ಸಕ್ಕರೆ ಸೇವನೆ ಕೊಲೆಸ್ಟಾçಲ ಏರಿಕೆ ಕಿಡ್ನಿ ಸಮಸ್ಯೆಗೆ ಕಾರಣ
ಇಂಡಿ : ಧುಮಪಾನ, ಅಧಿಕ ಸಕ್ಕರೆ ಸೇವನೆ, ಅಧಿಕ ಉಪ್ಪಿನಾಂಶ ಆಹಾರ ಸೇವನೆ ಜಡ ಜೀವನಶೈಲಿ, ಅಧಿಕ ರಕ್ತದೊತ್ತಡ, ಕೊಲೆಸ್ಟಾçಲಗಳ ಗಣನೀಯ ಏರಿಕೆ ಕಿಡ್ನಿ ಸಮಸ್ಯೆಗೆ ಪ್ರಮುಖ ಕಾರಣ ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ|| ರಾಜೇಶ ಕೋಳೆಕರ ಹೇಳಿದರು.
ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಕಿಡ್ನಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ರಾಮಕೃಷ್ಣ ಇಂಗಳೆ ಮಾತನಾಡಿ ನಾವು ಹೃದಯ ಸೇರಿದಂತೆ ಇತರೆಲ್ಲ ಅಂಗಾAಗಗಳ ಬಗ್ಗೆ ಕಾಳಜಿ ತೋರುತ್ತೇವೆ. ಕಿಡ್ನಿಯ ಆರೋಗ್ಯ ನಿರ್ಲಕ್ಷಿಸುತ್ತೇವೆ. ಅದರಂತೆ ಕಿಡ್ನಿಯ ದಾನದ ಬಗ್ಗೆಯೂ ತಿಳುವಳಿಕೆ ಹೊಂದಿರಬೇಕು ಮತ್ತು ಆ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಡಾ. ಸಂತೋಷ ಪವಾರ , ಡಾ|| ರವಿ ಭತಗುಣಕಿ, ಚಿದಾನಂದ ಅರಗೆ, ಹನುಮಂತಗೌಡ ಪಾಟೀಲ, ಪ್ರವೀಣ ಮಾಡಕರ, ರಾಜು ನಾಯಕ, ಮಲ್ಲಿಕಾರ್ಜುನ ಸಿಂಗೆ, ಶ್ರೀ ಕೃಷ್ಣ ಸಲಗೊಂಡ, ಆನಂದ ಮಠ, ಪುಂಡಲೀಕ ಹೊಸಮನಿ, ಪುಟ್ಟು ಮೆಡೆದಾರ, ಬಾಗೇಶ ತಳವಾರ, ಸಂದೀಪ ಚವ್ಹಾಣ, ಶಾಂತು ಹೊಸಮನಿ, ಸಚೀನ ಹರಿಜನ ಮತ್ತಿತರಿದ್ದರು.
ಇಂಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಕಿಡ್ನಿ ದಿನಾಚರಣೆಯಲ್ಲಿ ಡಾ|| ರಾಜೇಶ ಕೋಳೆಕರ ಮಾತನಾಡಿದರು.



















