ಕ್ಯಾಲಿಫೋರ್ನಿಯಾ ಕನಸು ಸಾಕಾರ: ವಿಜಯಪುರದಲ್ಲಿ ದ್ರಾಕ್ಷಿ ಕ್ರಾಂತಿ!
ವಿಜಯಪುರ : ಬೊಗಸೆ ನೀರು ಕೊಟ್ಟರೆ ವಿಜಯಪುರ ಜಿಲ್ಲೆ ಅಮೆರಿಕದ ಕ್ಯಾಲಿಫೋರ್ನಿಯಾ ರೀತಿ ಆಗುತ್ತದೆ’ ಎಂಬ ನಡೆದಾಡುವ ದೇವರು ಪೂಜ್ಯ ಸಿದ್ದೇಶ್ವರ ಶ್ರೀಗಳ ಮಾತು ನಿಜವಾಗುತ್ತಿದೆ…
ನೀರಾವರಿ ಹಾಗೂ, ಕೆರೆ ತುಂಬುವ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ವಿಜಯಪುರ ಜಿಲ್ಲೆ ಕರ್ನಾಟಕದ ದ್ರಾಕ್ಷಿ ರಾಜಧಾನಿ ಎಂಬ ಕೀರ್ತಿಗೆ ಪಾತ್ರವಾಗಿದೆ.
ಕನಮಡಿಯ ರೈತರಾದ ಶ್ರೀ ನಿಂಗು ಬಿರಾದಾರ ಹಾಗೂ ಶ್ರೀ ಗುರು ಬಿರಾದಾರ ಸಹೋದರರು ಈಚೆಗೆ ವಿಜಯಪುರದ ನಮ್ಮ ನಿವಾಸಕ್ಕೆ ಆಗಮಿಸಿ, ತಾವೇ ಬೆಳೆದ ದ್ರಾಕ್ಷಿಹಣ್ಣುಗಳನ್ನು ನೀಡಿ, ತಮ್ಮ ಯಶೋಗಾಥೆಯನ್ನು ವಿವರಿಸಿದರು.
3 ಎಕರೆಗಳಲ್ಲಿ ದ್ರಾಕ್ಷಿ ಬೆಳೆದು ರೂ.12 ರಿಂದ 15 ರಿಂದ ಲಕ್ಷ ಲಾಭದ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದರು. ಅವರ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದ ಸಾಧನೆ ಇನ್ನಷ್ಟು ಎತ್ತರ ತಲುಪಲಿ ಎಂದು ಹಾರೈಸುತ್ತೇನೆ.
ಇಂತಹ ಯಶೋಗಾಥೆಗಳು ಇತರ ರೈತರಿಗೆ ಸ್ಪೂರ್ತಿ ನೀಡುವುದರ ಜೊತೆಗೆ ನೀರಾವರಿ ಕ್ಷೇತ್ರದಲ್ಲಿ ನಮ್ಮ ಕಾಯಕ ಸಾರ್ಥಕತೆ ತಂದಿದೆ.


















