ಜಿಹಾದಿಗಳನ್ನು ದೇಶ ಬಿಟ್ಟು ಹೊರಹಾಕಬೇಕು : ಮೈಗೂರದ ಗುರುಪ್ರಸಾದ ಸ್ವಾಮೀಜಿ
ಇಂಡಿ: ಇಸ್ಲಾಂ ಧರ್ಮದವರು ಭಾರತದ ದೇಗುಲಗಳನ್ನು ನಾಶಪಡಿಸಿದೆ. ದೇಶದ ಮೇಲೆ ಸಾಕಷ್ಟು ಬಾರಿ ದಾಳಿ ನಡೆದಿದೆ. ಆದರೂ ನಮ್ಮ ಧರ್ಮ ಸಂಸ್ಕೃತಿ ಇನ್ನೂ ಉಳಿದಿದೆ. ಜಿಹಾದಿಗಳನ್ನು ದೇಶ ಬಿಟ್ಟು ಹೊರಹಾಕಬೇಕು. ಅಂದಾಗ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಮೈಗೂರದ ಗುರುಪ್ರಸಾದ ಸ್ವಾಮೀಜಿ ಹೇಳಿದರು.
ನಗರದ ಸಿಂದಗಿ ರಸ್ತೆಯ ಮಂಗಲ ಕಾರ್ಯಾಲಯ ಪಕ್ಕದ ಆವರಣದಲ್ಲಿ ಹಿಂದೂ ಸಮ್ಮೇಳನ ಸಂಚಲನಾ ಸಮೀತಿ-ಇಂಡಿ ನಗರ ವತಿಯಿಂದ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಸಲ್ಮಾನರು ಪವಿತ್ರ ರಂಜಾನ್ ತಿಂಗಳಿನಲ್ಲೂ ಸಹ ಶಿವಾಜಿ ಮಹಾರಾಜರ ಮೆರವಣಿಗೆಗೆ ಕಲ್ಲು ಒಗೆದಿದ್ದಾರೆ. ಬಾಗಲಕೋಟ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಗಣಪತಿ ಮೆರವಣಿಗೆಯಲ್ಲಿ ಕಲ್ಲು ತೂರಾಟ ಮಾಡಲಾಗಿದೆ. ನಾವೆಲ್ಲ ೧೦೦ ಕೋಟಿ ಹಿಂದೂಗಳು ಕಲ್ಲು ಒಗೆಯಲು ಪ್ರಾರಂಭಿಸಿದರೆ ಈ ದೇಶದಲ್ಲಿ ಒಂದೂ ಮಸೂತಿ ಉಳಿಯಲ್ಲ. ರಾಜ್ಯ ಸರಕಾರ ಆರ್.ಎಸ್.ಎಸ್. ಸಂಘದ ಪಥ ಸಂಚಲನ ಮಾಡಬಾರದು, ಸಂಘದ ಕಾರ್ಯ-ಕಲಾಪಗಳನ್ನು ಮುಜರಾಯಿ ಇಲಾಖೆಯ ದೇವಸ್ಥಾನಗಳ ಆವರಣದಲ್ಲಿ ನಡೆಸಬಾರದು ಎಂದು ಆದೇಶ ಹೊರಡಿಸಿದ್ದು ಖಂಡನೀಯ.
ಸAಘದವರು ಯಾರ ಮೇಲೂ ಕಲ್ಲು ಒಗೆದಿಲ್ಲ, ಒಬ್ಬರಿಗೂ ಕ್ರೂರತೆಯಿಂದ ನಡೆದುಕೊಂಡಿಲ್ಲ. ಅಂತಹ ಸಂಘಟನೆಗೆ ಅಡ್ಡಿಪಡಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮಹಿಳೆಯರು ಹಿಂದೂ ಸಮಾವೇಶಗಳಲ್ಲಿ ಹೆಚ್ಚು-ಹೆಚ್ಚು ಭಾಗವಹಿಸಬೇಕು. ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳಬೇಕು.
ವೀರ ಸಂತ-ಸನ್ಯಾಸಿ, ವೀರ ಯೋಧರಂತೆ ನಮ್ಮ ಮಕ್ಕಳನ್ನೂ ಬೆಳೆಸುವ ಕಾರ್ಯ ಮಾಡಬೇಕು ಎಂದರು.
ಭಾರತ ವಿಶ್ವಕ್ಕೆ ಸಂಸ್ಕೃತಿಯನ್ನು ಕಲಿಸಿದ ದೇಶ. ಜಾತಿ-ಮತ-ಪಂಥ ಎನ್ನದೇ ನಾವೆಲ್ಲ ಒಂದೇ ಎನ್ನುವ ವಿಚಾರ ನಮ್ಮದ್ದು, ಭಾರತ ನಾಲ್ಕು ವೇದಗಳನ್ನು ನೂರೆಂಟು ಉಪನಿಷತ್ತುಗಳು, ೧೮ ಪುರಾಣಗಳು, ರಾಮಾಯಣ, ಮಹಾಭಾರತ ಕಾವ್ಯಗಳು ಹತ್ತು ಸಾವಿರ ವರ್ಷಗಳ ಹಿಂದೆ ಜಗತ್ತಿಗೆ ನೀಡಿದೆ ಹೀಗಾಗಿ ಹಿಂದೂ ಧರ್ಮ ಅತೀ ಶ್ರೇಷ್ಠ ಧರ್ಮ ಎಂದರು.
ಹಿರೇಮಣೂರದ ಪಂ. ಸರ್ವೇಶ ಆಚಾರ್ಯರು ಅಕಮಂಚಿ ಮಾತನಾಡಿ, ಹಿಂದೂಗಳಾದ ನಾವೆಲ್ಲ ಮೊದಲು ನಮ್ಮನ್ನು ನಾವು ಸರಿ ಮಾಡಿಕೊಳ್ಳಬೇಕು. ಜಾತಿ-ಜಾತಿ ಎನ್ನದೇ ಮೊದಲು ನಾವೆಲ್ಲ ಹಿಂದೂ ಎನ್ನುವುದನ್ನು ಅರಿಯಬೇಕು. ಈ ಹಿಂದೆ ಆಗಿ ಹೋದ ದೇಶದ ಸ್ವಾತಂತ್ರೆö್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರನ್ನು ಒಂದೊAದು ಜಾತಿಗೆ ಸೀಮಿತ ಮಾಡಿಕೊಳ್ಳುತ್ತಿರುವುದು ನಮ್ಮ ದುರಂತ. ಹೀಗಾಗಿ ಜಾತಿ ಬಿಟ್ಟು ಧರ್ಮದ ಬಗ್ಗೆ ಕಾಳಜಿವಹಿಸಬೇಕು ಎಂದರು.
ಆಂದೋಲ ಕರುಣೇಶ್ವರಮಠದ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ರಾಮ ಮಂದಿರ ನಿರ್ಮಾಣಕ್ಕೆ ೫೦೦ ವರ್ಷ ಕಾಯಬೇಕಾಯಿತು. ೧೯೯೨ ರಲ್ಲಿ ಹಿಂದೂ ಯುವಕರು ಅಂದಾಜು ೬ ಲಕ್ಷ ಜನ ಅಯೋಧ್ಯೆಗೆ ಹೋಗಿ ಬಾಬ್ರೀ ಮಸೀದಿ ದ್ವಂಸ ಮಾಡಿತು. ಅಲ್ಲಿಂದ ನಿರಂತರ ಕಾನೂನು ಹೋರಾಟ ನಡೆಸಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಮೋದಿ ಹಾಗೂ ಉತ್ತರಪ್ರದೇಶದಲ್ಲಿ ಯೋಗಿ ಅವರ ದಿಟ್ಟ ನಿರ್ದಾರದಿಂದ ರಾಮ ಮಂದಿರ ನಿರ್ಮಾಣವಾಗಿದೆ ಎಂದರು.
ಆರ್ಎಸ್ಎಸ್ ನೂರು ವರ್ಷ ಪೂರೈಸಿದ ಪ್ರಯುಕ್ತ ಕಾರ್ಯಕ್ರಮ ಮಾಡಲು ಅಲ್ಲಿನ ಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲಿನ ನ್ಯಾಯಾಲಯ ಸಂಘದ ಕಾರ್ಯಕ್ರಮ ಮಾಡಲು ಅನುಮತಿ ನೀಡುವಂತೆ ಆದೇಶ ನೀಡಿತು. ಕಾರ್ಯಕ್ರಮ ಮಾಡಲಾಯಿತು.
ವಿಶ್ವದಲ್ಲಿ ಇಸ್ಲಾಂ ಒಂದೇ ಇರಬೇಕು ಎಂಬ ಭಾವನೆ ಹೊಂದಿದ್ದ ಇರಾನ್ ಸರ್ವಾಧಿಕಾರಿ ಅಮೇರಿಕ್ ಹಾಗೂ ಇಸ್ರೆಲ್ ದೇಶಗಳನ್ನು ಮುಗಿಸಲು ಪ್ರಯತ್ನ ಮಾಡುತ್ತಿದ್ದ, ಆ ಎರಡೂ ರಾಷ್ಟçಗಳಿಗೆ ಮಾಹಿತಿ ಗೊತ್ತಾಗಿ ಎರಡೂ ದೇಶಗಳು ಒಂದಾಗಿ ಇರಾನ್ ಸರ್ವಾಧಿಕಾರಿ ಖಮೇನಿಯನ್ನು ಮುಗಿಸಿದವು. ಖಮೇನಿ ಸಾವಿಗೆ ಇರಾನ್ ಮಹಿಳೆಯರು ಸಂತಸ ಪಟ್ಟರೆ ನಮ್ಮ ದೇಶದ ಮುಸ್ಲೀಂ ಮಹಿಳೆಯರು ಪ್ರತಿಭಟನೆ ನಡೆಸಿ ಮನೆ-ಮನೆಯಲ್ಲಿ ನೂರು ಖಮೇನಿಯನ್ನು ಹುಟ್ಟಿಸಿ ಕಳುಹಿಸುತ್ತೇವೆ ಎನ್ನುತ್ತಾರೆ. ಅಂತಹವರ ಮೇಲೆ ಕ್ರಮ ಯಾಕಿಲ್ಲ? ಎಂದು ಪ್ರಶ್ನಿಸಿದರು. ಇರಾನ್ ಮೇಲೆ ಕಾಳಜಿ ಮಾಡುವವರು ಖಮೇನಿಯನ್ನು ಗೌರವಿಸುವವರು ಇರಾನ್ಗೆ ಹೋಗಲಿ ಎಂದರು.
ಸತ್ಯಶೋಧನಾ ಸಮೀತಿ ಹೆಸರು ಹೇಳಿಕೊಂಡು ಹಿಂದೂ ಧರ್ಮದ ಮುಖಂಡರನ್ನು, ಹಿಂದೂ ಧರ್ಮವನ್ನು ನಾಶ ಮಾಡುವ ಕಾರ್ಯ ಮಾಡಲಾಗುತ್ತಿದೆ. ಅದಕ್ಕಾಗಿ ಆ ಸಮಿಯ ಸದಸ್ಯರನ್ನು ಪೊಲೀಸರು ಅರೆಸ್ಟ ಮಾಡಬೇಕು ಎಂದರು.
ಕರ್ನಾಟಕ ಉತ್ತರ ಪ್ರಾಂತ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಹಿಂದೂ ಧರ್ಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆವಹಿಸಿದ್ದ ಭೀಮಾಶಂಕರ ಮುರಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕಾಸುಗೌಡ ಬಿರಾದಾರ, ಜಗದೀಶ ಕ್ಷತ್ರಿ, ಸಂಗಣ್ಣ ಈರಾಬಟ್ಟಿ, ಜಗದೀಶ ಕ್ಷತ್ರಿ, ಮಲ್ಲು ಗುಡ್ಲ, ಸತೀಶ ಕುಂಬಾರ, ಯಮನಾಜಿ ಸಾಳುಂಕೆ, ಡಾ. ಲಕ್ಷಿö್ಮÃಕಾಂತ ಮೇತ್ರಿ, ವಿರಾಜ ಪಾಟೀಲ, ಅಜಿತ ಹಿರೇಮಠ, ಸಂತೋಶ ಗವಳಿ, ಸಂಜು ದಶವಂತ, ವಿಠ್ಠಲ ಕಂಬಾರ, ಸ್ವತಂತ್ರ ಸಿಂಧೆ, ನೇತಾಜಿ ಪವಾರ, ಪ್ರಕಾಶ ಬಿರಾದಾರ, ವಿವೇಕ ಹಂಜಗಿ, ಮಂಜು ತಮಶೆಟ್ಟಿ, ಸೋಮು ನಿಂಬರಗಿಮಠ, ಬಾಳು ಮುಳಜಿ, ಅನೀಲಗೌಡ ಬಿರಾದಾರ ಮತ್ತಿತರರು ಇದ್ದರು.
ಇಂಡಿ: ಸಿಂದಗಿ ರಸ್ತೆಯ ಮಂಗಲ ಕಾರ್ಯಾಲಯ ಪಕ್ಕದ ಆವರಣದಲ್ಲಿ ಹಿಂದೂ ಸಮ್ಮೇಳನ ಸಂಚಲನಾ ಸಮೀತಿ-ಇಂಡಿ ನಗರ ವತಿಯಿಂದ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.



















