ಜಗಜೀವನರಾಂ ಜಯಂತಿಯಲ್ಲಿ ಒಳಮೀಸಲಾತಿ ವಿಚಾರ ಕ್ಯಾಬಿನೆಟ್ ನಲ್ಲಿ ಚರ್ಚೆಗೆ ಒತ್ತಾಯ
ಅಫಜಲಪುರ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಡಾ. ಬಾಬು ಜಗಜೀವನರಾಂ ಅವರ ಜೀತ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.
ಈ ಕಾರ್ಯಕ್ರಮವು ಜಯಂತಿ ಆಚರಣೆಯ ಜೊತೆಗೆ ಒಳಮೀಸಲಾತಿ ಕುರಿತ ಚರ್ಚೆ ಕೂಡ ಕಂಡು ಬಂದಿದ್ದು ವಿಶೇಷವಾಗಿತ್ತು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂವೈ ಪಾಟೀಲ್ ಮಾತನಾಡಿ, ಡಾ. ಬಾಬು ಜಗಜೀವನರಾಂ ಅವರು ಈ ದೇಶದ ಅಮೂಲ್ಯ ರತ್ನವಾಗಿದ್ದು, ಶೋಷಿತ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಮಾದಿಗ ಸಮಾಜದ ಮುಖಂಡ ಶ್ರೀಕಾಂತ ಮಾಶಾಳಕರ ಅವರು ಮಾತನಾಡಿ ಪಟ್ಟಣದಲ್ಲಿ ಜಗಜೀವನರಾಂ ಅವರ ಪುತ್ಥಳಿ ಪ್ರತಿಷ್ಠಾಪನೆಗಾಗಿ ಸ್ಥಳ ಒದಗಿಸುವ ಬೇಡಿಕೆ ಇಟ್ಟರು ಇದಕ್ಕೆ ಅರುಣಕುಮಾರ ಪಾಟೀಲ ಮಾತನಾಡಿ ಶೀಘ್ರದಲ್ಲೇ ಶಾಸಕರ ಗಮನಕ್ಕೆ ತಂದು ಮೂರ್ತಿ ಸ್ಥಾಪನೆ ಹಾಗೂ ಸಮುದಾಯ ಭವನ ನಿರ್ಮಾಣ ಕುರಿತು ಈಡೇರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಪರುಶುರಾಮ ಮಾತನಾಡಿ ಒಳಮೀಸಲಾತಿ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿ, ಮುಂದಿನ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲು ಶಾಸಕರು ಧ್ವನಿ ಎತ್ತಬೇಕು ಎಂದು ಅರುಣ ಪಾಟೀಲ್ ಅವರಿಗೆ ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಅರುಣಕುಮಾರ ಪಾಟೀಲ ಈ ಕುರಿತು ಶಾಸಕರ ಗಮನಕ್ಕೆ ತಂದು ವಿಶೇಷ ಕ್ಯಾಬಿನೆಟ್ ನಲ್ಲಿ ಚರ್ಚೆಸುವಂತೆ ಹೇಳಲಾಗುವುದು ಎಂದರು.
ಕಾರ್ಯಕ್ರಮದ ನೇತೃತ್ವ
ವಹಿಸಿದ ತಹಸೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ಡಾ. ಬಾಬು ಜಗಜೀವನರಾಂ ಅವರು ಮಹಾತ್ಮ ಗಾಂಧಿ ಅವರಿಂದ ಪ್ರೇರಣೆ ಪಡೆದು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮಹಾನ್ ನಾಯಕರು ಎಂದು ಹೇಳಿದರು.
.ಪಶುಸಂಗೋಪನಾ ಇಲಾಖೆ ಅಧಿಕಾರಿ ಎಚ್.ಎಂ. ಕೊಟೆ ಮಾತನಾಡಿ, ಶೋಷಿತ ಜನರ ಹಕ್ಕುಗಳಿಗಾಗಿ ಹಾಗೂ ಅನಿಷ್ಠ ಪದ್ಧತಿಗಳ ವಿರುದ್ಧ ಡಾ. ಬಾಬು ಜಗಜೀವನರಾಂ ಅವರು ನಡೆಸಿದ ಹೋರಾಟ ಇಂದಿಗೂ ಪ್ರಸ್ತುತವಾಗಿದ್ದು, ಸಮಾಜಕ್ಕೆ ದಿಕ್ಕು ತೋರಿಸುವಂತದ್ದು ಎಂದು ಹೇಳಿದರು.
ಬಂಡಾಯ ಸಾಹಿತಿ ಬಿ.ಎಂ. ರಾವ ಮಾತನಾಡಿ, ಡಾ. ಜಗಜೀವನರಾಂ ಅವರು ಕೇವಲ ರಾಜಕಾರಣಿಯಷ್ಟೇ ಅಲ್ಲ, ಸಾಮಾಜಿಕ ಕ್ರಾಂತಿಯ ಶಿಲ್ಪಿಯಾಗಿದ್ದರು ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ರಮೇಶ ಪೂಜಾರಿ ವಿಶೇಷ ಉಪನ್ಯಾಸ ನೀಡಿ, ಡಾ. ಜಗಜೀವನರಾಂ ಅವರ ಬಾಲ್ಯ, ಶಿಕ್ಷಣ, ಸಾಮಾಜಿಕ ಹಾಗೂ ರಾಜಕೀಯ ಜೀವನದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣ ಕವಲಗಿ, ಕೃಷಿ ಇಲಾಖೆ ಅಧಿಕಾರಿ ಎಸ್.ಎಚ್. ಗಡಗಿಮನಿ, ಸಮಾಜ ಕಲ್ಯಾಣಾಧಿಕಾರಿ ಅಶೋಕ ನಾಯಕ, ಆರೋಗ್ಯ ಇಲಾಖೆ ಅಧಿಕಾರಿ ಚೇತನ ಹಾಗೂ ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಲಕ್ಷ್ಮೀಪುತ್ರ ಬಬಲಾದ ಸೇರಿದಂತೆ ಮುಖಂಡರಾದ ಭಾಗಣ್ಣ ಘತ್ತರಗಿ, ಶ್ರೀಕಾಂತ ಮಾಶಾಳಕರ್, ಶಿವಾನಂದ ಗಾಡಿಸಾಹುಕಾರ, ಮಾದಿಗ ಸಮಾಜದ ಮಾಜಿ ಅಧ್ಯಕ್ಷ ಗುಂಡಪ್ಪ ಕಾರಬೋಸಗಾ,ದತ್ತು ಘೂಳನೂರ, ಗುಂಡಪ್ಪ ಕಾರಬೋಸಗಾ, ಶರಣು ಕೇಸಾಪೂರ, ಕಾಳಪ್ಪ ಪೂಜಾರಿ ಹಿಂಚಗೇರಾ, ಚಂದ್ರಕಾಂತ ತೇಲಕರ್, ಚಂದಪ್ಪ ಕೆರಕನಳ್ಳಿ, ಭಾಗಣ್ಣ ಪಾಟೋಳಿ, ಸುನೀಲ ಕಟ್ಟಿಮನಿ, ಪರುಶರಾಂ ನಂದರ್ಗಿ, ಧರ್ಮಣ ಗಾಣಗಾಪೂರ,ಬಾಬು ಬೋಗನಳ್ಳಿ ಸೇರಿದಂತೆ ಅನೇಕರಿದ್ದರು.