ಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲ ರಿಂದ ಮಹತ್ವದ ಸುದ್ದಿಗೊಷ್ಠಿ
ಇಂಡಿ: ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಭೂ ಪರಿಹಾರ ನೀಡಲು ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಕ್ಕೆ ಅವರಿಗೆ ಅಭಿನಂದಿಸುವುದಾಗಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠೀಯನ್ನುದ್ದೇಶಿಸಿ ಮಾತನಾಡಿದರು. ಯುಕೆಪಿ – ೩ಅಡಿ ಭೂಸ್ವಾದೀನಕ್ಕೆ ಅಗತ್ಯವಾದ ೭೨ ಸಾವಿರ ಕೋಟಿ ರೂ ಪೈಕಿ ನಾಲ್ಕು ಕಂತುಗಳಲ್ಲಿ ಭರಿಸಿ ಇದೇ ಸರಕಾರದ ಅವಧಿಯಲ್ಲಿ ಪೂರ್ಣಗೋಳಿಸುವದಕ್ಕೆ ಪ್ರಕ್ರಿಯೆ ಆರಂಭಿಸಲು ಘೋಷಣೆ ಮಾಡಿದ್ದು ಸ್ವಾಗತಾರ್ಹ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ೩ ನೇ ಹಂತ ಅನುಷ್ಠಾನಗೊಳಿಸುವ ಸಂಬAದದಲ್ಲಿ ಆಲಮಟ್ಟಿ ಆಣೆಕಟ್ಟಿನ ಎತ್ತರವನ್ನು ೫೨೪ ಮೀ ಹೆಚ್ಚಿಸಿದಾಗ ಮುಳುಗಡೆಯಾಗುವ ಜಮೀನುಗಳಿಗೆ ಪರಿಹಾರ ನೀಡಲಾಗುವದು. ೪ ವರ್ಷದಲ್ಲಿ ಈ ಪ್ರಕ್ರಿಯೆ ಮೂರ್ಣಗೋಳಿಸಲು ತಿರ್ಮಾನಿಸಿರುವದು ಇದಕ್ಕಾಗಿ ಬಜೆಟಿನಲ್ಲಿ ಹಣ ಒದಗಿಸಿದ್ದಾರೆ.ನೀರಾವರಿ ಜಮೀನು ಇದ್ದರೆ ಒಂದು ಎಕರೆಗೆ ರೂ ೪೦ ಲಕ್ಷ ಮತ್ತು ನೀರಾವರಿ ಇಲ್ಲದ ಜಮೀನುಗಳಿಗೆ ರೂ ೩೦ ಲಕ್ಷ ರೂ ನೀಡಲು ಘೋಷಿಸಿದ್ದಾರೆ.
ಅದರಂತೆ ಚಿಮ್ಮಲಗಿ, ಮುಳವಾಡ, ರೇವಣಸಿದ್ದೇಶ್ವರ, ಇಂಡಿ ಬ್ರಾಂಚ್ ಕಾಲುವೆ ಇನ್ನಿತರ ನೀರಾವರಿಯೋಜನೆ ಗಳನ್ನು ಅನುಕೂಲವಾಗುತ್ತದೆ. ಇಂಡಿ ಭಾಗ ನೀರಾವರಿ ಯೋಜನೆಗೆ ಕೊನೆಯ ಭಾಗವಾಗಿರುವದರಿಂದ ಬೆಳಗಾವಿ ಅಧಿವೇಶನದಲ್ಲಿ ಎರಡು ಜಿಲ್ಲೆಯ ಜನ ಪ್ರತಿನಿಧಿಗಳು ವಿಧಾನ ಸಭೆಯಲ್ಲಿ ಒತ್ತಡ ತಂದು ಮುಖ್ಯಮಂತ್ರಿ ಮತ್ತು ನೀರಾವರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ವಿನಂತಿಸಿದ್ದೇವು ಎಂದರು.
ಅದರAತೆ ಚಡಚಣ ಗಾಣಗಾಪುರ ರಸ್ತೆ ಟೋಲ ಬೆಸ್ಡ ರಸ್ತೆ ಮಾಡಲು ಮಂಜೂರಾಗಿದೆ. ಇದರಿಂದ ಚಡಚಣ ಇಂಡಿ ಆಲಮೇಲ ಸಿಂದಗಿ ಆಪಝಲಪೂರ ಭಾಗದ ಜನರಿಗೆ ಪಂಡರಪೂರದಿAದ ಗಾಣಗಾಪುರಕ್ಕೆ ಹೋಗಲು ಅನುಕೂಲವಾಗುತ್ತದೆ ಎಂದರು. ೧೧೫ಕಿ ಮಿ ಈ ರಸ್ತೆಗೆ ರೂ ೫೦೦ ಕೋಟಿ ರೂ ಅನುದಾನ ನೀಡಿದ್ದಾರೆ ಸೇರಿದಂತೆ ಎರಡು ಹೆದ್ದಾರೆ ಮಂಜೂರಾತಿ ದೊರೆತಿದೆ ಎಂದರು.
ಗೋಳಸಾರ ಹತ್ತಿರ ಬ್ರಿಡ್ಸ ಕಮ್ ಬ್ಯಾರೇಜ ೬.೫ ಕೋಟಿ ರೂ, ,ಬಳ್ಳೊಳ್ಳಿ ಯಲ್ಲಿ ಬ್ಯಾರೇಜು ನಿರ್ಮಾಣಕ್ಕೆ ೪ ಕೋಟಿ ೪೦ ಲಕ್ಷ ರೂಪಾಯಿ ಬಜೆಟ್ನಲ್ಲಿ ಘೋಷಿಸಲಾಗಿದೆ ಎಂದರು.
ನಗರಕ್ಕೆ ಕುಡಿಯುವ ನೀರಿನ ತೊಂದರೆ ಯಾಗುವದನ್ನು ತಪ್ಪಿಸಲು ನೀರಾವರಿ ಪ್ರಧಾನಕಾರ್ಯದರ್ಶಿಗಳಿಗೆ ವಿನಂತಿಸಿ ಭೀಮಾ ನದಿಯಿಂದ ನೀರು ಪಡೆಯಲು ಯಶಸ್ವಿಯಾಗಿದ್ದೇವೆ ಎಂದರು.
ಇAಡಿ ನಗರಾಭಿವೃದ್ದಿ ಪ್ರಾಧಿಕಾರ ಮಾಡಿದ್ದು ಅಜೀತ ಧನಶೆಟ್ಟಿ ಇವರಿಗೆ ಅಧ್ಯಕ್ಷ ಮತ್ತು ಚನ್ನಪ್ಪ ಬೋಡಿ, ಅನೀಲ ಜೋಶಿ ಮತ್ತು ರವಿ ನಿಗಡಿ ಇವರಿಗೆ ಸದಸ್ಯರನ್ನಾಗಿ ಮಾಡಲಾಗಿದೆ ಎಂದರು.
ಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


















