ್ತೆಯ ಶಾಂತೇಶ್ವರ ಮಂಗಲಕಾರ್ಯದಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಹಮ್ಮಿಕೊಂಡ 2023ರ ಇಂಡಿ ವಿಧಾನಸಭಾ ಮತಕ್ಷೇತ್ರದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಆಮ್ ಅದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ರವರು ಮೊದಲಿಗೆ ದೆಹಲಿಯಲ್ಲಿ ಪಕ್ಷವನ್ನು ಗಟ್ಟಿಗೊಳಿಸಿ ದೆಹಲಿಯ ಮುಖ್ಯಮಂತ್ರಿಯಾಗಿ, ಜನರಿಗೆ ನೀರು, ವಿದ್ಯುತ್, ಶಿಕ್ಷಣ ಆರೋಗ್ಯ ಸೇರಿದಂತೆ ಮಹಿಳೆಯರಿಗೆ ಸಾರಿಗೆ ವ್ಯವಸ್ಥೆ ಸಹ ಉಚಿತವಾಗಿ ನೀಡಿದ್ದಾರೆ. ಇದಲ್ಲದೆ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ದೆಹಲಿಯ ಜನರ ಮನ ಗೆದ್ದ ಪರಿಣಾಮ ಈಗ ಪಂಜಾಬ್ ನಲ್ಲಿಯೂ ಸಹ 117 ರಲ್ಲಿ 92 ಅಭ್ಯರ್ಥಿಗಳು ಆಮ್ ಆದ್ಮಿ ಪಕ್ಷದಿಂದ ಜಯಭೇರಿಯಾಗಿ ಪಂಜಾಬ್ ನ ಮುಖ್ಯಮಂತ್ರಿ ಸಹ ಆಮ್ ಆದ್ಮಿ ಪಕ್ಷದವರೇ ಆಗಿದ್ದಾರೆ.
ಕೇಜರಿ ವಾಲ್ ಅವರ ಆಡಳಿತಕ್ಕೆ ಮನಸೋತ ದೇಶದ ಜನರು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಇಂಡಿ ವಿಧಾನಸಭಾ ಕ್ಷೇತ್ರದಿಂದಲೂ ಸಹ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದು ಈಗಾಗಲೇ ತಾಲೂಕಿನ ಬಹುತೇಕ ಗ್ರಾಮಗಳಿಗೆ ಪಕ್ಷದ ಸೇವಕಾಂಕ್ಷಿಗಳು ಭೇಟಿ ನೀಡಿ ಪಕ್ಷದ ಪ್ರಚಾರ ನಡೆಸಿದ್ದಾರೆ.
ಸೇವಾಕಾಂಕ್ಷಿ ಜಕ್ಕಪ್ಪ ಕುಂಬಾರ, ಡಾ. ಗೋಪಾಲ್ ಪಾಟೀಲ್, ಮುಖಂಡ ಶ್ರೀಮಂತ ಬಾರಿಕಾಯಿ, ರಾಜೇಶ್ವರಿ ಮೋರೆ, ಜಗದೀಶ್ ಕಲ್ಮನಿ, ಇನ್ನಿತರರು ಮಾತನಾಡಿದರು.