ಅಗ್ನಿಶಾಮಕ ಸೇವೆಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ
ಇಂಡಿ: ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸಮೀಪದಲ್ಲಿರುವ ಸರಕಾರಿ ಕೆಬಿಎಂಪಿಎಸ್ ಶಾಲೆಯಲ್ಲಿ ಸಂಭ್ರಮ ಶನಿವಾರ ಕಾರ್ಯಕ್ರಮದ ಪ್ರಯುಕ್ತ ಅಗ್ನಿಶಾಮಕ ಸೇವೆಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಪ್ರಮುಖರಾದ ಡಿ.ಬಿ. ಪೂಜಾರಿ ಮಾತನಾಡಿ, ಆಕಸ್ಮಿಕ ಬೆಂಕಿ ತಗುಲಿದ ಸಂದರ್ಭದಲ್ಲಿ ತುರ್ತು ಕ್ರಮವಾಗಿ ಅಗ್ನಿಶಾಮಕ ದಳದವರಿಗೆ ೧೦೧ ಅಥವಾ ೧೧೨ ಸಂಖ್ಯೆಗೆ ಕರೆ ಮಾಡಬೇಕು. ಬೆಂಕಿ ನಂದಿಸುವುದಷ್ಟೇ ನಮ್ಮ ಕಾರ್ಯವಲ್ಲ ಬದಲಾಗಿ ಕಟ್ಟಡ ಕುಸಿತ, ಪ್ರವಾಹ ಮತ್ತು ಪ್ರಾಣಿಗಳನ್ನು ರಕ್ಷಿಸುವ ಕಾರ್ಯಾಚರಣೆಗಳನ್ನು ಸಹ ಅಗ್ನಿಶಾಮಕ ದಳದಿಂದ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಗ್ನಿ ದುರಂತದಲ್ಲಿ ಸುರಕ್ಷತಾ ಕ್ರಮಗಳ ಕುರಿತು ಹಾಗೂ ಅಗ್ನಿ ನಂದಿಸುವ ಕುರಿತು ಪ್ರದರ್ಶನದ ಮುಖಾಂತರ ಮಕ್ಕಳಿಗೆ ಮನವರಿಕೆ ಮಾಡಿ ಕೊಡಲಾಯಿತು.
ಮಲ್ಲಿಕಾರ್ಜುನ ಗೋಟ್ಯಾಳ, ಉಮೇಶ ಹರಿಜನ, ಬಬಲು ಮಾಣಿಕ್ಭಾಯಿ ಸೇರಿದಂತೆ ಶಾಲಾ ಸಿಬ್ಬಂದಿಗಳಾದ ಎಸ್.ಬಿ. ವಡ್ಡರ, ಎ.ಬಿ. ದ್ಯಾಮಗೊಂಡ, ಎಸ್.ಎಸ್. ಬಿರಾದಾರ, ಸಿ.ಎಸ್. ಹಕಾರಿ, ಎಸ್. ಬಿ. ಕಲ್ಲೊಳ್ಳಿ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ:ನÀಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸಮೀಪದಲ್ಲಿರುವ ಸರಕಾರಿ ಕೆಬಿಎಂಪಿಎಸ್ ಶಾಲೆಯಲ್ಲಿ ಸಂಭ್ರಮ ಶನಿವಾರ ಕಾರ್ಯಕ್ರಮದ ಪ್ರಯುಕ್ತ ಅಗ್ನಿಶಾಮಕ ಸೇವೆಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.




















