ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡ
ಇಂಡಿ: ತಾಲೂಕಿನ ಬರಗುಡಿ ಗ್ರಾಮದ ಹಜರತ ನಾಸೀರ ಜಂಗಸಾಹೇಬ ದರ್ಗಾ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಘದ ಅಡಿಯಲ್ಲಿ ನಡೆಯುತ್ತಿರುವ ಆಂಗ್ಲ ಮತ್ತು ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮಾರ್ಚ್ ೨೨, ರವಿವಾರದಂದು ಮಧ್ಯಾಹ್ನ ೩ ಗಂಟೆಗೆ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಉದ್ಘಾಟಿಸುವರು.ಸಾತಲಗಾಂವ ಪಿ ಐ ಸಿದ್ಧ ಸಂಸ್ಥಾನಮಠದ ಮದ್ದಾನಿ ಮಹಾರಾಜರು, ಬರಗುಡಿ ಹಜರತ ನಾಸೀರ ಜಂಗಸಾಹೇಬ ದರ್ಗಾದ ಸಜ್ಜಾದ್ ಎ ನಶೀನ್ ಮಹಿಬೂಬಸಾಹೇಬ್ ಇಂಗಳಗಿ, ನಂದ್ರಾಳದ ಬಾಬಡೇಸಾಬ್ ದರ್ಗಾ ಸಜ್ಜಾದ್ ಎ ನಶೀನ್ ರಸೂಲ ಖಾನ್ ಬಿರಾದಾರ ಸಾನಿಧ್ಯ ವಹಿಸುವರು. ಸಂಸ್ಥೆಯ ಉಪಾಧ್ಯಕ್ಷ ವೆಂಕಟೇಶ್ ಕುಲಕರ್ಣಿ ಅಧ್ಯಕ್ಷತೆ ವಹಿಸುವರು.ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಲ್ ಹಜ್ ಇಲಿಯಾಸ್ ಬೋರಾಮಣಿ,ವಿಜಯಪುರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ ಎ ಸೌದಾಗರ, ಬಿ ಎಲ್ ಡಿ ಇ ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಕ ಡಾ ಮಂಜುನಾಥ ಕೋಟೆಣ್ಣವವರ,ವಿಜಯಪುರ ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಅಭಿಯಂತರ ಸಂಜೀವ ಕೋಟೆಣ್ಣವವರ,ವಿಜಯಪುರದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿಶ್ರಾಂತ ಕಾರ್ಯಪಾಲಕ ಅಭಿಯಂತರ ಎಸ್ ಎಸ್ ಪಟ್ಟಣಶೆಟ್ಟಿ, ಅಹಿರಸಂಗ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಸನ ಶೇಖ, ಬ್ಲಾಕ್ ಕಾಂಗ್ರೆಸ್ ಕಮೀಟಿ ಮಾಜಿ ಅಧ್ಯಕ್ಷ ಕಲ್ಲನಗೌಡ ಬಿರಾದಾರ, ಕಲಬುರಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಆಶಾಪುರ, ಇಂಡಿ ಬಿ ಇ ಓ ಶ್ರೀಮತಿ ಸೈಯಿದಾ ಅನೀಸ್ ಮುಜಾವರ, ಇಂಡಿ ನಗರಸಭೆ ಆಯುಕ್ತ ಶಿವಾನಂದ ಪೂಜಾರಿ, ಬಸವನ ಬಾಗೇವಾಡಿ ಪುರಸಭೆಯ ಕಂದಾಯ ಅಧಿಕಾರಿ ಎಸ್ ಐ ರೇವೂರಕರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ, ಮುಖ್ಯಾಧ್ಯಾಪಕ ನಿಜಣ್ಣ ಕಾಳೆ, ಇಂಡಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಎಸ್ ವ್ಹಿ ಹರಳಯ್ಯ, ಪ್ರಥಮ ದರ್ಜೆ ಗುತ್ತಿಗೆದಾರರಾದ ಚಂದ್ರಶೇಖರ ಇಂಡಿ, ಬಿ ಎಸ್ ಬಿರಾದಾರ, ನಾಗಣ್ಣಗೌಡ ಚೌಧರಿ, ಆರ್ ಡಿ ಕಿತ್ತೂರ, ಅಪ್ಪಾರಾಯಗೌಡ ಬಿರಾದಾರ, ಮುಖ್ಯ ಶಿಕ್ಷಕ ಎಸ್ ಬಿ ಪಾಟೀಲ,ಧುರೀಣರಾದ ಸೋಮನಿಂಗ ಪಾಟೀಲ, ಹುಸೇನಸಾಬ ಪಟೇಲ, ವಿಶ್ರಾಂತ ಮುಖ್ಯೋಪಾಧ್ಯಾಯ ಹುಸೇನಸಾಬ ಬಿರಾದಾರ,ವಿಶ್ರಾಂತ ಶಿಕ್ಷಕ ಎಂ.ವ್ಹಿ. ಬಗಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸಂಸ್ಥೆಯ ಉಪಾಧ್ಯಕ್ಷ ವೆಂಕಟೇಶ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















