ತಳವಾರರಿಗೆ ಪರಿಶಿಷ್ಟ ಪ್ರಮಾಣಪತ್ರಕ್ಕೆ ಒತ್ತಾಯ|ಅಫಜಲಪುರ ತಹಸೀಲ್ ಕಚೇರಿಗೆ ಮುತ್ತಿಗೆ
ಗ್ರೇಟ್-2 ತಹಶೀಲ್ದಾರ್ ಹಠಾವೋ ತಳವಾರ ಬಚಾವ್
ಅಫಜಲಪುರ:ಅನಾದಿ ಕಾಲದಿಂದಲೂ ಪ್ರಾಣದ ಹಂಗು ತೊರೆದು ಗ್ರಾಮಗಳಲ್ಲಿ ಗಸ್ತು ತಿರುಗಿ,ತಳವಾರಿಕೆ ಮಾಡುತ್ತಿದ್ದ ತಳವಾರ ಜನಾಂಗದವರನ್ನು ಪರಿಶಿಷ್ಟರ ಪಟ್ಟಿಯಿಂದ ಕೈಬಿಡುವ ಹುನ್ನಾರಗಳು ನಡೆಯುತ್ತಿವೆ ಎಂದು ಆರೋಪಿಸಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದಿಂದ ಹಲವಾರು ಕಾರ್ಯಕರ್ತರು ಬುಧುವಾರ ತಹಸೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಳವಾರ ಸಮಾಜದ ನೈಜ ಸದಸ್ಯರಿಗೆ ಯಾವುದೇ ಅಡಚಣೆ ಇಲ್ಲದೆ ಎಸ್.ಟಿ ಜಾತಿ ಪ್ರಮಾಣ ಪತ್ರ ನೀಡಬೇಕು.ಸರ್ಕಾರದ ಸ್ಪಷ್ಟ ಆದೇಶಗಳಿದ್ದರೂ ಸ್ಥಳೀಯ ಮಟ್ಟದಲ್ಲಿ ಅನಗತ್ಯ ಅಡಚಣೆ ಸೃಷ್ಟಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಅಫಜಲಪುರ ತಾಲೂಕಿನ ಗ್ರೇಡ್-2 ತಹಶೀಲ್ದಾರ್
ಶರಣಬಸಪ್ಪ ಅವರು ಸುಮಾರು ಒಂದು ವರ್ಷದಿಂದ ನೈಜ ತಳವಾರ ಜಾತಿಯ ಜನರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡದೆ ತಡೆ ಹಿಡಿದು ತೊಂದರೆ ಕೊಟ್ಟು ಅನೇಕ ಜನರ ಜೀವನ ಭವಿಷ್ಯವೇ ಹಾಳು ಮಾಡಿದ್ದಾರೆ.
ಇದರಿಂದ ನಮ್ಮ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತಳವಾರ ಮಕ್ಕಳಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಗಳು ನೀಡದೆ ಇರುವದರಿಂದ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ,ಉನ್ನತ ವಿದ್ಯಾಭ್ಯಾಸ ಮಾಡಲು ಪ್ರವೇಶ ಸಿಗುತ್ತಿಲ್ಲ,ಎಸ್.ಟಿ. ಮಿಸಲಾತಿ ಅಡಿಯಲ್ಲಿ ಸರಕಾರಿ ಸೌಲಭ್ಯಗಳು,ನೌಕರಿ ಪಡೆಯಲು ಆಗದೆ ನೌಕರಿಗಳಲ್ಲಿ ಮುಂಬಡ್ತಿಯು ಸಿಗದೆ ತೊಂದರೆಗೆ ಒಳಗಾಗಿ ಅವರ ಜೀವನ ಹಾಳಾಗುತ್ತಿದೆ.ತಳವಾರ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಗಳು ಇರದೆ ಇರುವದರಿಂದ ಅನೇಕ ರೈತರಿಗೆ,ಹಿರಿಯರಿಗೆ ಮಹಿಳೆಯರಿಗೆ,ಯುವಕರಿಗೆ, ವಿದ್ಯಾರ್ಥಿಗಳಿಗೆ ಸರಕಾರಿ ಸೌಲಭ್ಯಗಳು ಸಿಗದೆ ವಂಚಿತರಾಗಿದ್ದಾರೆ.ಇದಕ್ಕೆಲ್ಲಾ ಅಫಜಲಪೂರ ಗ್ರೇಡ್ 2 ತಹಸಿಲ್ದಾರ್ ನೇರವಾಗಿ ಕಾರಣರಾಗಿದ್ದಾರೆ ಇವರನ್ನು ಈ ಕೂಡಲೇ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂತೋಷ ತಳವಾರ, ರಾಜೇಂದ್ರ ರಾಜೋವಾಳ, ಶ್ರೀಕಾಂತ ದಿವಾಣಜಿ,ದತ್ತು ಶೀವಣಗಿ, ಗುರುನಾಥ್ ಹಾವನೂರ, ಬಸವರಾಜ ಜಮಾದಾರ, ಸಿದ್ದರಾಮ ಚಿಕ್ಕವಲಗಿ, ನಾಗರಾಜ್ ನಂದೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬ್ಲಾಕ್:ರಾತ್ರಿಯಾದರೂ ಮುಂದುವರೆದ ಪ್ರತಿಭಟನೆ
ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜದ ವತಿಯಿಂದ ಎಸ್.ಟಿ ಪ್ರಮಾಣಪತ್ರಕ್ಕಾಗಿ ಆಗ್ರಹಿಸಿ ನಡೆದ ಪ್ರತಿಭಟನಾಕಾರರು ನಮ್ಮ ತಾಳ್ಮೆ ಕಳೆದುಕೊಂಡಿದ್ದೇವೆ.ನಮಗೆ ಎಸ್.ಟಿ ಪ್ರಮಾಣ ಪತ್ರ ನೀಡುವವರೆಗೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದರು.ಸ್ಥಳಕ್ಕೆ ತಹಶೀಲ್ದಾರ್ ಸಂಜೀವಕುಮಾರ ದಾಸರ, ಡಿವೈಎಸ್ಪಿ ತಮ್ಮರಾಯ ಪಾಟೀಲ್,ಪಿಎಸ್ಐ ಸೋಮಲಿಂಗ ಒಡೆಯರ್ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು.


















