ಕಾಂಗ್ರೆಸ್ ಪಕ್ಷದ ಗ್ಯಾರಂಟಿ ದೇಶಕ್ಕೆ ಮಾದರಿ
ಅಫಜಲಪುರ:ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಜಮಾದಾರ ತಿಳಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಗ್ಯಾರಂಟಿ ಯೋಜನೆಗಳಿಂದ ಲಾಭ ಪಡೆದುಕೊಂಡ ಫಲಾನುಭವಿಗಳ ಯಶೋಗಾಥೆಯನ್ನು ಸಿದ್ಧಪಡಿಸಿ ಕಳುಹಿಸಬೇಕು.ನಮ್ಮ ರಾಜ್ಯ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಇಡೀ ದೇಶವೇ ಅನುಸರಿಸುತ್ತಿರುವುದು ನಮಗೆ ಹೆಮ್ಮೆಯಿದೆ.ಅನುಷ್ಠಾನ ಸಮಿತಿ ಸದಸ್ಯರು ಗ್ಯಾರಂಟಿ ಯೋಜನೆಗಳು ಕುರಿತು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ತಾಪಂ ಇಒ ಶಂಕರ ರಾಠೋಡ ಮಾತನಾಡಿ,ಯುವನಿಧಿ ಮತ್ತು ಗೃಹಲಕ್ಷ್ಮಿ ಹಣಕ್ಕೆ ಕೆವೈಸಿ ತೊಂದರೆಯಿದ್ದು, ಅದನ್ನು ಪರಿಹರಿಸಬೇಕು. ಗ್ರಾಪಂ, ಕೆಕೆಆರ್ಟಿಸಿ, ಜೆಸ್ಕಾಂ ಕಚೇರಿಗಳಲ್ಲಿ ಸಭೆ ಮಾಡಿ ಸೌಲಭ್ಯ ಪಡೆಯಲು ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ದತ್ತಪ್ಪ ಘಾಣೂರ, ರಾಜಕುಮಾರ ಬಬಲಾದ, ಗಾಲೀಬ ಮುಜಾವರ,ಪ್ರವೀಣ ಕಲ್ಲೂರ,ಬಿಸ್ಮಿಲ್ಲಾ ಶಹಜಾನ,ದುಂಡು ಜಮಾದಾರ,ತಾಲೂಕಾ ಯೋಜನಾ ಅಧಿಕಾರಿ ರೇಣುಕಾ ಶಂಕರ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ಪ್ರವೀಣ ಹೇರೂರ,ಜೆಸ್ಕಾಂ ಎಇಇಗಳಾದ ನಾಗರಾಜ.ಕೆ,ಖೈಮುದ್ದಿನ, ಆಹಾರ ಇಲಾಖೆ ಅಧಿಕಾರಿ ಭಾರತಿ ಪಾಟೀಲ,ಕೆಕೆಆರ್ಟಿಸಿ ಅಧಿಕಾರಿ ರವಿ ನಾಯ್ಕೋಡಿ, ಯುವಜನ ಮತ್ತು ಕ್ರೀಡಾ ಇಲಾಖೆ ಶರಣಪ್ಪ ಇತರರಿದ್ದರು.



















