ಮುಂಬಯಿ ಉದ್ದಿಮೆದಾರರಿಂದ ಶಾಲೆಗೆ ಸ್ಮಾರ್ಟ ಬೋರ್ಡು ಪ್ರಾಜೆಕ್ಟ ವಿತರಣೆ
ಇಂಡಿ : ತಾಲೂಕಿನ ಭತಗುಣಕಿ ಗ್ರಾಮದ ಶ್ರೀಸಿದ್ದೇಶ್ವರ ಕನ್ನಡ ಹಿರಿಯ ಪ್ರಾಥಮಿ ಶಾಲೆಗೆ ಬಾಂಬೆ ಮಹಾನಗದ ಉದ್ದೀಮೆದಾರ ತಾಪಿದಾಸ್ ತುಳಸಿದಾಸ್ ವಜ್ರದಾಸ್ ಚಾರಿಟೇಬಲ್ ಟ್ರಸ್ಟ್ ಬಾಂಬೆ ಇವರು ಸ್ಮಾರ್ಟ ಬೋರ್ಡ ಹಾಗೂ ಪ್ರಾಜೇಕ್ಟ್ ನೀಡಿದರು.
ತಾಪಿದಾಸ ಮಾತನಾಡಿ ಭಗವಂತ ಎಲ್ಲರಿಗೂ ಎಲ್ಲವನ್ನು ಕೊಟ್ಟಿದ್ದಾನೆ ಆದರೆ ಧಾನ ಮಾಡುವ ಗುಣ ಇರಬೇಕು. ಪರೋಪಕಾರ ಇದಂ ಶರೀರ ಎನ್ನುವಂತೆ ಬಡವರಿಗೆ ನಿರ್ಗತಿಕರಿಗೆ, ಶಿಕ್ಷಣ ಕ್ಷೇತ್ರಕ್ಕೆ ,ಮಠ ಮಾನ್ಯಗಳಿಗೆ ಧಾನ ,ಧರ್ಮ ಮಾಡುವ ಮೂಲಕ ಪುಣ್ಯಕಟ್ಟಿಕೊಳ್ಳಬೇಕು ಎಂದರು.
ಇಂದು ವಿಜ್ಞಾನ ತಂತ್ರಜ್ಞಾನ ದಿನಗಳಲ್ಲಿ ಪ್ರಪಂಚ ನಾಗಾಲೋಟದಲ್ಲಿ ಓಡುತ್ತಿದೆ. ಶಿಕ್ಷಣ ಕೂಡಾ ಬದಲಾವಣೆಯಾಗುತ್ತಿದೆ ,ಬೇರೆ ದೇಶಗಳ ಶೈಕ್ಷಣಿಕ ಗುಣಮಟ್ಟ ಮತ್ತು ಅಲ್ಲಿನ ತಂತ್ರಜ್ಞಾನ ಹೊಸ ಅವಿಸ್ಕಾರಗಳು ಶಿಕ್ಷಣದಲ್ಲಿ ಅಳವಡಿಸಿಕೊಂಡು ಪಗ್ರತಿ ಸಾಧಿಸಿದ್ದಾರೆ. ಗ್ರಾಮೀಣ ಭಾಗದ ಭತಗುಣಕಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿ ಎಂಬ ಸದಾಶಯದಿಂದ ನಾನು ಸಣ್ಣ ಕಿರು ಕಾಣಿಕೆ ಕೊಡುತ್ತಿವೆ ಈ ಅವಕಾಶ ಪಡೆದು ವಿಧ್ಯಾರ್ಥಿಗಳು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದರು.
ಮುಖ್ಯಗುರುಗಳಾದ ಎ.ಎಸ್ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.
ನಿವೃತ್ತ ವಿಜ್ಞಾನಿ ವ್ಹಿ .ಎಂ ಸಿಂದಗಿ, ಎಸ್.ಬಿ ಮಡಸ್ನಾಳ, ದೈಹಿಕ ಶಿಕ್ಷಕ ಬಾಬರ್ ಸೇರಿದಂತೆ ಶ್ರೀಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ಸಿಬಂದ್ದಿ ಉಪಸ್ಥಿತರಿದ್ದರು.
ಇಂಡಿ ತಾಲೂಕಿನ ಶ್ರೀಸಿದ್ದೇಶ್ವರ ಸಂಸ್ಥೆ ಭತಗುಣಕಿ ಹಿರಿಯ ಪ್ರಾಥಮಿಕ ಶಾಲೆಗೆ ಮುಂಬೈ ಮಹಾನಗರದ ಮಹಾ ಧಾನಿ ತಾಪಿದಾಸ್ ಇವರು ಮಕ್ಕಳ ಕಲಿಕೆಗೆ ಪ್ರೇರಣೆಯಾಗಲಿ ಎಂದು ಸ್ಮಾರ್ಟ ಎಲ್.ಇ.ಡಿ ಪ್ರೋಜೇಟಕ್ಟ್, ಬೋರ್ಡ ಧಾನ ನೀಡಿದರು.



















