ಜಿತೋ ಮಹಿಳಾ ವಿಭಾಗದ ವತಿಯಿಂದ ಕ್ಯಾನ್ಸರ್ ರೋಗ ಜಾಗೃತಿಗಾಗಿ ಕಾರ್ ಜಾಥಾ
ವಿಜಯಪುರ : ವಿಜಯಪುರದ ಜಿತೋ ಮಹಿಳಾ ವಿಭಾಗದ ವತಿಯಿಂದ ಕ್ಯಾನ್ಸರ್ ರೋಗ ಜಾಗೃತಿಗಾಗಿ ಕಾರ್ ಜಾಥಾ ನಡೆಸಲಾಯಿತು. ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ದೃಷ್ಟಿಯಿಂದ ಈ ವಿಶೇಷ ಜಾಥಾ ನಡೆಸಿದರು.
ನಗರದ ಜೈನಮಂದಿರದಿAದ ಆರಂಭಗೊAಡ ಕಾರ್ ಜಾಥಾ ಶ್ರೀ ಸಿದ್ದೇಶ್ವರ ದೇವಾಲಯ, ಗಾಂಧಿ ವೃತ್ತ, ವಾಟರ್ ಟ್ಯಾಂಕ್, ಶಿವಾಜಿ ವೃತ್ತ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಸ್ಪೂರ್ತಿ ಸಭಾಂಗಣಕ್ಕೆ ತಲುಪಿ ಸಂಪನ್ನಗೊAಡಿತು. ಸಂಘದ ಸದಸ್ಯೆಯರು, ವಿವಿಧ ಸಂಘ-ಸAಸ್ಥೆಗಳ ಪ್ರತಿನಿಧಿಗಳು, ವೈದ್ಯರು ಉತ್ಸಾಹದಿಂದ ಅದರಲ್ಲೂ ಕೆಂಪು ವರ್ಣದ ಉಡುಗೆಯಲ್ಲಿ ಭಾಗವಹಿಸಿದರು. ಕ್ಯಾನ್ಸರ್ ರೋಗ ತಡೆಗಟ್ಟುವ ವಿಧಾನ, ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಅಂಶಗಳ ಕುರಿತು ಭಿತ್ತಿ ಫಲಕಗಳನ್ನು ಸಹ ಪ್ರದರ್ಶಿಸಲಾಯಿತು.
ಈ ಕಾರ್ ರ್ಯಾಲಿಗೆ ಚಾಲನೆ ನೀಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಮಾತನಾಡಿ, ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲಿಯೂ ಸಾಧನೆಯ ನಗೆ ಬೀರಿದ್ದಾಳೆ, ವೈದ್ಯಕೀಯ, ವಿಜ್ಞಾನ, ಬಾಹ್ಯಾಕಾಶ ಹೀಗೆ ಎಲ್ಲ ರಂಗದಲ್ಲಿಯೂ ಸಾಧನೆ ತೋರಿದ್ದಾರೆ, ಒಬ್ಬ ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ ಸಮಾಜದಲ್ಲಿ ತನ್ನದೇ ಆದ ಮಹೋನ್ನತ ಪಾತ್ರ ನಿಭಾಯಿಸುವ ಸ್ತಿçà ಪೂಜ್ಯಳು ಎಂದರು. ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ದೃಷ್ಟಿಯಿಂದ ಕ್ಯಾನ್ಸರ್ ಜಾಗೃತಿ ಜಾಥಾ ಆಯೋಜಿಸಿರುವುದು ಅರ್ಥಪೂರ್ಣ ಎಂದರು.
ಈ ವೇಳೆ ಮಾತನಾಡಿದ ವೈದ್ಯೆ ಡಾ.ವಾಣಿ ಗಚ್ಚಿನಮಠ ಮಾತನಾಡಿ, ಕ್ಯಾನ್ಸರ್ ಬಗ್ಗೆ ಭಯ ಬೇಡ, ಕ್ಯಾನ್ಸರ್ ಬಗ್ಗೆ ಅರಿವು ಅಗತ್ಯ, ಪ್ರಾಥಮಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿದರೆ ಸಂಪೂರ್ಣವಾಗಿ ಅದನ್ನು ಗುಣಪಡಿಸಬಹುದು, ಆದರೆ ಅನೇಕರು ಕ್ಯಾನ್ಸರ್ ಎಂದಾಕ್ಷಣ ಭಯಪಡುತ್ತಾರೆ, ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ, ಇದು ಆಗಬಾರದು, ಆರಂಭದಲ್ಲಿಯೇ ವೈದ್ಯರ ಸಲಹೆ ಪಡೆದುಕೊಳ್ಳಬೇಕು, ಉತ್ತಮ ಜೀವನ ಶೈಲಿ ರೂಢಿಸಿಕೊಂಡು, ನಿಯಮಿತವಾದ ಆಹಾರ ಪದ್ಧತಿ ರೂಢಿಸಿಕೊಂಡರೆ ಅನೇಕ ರೋಗಗಳನ್ನು ಬಾರದಂತೆ ತಡೆಗಟ್ಟಬಹುದಾಗಿದೆ ಎಂದರು.
ಕಾನೂನು ತಜ್ಞೆ ಡಾ.ಉಜ್ವಲಾ ಸರನಾಡಗೌಡ, ಖ್ಯಾತ ವೈದ್ಯ ಡಾ.ಕಿರಣ ಓಸ್ವಾಲ್ ಮಾತನಾಡಿದರು. ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಮಹಾವೀರ ಪಾರೇಖ್ ಆಶಯನುಡಿಗಳನ್ನಾಡಿದರು. ಜಿತೋ ಚೇರಮನ್ ಧೀರಿಶ ಧರ್ಮದರ್ಶಿ, ಡಾ.ಅಶ್ವಿನಿ ಯಂಡಿಗೇರಿ,ಕಿರಣ್ ಸಂಕಲೇ ಚಾಸೋನಾಲಿ ಕೋಠಾರಿ ಸುಹಾಸಿನಿ ವಾರದ, ಡಾ.ಜ್ಯೋತಿ ಕೊರಬು, ಡಾ.ಅಥುಲ್ ಥೊಬ್ಬಿ, ಕಿರಣ ಸಂಕಲೇಚಾ, ಸೋನಾಲಿ ಕೋಠಾರಿ, ಶರ್ಮಿಳಾ ಓಸ್ವಾಲ್ ಮೊದಲಾದವರು ಪಾಲ್ಗೊಂಡಿದ್ದರು.


















