“ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ” ಇಂಡಿ ಕೈ ಶಾಸಕ ಪರ ಹುಚ್ಚಪ್ಪ ತಳವಾರ ಗುಡುಗು
ಇಂಡಿ: ತಾಲ್ಲೂಕಿನ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ತಾಲೂಕಿನ ಮುಖಂಡ ಹುಚ್ಚಪ್ಪ ತಳವಾರ ತೀವ್ರವಾಗಿ ತಿರುಗೇಟು ನೀಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹುಚ್ಚಪ್ಪ ತಳವಾರ, “ಇವತ್ತು ಕೆಲವು ಜಾಣರು ಕ್ಷೇತ್ರದ ಉದ್ದಗಲೂ ಗೊತ್ತು ಇಲ್ಲದೆ ಇರುವವರು ಶಾಸಕರ ವಿರುದ್ಧ ಹೇಳಿಕೆ ನೀಡಿದ್ದು ಹಾಸ್ಯಾಸ್ಪದ ಎನ್ನಬಹುದು. ಬಹುಷಃ ಈ ತಾಲ್ಲೂಕಿನ ಬಗ್ಗೆ ಈ ಕ್ಷೇತ್ರದ ಜನರ ನಾಡಿ ಮಿಡಿತ ಅರಿತವರು ಅದು ಕೇವಲ ಹ್ಯಾಟ್ರಿಕ್ ಗೆಲುವು ಸಾಧಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಮಾತ್ರ.ಸುಮ್ಮ ಸುಮ್ಮನೆ ಆರೋಪ ಮಾಡೊದು ಬೀಡಬೇಕು. ಮೊನ್ನೆ ಪ್ರಧಾನ ಮಂತ್ರಿ ಮೋದಿ ಅವರು ಹೇಳಿರುವ ವಿಚಾರ ಇಂದಿಗೂ ಸಾಮಾನ್ಯ ಜನರು ಚರ್ಚೆ ಮಾಡುತ್ತೀರುವ ಬಗ್ಗೆ ಗೊತ್ತಿಲ್ಲ ಅನ್ಸುತ್ತೆ.
“TP, ZP ಮೆಟ್ಟಿಲು ಹತ್ತಿ ಬಂದವರು” “ಇಂಡಿ ತಾಲ್ಲೂಕಿನ ರಾಜಕಾರಣವನ್ನ ಕಣ್ಣಾರೆ ನೋಡುತ್ತಾ TP, ZP ಎಂಬ ಒಂದೊಂದೇ ಮೆಟ್ಟಿಲು ಹತ್ತೂತ್ತಾ ಶಾಸಕರಾದವರು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಧ್ಯೇಯ ವಾಕ್ಯವನ್ನ ಕಾಯಕವನ್ನಾಗಿಸಿಕೊಂಡವರು” ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ : ಕೇಂದ್ರ ಸರ್ಕಾರ “ಈ ದೇಶವನ್ನ ಅಂಬಾನಿ ಮತ್ತು ಅದಾನಿ ಸಹೋದರರಿಗೆ ಮಾರಿಕೊಂಡು ಬಡವರ ಜೊತೆ ಆಟ ಆಡ್ತಾ ಇರೋರನ್ನ ವಿಶ್ವಗುರು ಅಂತ ಕರಿತಾ ಇದ್ದೀರಿ” ಎಂದು ಆರೋಪಿಸಿದರು.
“ಪ್ರತಿ ರಾಜ್ಯ ನಂ.1 ಮಾಡ್ತೀನಿ ಅಂತ ಯಾಮಾರಿಸ್ತಿದ್ದಾರೆ” : “ಪ್ರತಿ ರಾಜ್ಯಕ್ಕೆ ಹೋದ್ರೆ ಸಾಕು ಈ ರಾಜ್ಯ ನಂಬರ್ 01 ಮಾಡ್ತೀನಿ, ಆ ರಾಜ್ಯ ನಂಬರ್ 01 ಮಾಡ್ತೀನಿ ಅಂತ ಹೇಳಿ ಹೇಳಿ ದೇಶದ ಜನರನ್ನ ಯಾಮಾರಿಸ್ತಾ ಇದ್ದಾರೆ. ಯಾವ್ ರಾಜ್ಯ ದೇಶದ ನಂ.1 ಆಗಿದೆ ಹೇಳಿ ನೋಡೋಣ?” ಎಂದು ಸವಾಲು ಹಾಕಿದರು.
“70 ವರ್ಷದಲ್ಲಿ ಕಾಂಗ್ರೆಸ್ ಈ ದೇಶಕ್ಕೆ ನೀಡಿದ ಕೊಡುಗೆಗಳನ್ನ ಕೇವಲ 15 ವರ್ಷದಲ್ಲಿ ಹಾಳು ಮಾಡಿದ ಕೀರ್ತಿ ಪ್ರಧಾನ ಮಂತ್ರಿ ಮೋದಿ ಅವರಿಗೆ ಸಲ್ಲುತ್ತದೆ” ಎಂದು ಅವರು ದೂರಿದರು.
“ಅಬ್ ಕೀ ಬಾರ 400 ಪಾರ್ ಆಗಲಿಲ್ಲ“ : ಲೋಕಸಭೆ ಚುನಾವಣೆಯ “ಅಬ್ ಕೀ ಬಾರ 400 ಪಾರ್” ಘೋಷಣೆಯನ್ನು ನೆನಪಿಸಿದ ಅವರು, “ಆದ್ರೆ ಏನಾಯ್ತು? 250 ನೂ ಪಾರಾಗ್ಲಿಲ್ಲ. ಸನ್ಮಾನ್ಯ ಮೋದಿ ಅವರೇ, ಇವತ್ತು ಜನ ವಿಚಾರವಂತರಾಗಿದ್ದಾರೆ. ಮುಂದಿನ ದಿನಮಾನಗಳಲ್ಲಿ ಇನ್ನು ಹೆಚ್ಚಿನ ಪಾಠ ಕಲಿಸ್ತಾರೆ” ಎಂದು ಎಚ್ಚರಿಕೆ ನೀಡಿದರು.



















