ಶಾಸಕ ಸಿ.ಎಸ್. ನಾಡಗೌಡರಿಂದ ನಾಗರಬೆಟ್ಟದಲ್ಲಿ ಎನ್.ಆರ್.ಎಲ್.ಎಂ ಕಟ್ಟಡ ಉದ್ಘಾಟನೆ: ಶಾಸಕ ನಾಡಗೌಡ
ಗ್ರಾಮೀಣ ಆರ್ಥಿಕ ಸಬಲೀಕರಣಕ್ಕೆ ಪಂಚ ಗ್ಯಾರಂಟಿಗಳು,ಉದ್ಯೋಗ ಖಾತ್ರಿ ಪೂರಕ: ಶಾಸಕ ನಾಡಗೌಡ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣವಾಗಿರುವ ಎನ್.ಆರ್.ಎಲ್.ಎಂ (NRLM) ಕಟ್ಟಡಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೊಸ ಭಾಷ್ಯ ಬರೆಯಲಿವೆ ಎಂದು ಕೆ.ಎಸ್.ಡಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್. ನಾಡಗೌಡ ಅವರು ಆಶಯ ವ್ಯಕ್ತಪಡಿಸಿದರು.
ತಾಲೂಕಿನ ನಾಗರಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲಾದ ೧೭ ಲಕ್ಷ ಅನುದಾನ ಎನ್.ಆರ್.ಎಲ್.ಎಂ ಕಟ್ಟಡ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರ ಸಬಲೀಕರಣಕ್ಕೆ ಸಣ್ಣ ಗುಡಿ ಕೈಗಾರಿಕೆಗಳಿಂದ ಬೃಹತ್ ಉದ್ಯಮಗಳನ್ನು ಬೆಳೆಸಲು ಸಾಕಷ್ಟು ಅವಕಾಶಗಳಿವೆ. ವಿಜಯಪುರದ ಮಲ್ಲಮ್ಮ ಯಾಳವಾರ ಅವರು ರೊಟ್ಟಿ ಉದ್ಯಮದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಅದೇ ಮಾದರಿಯಲ್ಲಿ ಈ ಭಾಗದ ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ರೊಟ್ಟಿ, ಚಟ್ನಿ ತಯಾರಿಕೆಯಂತಹ ಉದ್ಯಮಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದು ಅವರು ಕರೆ ನೀಡಿದರು.
ಗ್ಯಾರಂಟಿ ಯೋಜನೆಗಳ ಯಶಸ್ಸು
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಶಾಸಕರು, “ಈ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ ಸರಾಸರಿ 60 ರಿಂದ 70 ಸಾವಿರ ರೂಪಾಯಿಗಳ ಆರ್ಥಿಕ ನೆರವು ದೊರೆಯುತ್ತಿದೆ. ಇದು ಬಡವರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿದೆ. ವಿರೋಧ ಪಕ್ಷದವರು ಟೀಕೆ ಮಾಡುವುದನ್ನು ಬಿಟ್ಟು ವಾಸ್ತವವನ್ನು ಗಮನಿಸಲಿ. ಈ ಗ್ಯಾರಂಟಿಗಳು ಗ್ರಾಮೀಣ ಭಾಗದಲ್ಲಿ ಆರ್ಥಿಕ ಸ್ಥಿರತೆಯನ್ನು ತಂದಿವೆ” ಎಂದು ಪ್ರತಿಪಾದಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ಬದ್ಧತೆ
ಗ್ರಾಮದ ಪ್ರಸಿದ್ಧ ಶ್ರೀ ಪರಮಾನಂದ ದೇವಸ್ಥಾನದ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಹಾಗೂ ಸಿಸಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಅಲ್ಲದೆ, ಸಭಾಭವನ ನಿರ್ಮಾಣಕ್ಕಾಗಿ ಶಾಸಕರ ನಿಧಿಯಿಂದ 15 ಲಕ್ಷ ರೂ. ನೀಡುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ತಾಪಂ ಇಓ ವೆಂಕಟೇಶ್ ವಂದಾಲ,ತಾಪಂ ಲೆಕ್ಕಾಧಿಕಾರಿ ವಿರೇಶ ಹುಗಾರ,ಪಿಡಿಓ ಕೆ ಎಚ್ ಕುಂಬಾರ, ಗ್ರಾಪಂ ಅಧ್ಯಕ್ಷ ಸಿದ್ರಾಮಪ್ಪ ಪ್ಯಾಟಿ, ಉಪಾಧ್ಯಕ್ಷ ಪ್ರೇಮಾ ಚಲವಾದಿ,ಪಿಡಿಓ ರಾಜು ನಾರಾಯಣಿ,ಕಾರ್ಯದರ್ಶಿ ಅಯ್ಯಪ್ಪ ಮಲಗಲದಿನ್ನಿ ನ್ಯಾಯವಾದಿ ಆರ್ ಬಿ ಪಾಟೀಲ, ಆಕ್ಸ್ಫರ್ಡ್ ಸಂಸ್ಥೆ ಅಧ್ಯಕ್ಷ ಎಂ ಎಸ್ ಪಾಟೀಲ, ಎಸ್ ಡಿ ಕೆ,ಎಕ್ಸಪರ್ಟ್ ಸಂಸ್ಥೆ ಅಧ್ಯಕ್ಷ ಬಿ ಜಿ ಮಠ,ಮಾಜಿ ಸೈನಿಕ ಬಸನಗೌಡ ಸಿದ್ದರಡ್ಡಿ,ಪಿಎಸ್ಐ ಸಂಜಯ ತಿಪ್ಪಾರಡ್ಡಿ, ಬಿ ಎಸ್ ಗುರಿಕಾರ,ಕಲ್ಲಣ ಪ್ಯಾಟಿ,ಕಾಶಪ್ಪ ಮಾದರ,ನೀಲಪ್ಪ ಮದರಿ,ಹಣಮಂತ್ರಾಯ ಪಾಟೀಲ,ಕಾಂತು ಮಣ್ಣೂರ,ಸಿದ್ದರಾಯ ಬಿರಾದಾರ,ವಾಯ್ ಎಸ್ ಚಲವಾದಿ,ಶಿಕ್ಷಕರ ವಿರೂ ನಾಯಕ,ವೀರೇಶ ಪ್ಯಾಟಿ,
ಗ್ರಾಪಂ ಸದಸ್ಯರು ಸಿಬ್ಬಂದಿಗಳ, ಅಂಗನವಾಡಿ ಕಾರ್ಯಕರ್ತರು,ಎನ್ ಆರ್ ಎಲ್ ಎಂ ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ದರು.
ನಾಗರಬೆಟ್ಟ ಏತ ನೀರಾವರಿ ಯೋಜನೆ:
ಸುಮಾರು 140 ಕೋಟಿ ರೂ. ವೆಚ್ಚದ ನಾಗರಬೆಟ್ಟ ಏತ ನೀರಾವರಿ ಯೋಜನೆಯು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾಗಿದ್ದು, ಇದರಿಂದ ಸುತ್ತಮುತ್ತಲಿನ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಯೋಜನೆಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಯುತ ಪರಿಹಾರವಾಗಿ ಖುಷ್ಕಿ ಭೂಮಿಗೆ ಎಕರೆಗೆ 25 ಲಕ್ಷ ರೂ. ಹಾಗೂ ನೀರಾವರಿ ಜಮೀನಿಗೆ 30 ಲಕ್ಷ ರೂ. ಕೊಡಿಸುವ ಭರವಸೆಯನ್ನು ಶಾಸಕರು ನೀಡಿದರು. ಬರುವ ವರ್ಷದ ಜುಲೈ-ಆಗಸ್ಟ್ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಈ ಯೋಜನೆಗೆ ಚಾಲನೆ ಕೊಡಿಸುವುದಾಗಿ ಅವರು ತಿಳಿಸಿದರು.
ಸಿ ಎಸ್ ನಾಡಗೌಡ ಕೆಎಸ್ ಡಿ ನಿಗಮದ ಅಧ್ಯಕ್ಷರು,ಶಾಸಕರು.


















