ಅಬ್ಬಬ್ಬಾ ಇಂಡಿಯಲ್ಲಿ ರಂಗಪಂಚಮಿ ಹೇಗೆ ಇತ್ತು ಗೊತ್ತಾ..?
ಇಂಡಿ: ರಂಗಪಂಚಮಿ ನಿಮಿತ್ಯ ನಗರ ಸೇರಿದಂತೆ ಎಲ್ಲ ಗ್ರಾಮಗಳಲ್ಲೂ ಯುವಕರು, ಮಹಿಳೆಯರು, ಪರಸ್ಪರ ಸಂಭ್ರಮದಿAದ ಬಣ್ಣ ಎರಚಿ ಸಡಗರದಿಂದ ರಂಗಪAಚಮಿ ಆಚರಿಸಿದರು.
ಬೆಳಿಗ್ಗೆ ೮ ಗಂಟೆಯಿAದಲೇ ಬಾಲಕರು, ಯುವಕರು ಬಣ್ಣ ಆಡಲು ಪ್ರಾರಂಭಿಸಿದರು. ನಂತರ ೧೧ ಗಂಟೆಗೆ ಹಿರಿಯರು, ಕಿರಿಯರು, ಎಲ್ಲರೂ ಸೇರಿ ಬಣ್ಣವನ್ನು ಆಡ ತೊಡಗಿದರು.ಅಣುಕು ಶವ ಯಾತ್ರೆ, ಜಾನಪದ ಹೋಳಿ ಹಾಡುಗಳು ಹಲಗೆ ಕುಣಿತ ಸೇರಿ ಅನೇಕ ಮನರಂಜನೆ ನಡೆದವು. ನಗರದ ಕೃಷಿ ಮಾರುಕಟ್ಟೆ, ಬಸ್ ನಿಲ್ದಾಣ, ಸಿಂದಗಿ, ವಿಜಯಪುರ ರಸ್ತೆ ಸೇರಿದಂತೆ ನಗರದ ಎಲ್ಲ ಕಡೆ ಬಣ್ಣ ಎರಚುವದು ಸಾಮಾನ್ಯವಾಗಿತ್ತು.
ಅನೇಕ ಕಡೆ ಬ್ಯಾರೆಲು ಬಕೇಟುಗಳಲ್ಲಿ ಬಣ್ಣ ಎರಚಿಸಿದರು. ಯುವಕರು ಮಕ್ಕಳು ಪಿಚಕಾರಿ ಮೂಲಕ ಬಣ್ಣ ಎರಚಿದರು. ಮುಖಕ್ಕೆ ಬಣ್ಣ ಹಚ್ಚುವದು ಎಲ್ಲ ಕಡೆ ಸಾಮಾನ್ಯವಾಗಿತ್ತು.
ಗಣ್ಯರಾದ ಕಾಸುಗೌಡ ಬಿರಾದಾರ, ಬಾಳು ಮುಳಜಿ, ಸುನೀಲಗೌಡ ಬಿರಾದಾರ, ಶಾಂತು ಕಂಬಾರ, ಸಂಜು ದಶವಂತ, ಮಲ್ಲು ಗುಡ್ಲ, ನಾಗು ದಶವಂತ, ಸೋಮು ನಿಂಬರಗಿಮಠ, ಪ್ರಕಾಶ ಈರೊಡಗಿ, ಪ್ರಕಾಶ ಲವಗಿ, ಅನೀಲ ಜೋಶಿ, ವೀರೇಂದ್ರ ಪಾಟೀಲ, ಎಸ್.ಆರ್. ಬಿರಾದಾರ, ಗಂಗಾಧರಗೌಡ ಪಾಟೀಲ ಸೇರಿದಂತೆ ಅನೇಕ ವೈದ್ಯರು, ವ್ಯಾಪಾರಿಗಳು ರೈತರು ಬಣ್ಣ ಆಡಿ ಸಂತೋಷ ಪಟ್ಟರು.
ಇಂಡಿ: ಪಟ್ಟಣದ ಎ.ಪಿ.ಎಂ.ಸಿ ಯಲ್ಲಿ ಬಣ್ಣ ಆಡುತ್ತಿರುವದು.



















