• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚರಂಡಿ ಸ್ವಚ್ಛಗೊಳಿಸಿ, ಅನಧಿಕೃತ ಕಟ್ಟಡ ತೆರವುಗೊಳಿಸಿ: ಪುರಸಭೆಗೆ ಇಂದಿರಾನಗರ ನಿವಾಸಿಗಳ ಆಗ್ರಹ

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

    ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

      ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

      ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

      ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

      ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

      ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

      ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

      ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

      ಚರಂಡಿ ಸ್ವಚ್ಛಗೊಳಿಸಿ, ಅನಧಿಕೃತ ಕಟ್ಟಡ ತೆರವುಗೊಳಿಸಿ: ಪುರಸಭೆಗೆ ಇಂದಿರಾನಗರ ನಿವಾಸಿಗಳ ಆಗ್ರಹ

      ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

      ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

      ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

      ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

      ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

      ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

      3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

      3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

      ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

      ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ರಾಜ್ಯ

      ಗೊಂದಲಗಳಿಗೆ ತೆರೆ ಎಳೆದು ನೈಜ ಇತಿಹಾಸ ಅರಿಯಿರಿ: ತಳವಾರ ಸಮಾಜದ ಮುಖಂಡರ ಕರೆ

      Voiceofjanata.in

      August 2, 2026
      0
      ಗೊಂದಲಗಳಿಗೆ ತೆರೆ ಎಳೆದು ನೈಜ ಇತಿಹಾಸ ಅರಿಯಿರಿ: ತಳವಾರ ಸಮಾಜದ ಮುಖಂಡರ ಕರೆ
      0
      SHARES
      0
      VIEWS
      Share on FacebookShare on TwitterShare on whatsappShare on telegramShare on Mail

      ಗೊಂದಲಗಳಿಗೆ ತೆರೆ ಎಳೆದು ನೈಜ ಇತಿಹಾಸ ಅರಿಯಿರಿ: ತಳವಾರ ಸಮಾಜದ ಮುಖಂಡರ ಕರೆ

       

      ತಳವಾರ ಸಮಾಜದ ವೈಭವಯುತ ಇತಿಹಾಸ ಯುವಪೀಳಿಗೆಗೆ ತಿಳಿಯಲಿ: ಜಾಗೃತಿ ಸಭೆಯಲ್ಲಿ ಕರೆ

       

      ತಳವಾರ ಸಮಾಜದ ಬಗ್ಗೆ ಸುಳ್ಳು ಪ್ರಚಾರಕ್ಕೆ ಕಿವಿಗೊಡಬೇಡಿ: ರಾಜು ಮೆಟಗಾರ ಎಚ್ಚರಿಕೆ

       

      ಡಿಜಿಟಲ್ ಯುಗದಲ್ಲೂ ತಳವಾರ ಸಮಾಜದ ಜನರು ಊಹಾಪೋಹಗಳಿಗೆ ತೆಲೆಬಾಗದೆ ತಳವಾರ ಸಮಾಜದ ಬಗ್ಗೆ ನೈಜತೆ ಅರಿತು ನಡೆಯಬೇಕು. ಅದಲ್ಲದೆ ತನ್ನ ಹೆಜ್ಜೆ ಗುರುತು ಅಳಿಸಲು ಅವಕಾಶ ನೀಡದೆ ಅದನ್ನು ಮರು ಸೃಷ್ಟಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಸಮಾಜದ ಪ್ರತಿಕವಾಗಿರುವ ತಳವಾರ ವೃತ್ತವನ್ನು ನಿರ್ಮಿಸುವ ಕೆಲಸ ಮಾಡಬೇಕು ಎಂದು ತಳವಾರ ಸಮಾಜದ ತಾಲೂಕು ಅಧ್ಯಕ್ಷ ರಾಜು ಮೆಟಗಾರ ಹೇಳಿದರು.

      ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಳವಾರ ಸಮಾಜದ ಜಾಗೃತಿ ಸಭೆಯಲ್ಲಿ ಮಾತನಾಡಿದರು.

      ತಳವಾರ ಸಮಾಜದಲ್ಲಿ ಕೆಲ ಕಿಡೆಗೇಡಿಗಳು ದುರದ್ದೇಶದಿಂದಲೆ ಸಮಾಜಕ್ಕೆ ದಾರಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತುದ್ದಾರೆ.‌ಅದಲ್ಲದೆ ತಪ್ಪು ಮಾಹಿತಿ ಹೇಳುತ್ತಾ ಬೇರೆ ಬೇರೆ ಜಾತಿಗಳಲ್ಲಿ ಸೇರ್ಪಡೆಗೊಳಿಸಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ತಳವಾರ ಸಮಾಜಕ್ಕೆ ತನ್ನದೇ ಆದ ವೈಭವಯುತ ಇತಿಹಾಸವಿದ್ದು, ಅದರ ಬಗ್ಗೆ ಅರಿವಿಲ್ಲದ ಕೆಲವರು ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಮಾಜದ ಜನರು, ವಿಶೇಷವಾಗಿ ಯುವಕರು, ತಳವಾರ ಸಮಾಜದ ನೈಜ ಇತಿಹಾಸವನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ ಎಂದು ಹೇಳಿದರು.

      ಇನ್ನೂ ಇದೆ ಸಂದರ್ಭದಲ್ಲಿ ಮುಖಂಡ ಸಾಯಬಣ್ಣ ಬಾಗೇವಾಡಿ ಹಾಗೂ ಶಂಕರ್ ಜಮಾದಾರ ಮಾತನಾಡಿದ ಅವರು, ಸಮಾಜ ಇನ್ನೂ ಮೂಢನಂಬಿಕೆಯ ಕತ್ತಲೆಯಿಂದ ಸಂಪೂರ್ಣ ಹೊರಬರಬೇಕಿದ್ದು, ಶಿಕ್ಷಣ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹೊಸ ಹೆಜ್ಜೆ ಇಡಬೇಕಾಗಿದೆ ಎಂದು ಹೇಳಿದರು.

      ಉದ್ದೇಶಪೂರ್ವಕವಾಗಿ ಕೆಲವರು ಸಮಾಜದ ಬಗ್ಗೆ ತಪ್ಪು ಕಲ್ಪನೆಗಳನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಗೊಂದಲಗಳಿಗೆ ಕಿವಿಗೊಡದೆ ಸಮಾಜದ ನೈಜ ಇತಿಹಾಸವನ್ನು ಅಧ್ಯಯನ ಮಾಡಿ ಅರಿತುಕೊಳ್ಳುವಂತೆ ಅವರು ಕರೆ ನೀಡಿದರು. ಪುರಾತನ ಕಾಲದಿಂದಲೂ ತಳವಾರ ಸಮಾಜದವರು ಕೋಟೆ-ಕೊತ್ತಲುಗಳ ಹಾಗೂ ಗ್ರಾಮಗಳ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಿ, ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಇತಿಹಾಸ ನಿರ್ಮಿಸಿದ್ದಾರೆ ಎಂದು ಹೇಳಿದರು.
      ಮಧ್ಯಕಾಲೀನ ಹಾಗೂ ಆಧುನಿಕ ಭಾರತದ ಇತಿಹಾಸದಲ್ಲಿ ತಳವಾರರು ಸರ್ಕಾರದ ಪ್ರತಿನಿಧಿಗಳಾಗಿ, ಗ್ರಾಮ ರಕ್ಷಕರು ಹಾಗೂ ಗ್ರಾಮ ಪೊಲೀಸ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಶೌರ್ಯ ಪ್ರದರ್ಶಿಸಿದ ಅನೇಕ ತಳವಾರರಿಗೆ ‘ನಾಯಕ’ ಪಟ್ಟ ದೊರೆತು ಪಾಳೇಗಾರರ ಹುದ್ದೆಗೂ ಏರಿದ ಉದಾಹರಣೆಗಳಿವೆ ಎಂದು ತಿಳಿಸಿದರು.

      ಪಾಳೇಗಾರರ ಆಡಳಿತದಲ್ಲಿ ಕಪ್ಪ ವಸೂಲಿ, ಊರ ಗಡಿ ಕಾಯುವುದು ಸೇರಿದಂತೆ ಗ್ರಾಮ ಭದ್ರತೆಯ ಹೊಣೆಗಾರಿಕೆ ತಳವಾರರದ್ದಾಗಿತ್ತು. ಉತ್ತರ ಕರ್ನಾಟಕದಲ್ಲಿ ‘ತಳವಾರ’, ಮಧ್ಯ ಕರ್ನಾಟಕದಲ್ಲಿ ‘ನಾಯಕ ಬೇಡ’ ಹಾಗೂ ಹಳೆ ಮೈಸೂರು ಭಾಗದಲ್ಲಿ ‘ವಾಲ್ಮೀಕಿ’ ಎಂಬ ಹೆಸರುಗಳು ಹೆಚ್ಚು ಬಳಕೆಯಲ್ಲಿವೆ ಎಂದು ವಿವರಿಸಿದರು.

      1884ರ ಬಿಜಾಪುರ ಜಿಲ್ಲಾ ಗೆಜೆಟಿಯರ್ನಲ್ಲಿ ತಳವಾರರನ್ನು ಗ್ರಾಮ ಕಾವಲುಗಾರರು (Village Watchmen) ಎಂದು ದಾಖಲಿಸಲಾಗಿದೆ. ಆದಿಲ್‌ಶಾಹಿ ಕಾಲದ ವತನ ಪತ್ರಗಳು, ಇನಾಮು ದಾಖಲೆಗಳು ಹಾಗೂ ಶಾಸನಗಳಲ್ಲಿ ತಳವಾರರ ಬಗ್ಗೆ ಉಲ್ಲೇಖಗಳಿದ್ದು, ಇವು ಸಮುದಾಯದ ಐತಿಹಾಸಿಕ ಹಿನ್ನೆಲೆಗೆ ಸಾಕ್ಷಿಯಾಗಿವೆ ಎಂದು ಹೇಳಿದರು.

      ಸ್ವಾತಂತ್ರ್ಯಪೂರ್ವದಲ್ಲಿ ಗ್ರಾಮಗಳಲ್ಲಿ ಬೀದಿ ದೀಪ ಹಚ್ಚುವುದು, ಕಳ್ಳರನ್ನು ಹಿಡಿಯುವುದು, ಗ್ರಾಮದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ತಳವಾರರು ನಿರ್ವಹಿಸುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಪರಂಪರೆಯಂತೆ ಇಂದಿಗೂ ದಸರಾ ಸಂದರ್ಭದಲ್ಲಿ ಬನ್ನಿ ಮರವನ್ನು ಖಡ್ಗದಿಂದ ಕತ್ತರಿಸುವ ಸಂಪ್ರದಾಯವನ್ನು ಅನೇಕ ಗ್ರಾಮಗಳಲ್ಲಿ ತಳವಾರ ಸಮುದಾಯದವರು ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.

      ತಳವಾರ ಸಮಾಜದ ವೈಭವಯುತ ಇತಿಹಾಸವನ್ನು ಯುವಪೀಳಿಗೆ ಅಧ್ಯಯನ ಮಾಡಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಅವರು ಕರೆ ನೀಡಿದರು.

      ಈ ಸಂದರ್ಭದಲ್ಲಿ ಟಿಎಸ್ ಎಸ್ ಅಧ್ಯಕ್ಷ, ಸೋಮು‌ ಜಮಾದಾರ, ಅಖಿಲ‌ ಕರ್ನಾಟಕ ನಾಯಕ ತಳವಾರ ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ವಿಜಯಕುಮಾರ್ ಸಾಲೋಡಗಿ, ರಮೇಶ್ ದಳವಾಯಿ,ರಾಜು ರೋಡಗಿ, ಅವಿನಾಶ ಯಂಕಂಚಿ, ಆಕಾಶ ಬೂದಿಹಾಳ, ಮಲ್ಲು ಬಿಬಿ ಇಂಗಳಗಿ, ಚಂದ್ರು ಅಲ್ಲಾಪುರ,ಪ್ರಭು ನಾಟೀಕಾರ, ಚಂದ್ರು ಡೊಂಗ್ರೊಜ್ ಸೇರಿದಂತೆ ಅನೇಕರು ಇದ್ದರು.

       

       

      Tags: #indi / vijayapur#Public News#Put an end to confusion and understand the true history: Call by Talwara community leaders.#State News#Today News#Voice Of Janata#Voiceofjanata.in#ಗೊಂದಲಗಳಿಗೆ ತೆರೆ ಎಳೆದು ನೈಜ ಇತಿಹಾಸ ಅರಿಯಿರಿ: ತಳವಾರ ಸಮಾಜದ ಮುಖಂಡರ ಕರೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಗೊಂದಲಗಳಿಗೆ ತೆರೆ ಎಳೆದು ನೈಜ ಇತಿಹಾಸ ಅರಿಯಿರಿ: ತಳವಾರ ಸಮಾಜದ ಮುಖಂಡರ ಕರೆ

      ಗೊಂದಲಗಳಿಗೆ ತೆರೆ ಎಳೆದು ನೈಜ ಇತಿಹಾಸ ಅರಿಯಿರಿ: ತಳವಾರ ಸಮಾಜದ ಮುಖಂಡರ ಕರೆ

      August 2, 2026
      ಗ್ರಾಮ ಲೆಕ್ಕಾಧಿಕಾರಿ ಸಿದ್ಧರಾಮ ಕುಂಬಾರರಿಗೆ ಜಿಲ್ಲಾ ಮಟ್ಟದ ‘ಸೇವಾ ವಿಭೂಷಣ ಪ್ರಶಸ್ತಿ ಪ್ರಧಾನ

      ಗ್ರಾಮ ಲೆಕ್ಕಾಧಿಕಾರಿ ಸಿದ್ಧರಾಮ ಕುಂಬಾರರಿಗೆ ಜಿಲ್ಲಾ ಮಟ್ಟದ ‘ಸೇವಾ ವಿಭೂಷಣ ಪ್ರಶಸ್ತಿ ಪ್ರಧಾನ

      July 29, 2026
      ಸಾಲದ ಹೊರೆ ತಾಳಲಾರದೆ ಹಿಂಚಗೇರಾದಲ್ಲಿ ಯುವ ರೈತ ಆತ್ಮಹತ್ಯೆ

      ಸಾಲದ ಹೊರೆ ತಾಳಲಾರದೆ ಹಿಂಚಗೇರಾದಲ್ಲಿ ಯುವ ರೈತ ಆತ್ಮಹತ್ಯೆ

      July 26, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.