ಯಶವಂತರಾಯಗೌಡರಿಂದ ಅಧಿವೇಶನದಲ್ಲಿ ಇಂಡಿ ಜಿಲ್ಲಾ ಮಾಡುವ ಕುರಿತು ಮಾರ್ಧನಿಸಿದ ಧ್ವನಿ
ಜಿಲ್ಲೆಗಾಗಿ ವಿಧಾನ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರ ಮಾತು ಏನು..?
ಇಂಡಿ : ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಇಂಡಿ ಜಿಲ್ಲೆಯ ಕುರಿತು ಪ್ರತಿಧ್ವನಿಸಿ ದೊಡ್ಡ ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ಹೊಸ ಜಿಲ್ಲೆಗಳನ್ನು ರಚಿಸುವ ಪ್ರಸ್ತಾವನೆ ಸರ್ಕಾರ ಮುಂದಿದೆಯೇ ? ಇದ್ದರೆ ಯಾವ ಯಾವ ಜಿಲ್ಲೆಗಳ ರಚನೆಗೆ ಪ್ರಸ್ತಾವನೆ ಬಂದಿವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಕಂದಾಯ ಸಚಿವರಿಗೆ ಪ್ರಶ್ನಿಸಿದರು.
ಹೊಸದಾಗಿ ಜಿಲ್ಲೆಗಳನ್ನು ರಚಿಸಲು ನಿರ್ಧಿಷ್ಟ ಮಾನದಂಡಗಳನ್ನು ರಚಿಸಿಲ್ಲ. ಯಾವುದೇ ಪ್ರದೇಶ ತಾಲೂಕನ್ನು ಜಿಲ್ಲೆಯನ್ನಾಗಿ ರಚಿಸುವ ಸಂಧರ್ಬದಲ್ಲಿ ಅಲ್ಲಿನ ಭೂಗೋಳಿಕ ಹಿನ್ನೆಲೆ ಜನಸಂಖ್ಯೆ, ಹೊಸ ಜಿಲ್ಲೆಯಿಂದಾಗುವ ಅನುಕೂಲ ಸಾರ್ವಜನಿಕ ಆಶೋತ್ತರಗಳಿಗೆ ಸ್ಪಂದನೆ,ತಾಲೂಕಾ ಕೇಂದ್ರ ಜಿಲ್ಲಾ ಕೇಂದ್ರಗಳಿರಿರುವ ದೂರ ಸೇರಿದಂತೆ ಸಾರ್ವಜನಿಕ ಹಿತಾಶಕ್ತಿ ಮತ್ತು ಆಡಳಿತಾತ್ಮಕ ಅಂಶಗಳನ್ನು ಪರಾಮರ್ಶಿಸಲಾಗುತ್ತದೆ.ಇದರ ಜೊತೆ ನೂತನ ಜಿಲ್ಲೆಗಳನ್ನು ರಚಿಸುವ ವಿಷಯವು ಸರಾಕಾರದ ಸಾಮಾನ್ಯ ನೀತಿಗೆ ಸಂಬAದಿಸಿದಾಗಿದೆ. ಯಾವುದೇ ತಾಲೂಕು ಪ್ರದೇಶವನ್ನು ಜಿಲ್ಲೆಯನ್ನಾಗಿ ರಚಿಸಬೇಕಾದರೆ ಭೊಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯತೆ ಜೊತೆ ರಾಜ್ಯದ ಆರ್ಥಿಕ ಪರಸ್ಥಿತಿ ಸಹ ಅವಲಂಭಿಸಿದ್ದು. ಸಂಪನ್ನೂಲ ಕ್ರೋಢೀಕರಣ ಮತ್ತು ಹಣಕಾಸಿನ ಇತಿಮಿತಿ ಒಳಗೊಂಡಿರುತ್ತದೆ. ಬೆಳಗಾವಿ ಜಿಲ್ಲೆ ಚಿಕ್ಕೊಡಿ ಬೈಲಹೊಂಗಲ ,ಗೋಕಾಕ, ವಿಜಯಪೂರ ಜಿಲ್ಲೆಯ ಇಂಡಿ, ತುಮಕೂರ ಜಿಲ್ಲೆಯ ಮಧುಗೀರಿ, ತಿಪಟೂರ, ಶಿರಾ, ಉತ್ತರ ಕನ್ನಡ ಜಿಲ್ಲೆಯ ಶಿರಶಿಇನ್ನೂ ಅನೇಕ ತಾಲೂಕುಗಳನ್ನು ಜಿಲ್ಲೆಯಾಗಿಸುವ ಸರಕಾರದಲ್ಲಿ ಕೋರಿಕೆಗಳು ಸ್ವೀಕೃತವಾಗಿವೆ. ಆದರೆ ಹೊಸದಾಗಿ ಜಿಲ್ಲೆಗಳನ್ನು ರಚಿಸಲು ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಂದ ಯಾವುದೇ ಪ್ರಸ್ತಾವನೆ ಸ್ವೀಕೃತವಾಗಿರುವುದಿಲ್ಲ ಎಂದು ಕಂದಾಯ ಸಚಿವರು ಶಾಸಕರ ಪ್ರಶ್ನೆಗೆ ಉತ್ತರಿಸಿದರು.
ಹಾಗಾದರೆ ವಿಜಯಪೂರ ಜಿಲ್ಲೆಯು ಭೊಗೋಳಿಕ ಅತ್ಯಂತ ದೊಡ್ಡ ಜಿಲ್ಲೆ ೧೩ತಾಲೂಕುಗಳನ್ನು ಹೊಂದಿರುವದು ಎಂದು ಶಾಸಕ ಯಶವಂತರಾಯಗೌಡ ತಿಳಿಸಿದರು. ಶಾಸಕ ಪಾಟೀಲರು ಇಂಡಿ ಸಿಂದಗಿ ,ದೇವರಹಿಪ್ಪರಗಿ ,ಆಲಮೇಲ ,ಚಡಚಣ ದೂರದ ವಿಜಯಪೂರ ಜಿಲ್ಲಾಕೇಂದ್ರಕ್ಕೆ ಕೆಲಸ ಕಾರ್ಯಗಳಿಗೆ ಸಾರ್ವಜನಿಕರಿಗೆ ತೊಂದರೆಯಾಗುವದು. ಇಂಡಿ ೫೦ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದೆ. ಜಿಲ್ಲಾ ಕೇಂದ್ರಕ್ಕೆ ಬೇಕಾದ ಮಾನದಂಡಗಳು ಬೇಕಾದ ಅರ್ಹತೆ ಹೊಂದಿರುವ ಇಂಡಿ ನಗರ . ಇಂಡಿ, ಚಡಚಣ, ಸಿಂದಗಿ,ದೇವರಹಿಪ್ಪರಗಿ, ಆಲಮೇಲ ಸೇರಿ ಜಿಲ್ಲೆ ಮಾಡುವುದರಿಂದ ಅನುಕೂಲವಾಗುವದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸಚಿವರಿಗೆ ವಿನಂತಿಸಿದರು. ಇದಕ್ಕೆ ಸಚಿವರು ಉತ್ತರಿಸಿ ಜಿಲ್ಲೆಯಾಗುವ ಎಲ್ಲಾ ವಿಷಯಗಳು ಗಮನಕ್ಕೆ ಬಂದಿದೆ. ಇಂಡಿ ಜಿಲ್ಲೆಯಾಗುವ ಕೋರಿಕೆ ಸರಕಾರ ಸ್ವೀಕೃತಮಾಡಿದೆ ಪ್ರಾದೇಶಿಕ ಆಯುಕ್ತ ಬೆಳಗಾವಿ ಜಿಲ್ಲೆ ಇವರಿಗೆ ಪತ್ರಬರೆಯಲಾಗಿದೆ. ಅವರಿಂದ ಪ್ರಸ್ತಾವನೆ ಸ್ವೀಕೃತವಾಗಿರುವುದಿಲ್ಲ ಎಂದರು. ಇಂಡಿ ಜಿಲ್ಲೆಯನ್ನಾಗಿ ಮಾಡುವ ಪ್ರಸ್ತಾವನೆ ಯಾವ ಹಂತದಲ್ಲಿದೆ ಎಂದು ಮತ್ತೆ ಶಾಸಕ ಪಾಟೀಲ ಪ್ರಶ್ನಿಸಿದರು. ಜಿಲ್ಲೆಯ ಬಗ್ಗೆ ಸರಕಾರ ತಾತ್ವೀಕ ನಿರ್ಣಯ ಕೈಗೊಂಡಿದೆ ಹೊಸದಾಗಿ ಜಿಲ್ಲೆಗಳನ್ನು ರಚಿಸುವ ಕುರಿತು ತಾತ್ವೀಕ ನಿರ್ಣಯ ಕೈಗೊಂಡಲ್ಲಿ ಇಂತಹ ಪ್ರಸ್ತಾವನೆ ಪರಿಶೀಲನೆ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಮುಂದಿನ ದಿನಮಾನಗಳಲ್ಲಿ ರಾಜ್ಯದಲ್ಲಿ ಹೊಸದಾಗಿ ಜಿಲ್ಲೆಗಳನ್ನು ರಚನೆ ಮಾಡುವಾಗ ವಿಜಯಪೂರ ಜಿಲ್ಲೆ ವಿಭಜಿಸಿ ಇಂಡಿ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಶಾಸಕ ಯಶವಂತರಾಯಗೌಡ ವಿನಂತಿಸಿದರು. ೨೦೨೬ನೇ ಸಾಲಿನಲ್ಲಿ ಜನಗಣತಿ ನಡೆಸಲು ಕೇಂದ್ರ ಸರಕಾರ ಉದ್ದೇಶಿಸಿದ್ದು ದಿನಾಂಕ ೦೧-೦೧ ೨೦೨೬ ರಿಂದ ದಿನಾಂಕ೩೧-೦೩-೨೦೨೭ ರವರೆಗೆ ಆಡಳಿತಾತ್ಮಕ ಗಡಿಗಳನ್ನು ಬದಲಾವಣೆ ಮಾಡದಂತೆ ಕೇಂದ್ರ ಸರಕಾರವು ರಾಜ್ಯಕ್ಕೆ ಸೂಚನೆ ನೀಡಿರುತ್ತದೆ. ಆದ್ದರಿಂದ್ದ ಸರಕಾರವು ಪ್ರಸ್ತುತ ಹೊಸ ಜಿಲ್ಲೆಗಳ ರಚನೆ ಯಾವುದೇ ತಾತ್ವಿಕ ನಿರ್ಣಯ ಕೈಗೊಂಡಿರುವುದಿಲ್ಲ ಎಂದು ಸಚಿವರು ಶಾಸಕರ ಪ್ರಶ್ನೆಗೆ ಉತ್ತರಿಸಿದರು.
ಶಾಸಕ ಯಶವಂತರಾಯಗೌಡ ಪಾಟೀಲ ಭಾವಚಿತ್ರ.



















