ಇಂಡಿ: ತಾಲೂಕಿನಲ್ಲಿ ಹರಿಯುವ ಭೀಮಾ ನದಿಗೆ ಮಹಾರಾಷ್ಟçದ ಜಲಾಶಯಗಳಿಂದ ಒಂದು ಲಕ್ಷ ಐದು ಸಾವಿರ ಕ್ಯೂಸೆಕ್ ನೀರು ಹರಿಯ ಬಿಡಲಾಗಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ತಿಳಿಸಿದ್ದಾರೆ.

ಭೀಮಾ ನದಿಯ ಉಜನಿ ಜಲಾಶಯದಿಂದ ೯೦ ಸಾವಿರ ಕ್ಯೂಸೆಕ್ ಮತ್ತು ನೀರಾ ನದಿಯ ವೀರ ಭಟಕರ ಜಲಾಶಯದಿಂದ ೧೫ ಸಾವಿರ ಕ್ಯೂಸೆಕ್ ಎರಡು ಸೇರಿ ಪಂಡರಪೂರ ಹತ್ತಿರದ ಸಂಗಮದಿAದ ಕರ್ನಾಕಟದಲ್ಲಿ ಹರಿಯುವ ಬೀಮಾ ನದಿ ಪಾತ್ರಕ್ಕೆ ಒಂದು ಲಕ್ಷ ಐದು ಸಾವಿರ ಕ್ಯೂಸೆಕ್ ನೀರು ಕರ್ನಾಟಕದ ಭೀಮಾ ನದಿ ಪಾತ್ರದಲ್ಲಿದೆ.
ಆದರೂ ಮಹಾರಾಷ್ಟçದ ಭೀಮಾ ನದಿ ಪಾತ್ರದಲ್ಲಿ ಮಳೆ ಕಡಿಮೆಯಾಗಿದ್ದು ಯಾವದೇ ಆತಂಕವಿಲ್ಲ ಎಂದು ತಿಳಿಸಿದ್ದಾರೆ.
ಕಾರಣ ಸಾರ್ವಜನಿಕರು ನದಿ ಪಾತ್ರಕ್ಕೆ ಹೋಗುವದನ್ನು ತಪ್ಪಿಸಬೇಕು. ಪ್ರಾಣಿಗಳನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಬೇಕು. ಕೃಷಿ ಉಪಕರಣಗಳು ಪಂಪ್ ಗಳು ಪೈಪುಗಳು ಮತ್ತು ಇತರೆ ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ, ಚಿಕ್ಕ ಮಕ್ಕಳು ಮತ್ತು ಹಿರಿಯರು ನದಿಯ ದಂಡೆಗೆ ಹೋಗದಂತೆ ಎಚ್ಚರ ವಹಿಸಲು ಗುರುಸ್ವಾಮಿ ತಿಳಿಸಿದ್ದಾರೆ.
ಈ ನೀರು ೨ ರಂದು ರವಿವಾರ ಬೆಳಗ್ಗೆ ೮ ಗಂಟೆಗೆ ಬಿಟ್ಟಿದ್ದು ಅದು ಸೋಮವಾರ ಬೆಳಗ್ಗೆ ವರೆಗೆ ತಾಲೂಕಿನ ಎಲ್ಲ ನದಿ ಪಾತ್ರದಲ್ಲಿ ಹರಿಯಲಿದೆ.
ಈ ಮಧ್ಯೆ ಮಣೂರ ಯಲ್ಲಮ್ಮ ದೇವಸ್ಥಾನಕ್ಕೆ ನೀರು ಇನ್ನೂ ಬ್ರಿಜ್ ಮೇಲೆ ಬಂದಿರುವದಿಲ್ಲ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.



















