ನಾಟಕಗಳಿಂದ ವ್ಯಕ್ತಿಗಳು ಪರಿವರ್ತನೆ ಗೊಂಡಿದ್ದಾರೆ
ಇಂಡಿ : ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ನಾಟಕಗಳು ಮನರಂಜನೆಯ ಮೂಲಗಳಾಗಿದ್ದವು. ಅವು ವ್ಯಕ್ತಿಗಳ ಪರಿವರ್ತನೆ ಮಾಡುತ್ತಿದ್ದವು. ಗಾಂಧಿಜಿಯವರು ಸತ್ಯ ಹರಿಶ್ಚಂದ್ರ ನಾಟಕ ನೋಡಿ ಜೀವನದಲ್ಲಿ ಪರಿವರ್ತನೆ ಕಂಡರು ಎಂದು ಕರವೇ ಅಧ್ಯಕ್ಷ ಬಾಳು ಮುಳಜಿ ಹೇಳಿದರು.
ತಾಲೂಕಿನ ಹಿರೇಮಸಳಿ ಗ್ರಾಮದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ೬೧ ನೇ ವರ್ಷದ ಮಲ್ಲಯ್ಯನ ಜಾತ್ರೆ ನಿಮಿತ್ಯ ಹಮ್ಮಿಕೊಂಡ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಟಕಗಳಲ್ಲಿ ನೈಜ ಕಲೆ ನೋಡಲು ಸಿಗುತ್ತದೆ. ನಾಟಕಗಳಲ್ಲಿ ಭಾಗವಹಿಸಿ ಅನೇಕರು ಸುಪ್ರಸಿದ್ದ ಚಲನಚಿತ್ರ ಕಲಾವಿಧರಾಗಿದ್ದಾರೆ ಎಂದರು.
ಸಿದ್ದು ಕಲ್ಲೂರ, ಗ್ರಾ.ಪಂ ಮಾಜಿ ಅಧ್ಯಕ್ಷ ಜಟ್ಟೆಪ್ಪ ಹುಲ್ಲೂರ, ಮನೋಜಗೌಡ ಪಾಟೀಲ, ರಮೇಶ ಕಲ್ಯಾಣಿ, ಚಿದಾನಂದ ಬಾವಿಕಟ್ಟಿ, ಈರಣ್ಣ ಮಾಶ್ಯಾಳ, ಅದೃಷಪ್ಪ ವಾಲಿ, ಮಲೇಶಗೌಡ ಪಾಟೀಲ, ಮಿಲಿಂದ ಹೊಸಮನಿ, ಶಿವು ಮಸಳಿ, ಹುಸ್ಮನಸಾಬ ಪ್ಯಾಟಿ, ದಯಾನಂದ ಪೂಜಾರಿ ಮತ್ತಿತರಿದ್ದರು.
ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಮಲ್ಲಯ್ಯನ ಜಾತ್ರೆ ನಿಮಿತ್ಯ ಹಮ್ಮಿಕೊಂಡ ನಾಟಕ ಕಾರ್ಯಕ್ರಮದಲ್ಲಿ ಬಾಳು ಮುಳಜಿ ಮಾತನಾಡಿದರು.



















