ಅಯ್ಯನಗುಡಿ ಗಂಗಾಧರೇಶ್ವರ ರಥೋತ್ಸವದಲ್ಲಿ ಅಪಾರ ಭಕ್ತರು ಬಾಗಿ
ಮುದ್ದೇಬಿಹಾಳ : ತಾಲ್ಲೂಕಿನ ಅಯ್ಯನಗುಡಿಗ್ರಾಮದ ಗಂಗಾಧರೇಶ್ವರ ಜಾತ್ರೋತ್ಸವ ಅಂಗವಾಗಿ ಅಪಾರ ಭಕ್ತರ ಸಮ್ಮುಖದಲ್ಲಿ ಅಯ್ಯನಗುಡಿ ರಥೋತ್ಸವ ಅದ್ದೂರಿಯಾಗಿ ನಡೆಯಿತು. ರಥೋತ್ಸವಕ್ಕೆ ನಾಡಗೌಡ ಕುಟುಂಬದವರು ಚಾಲನೆ ನೀಡಿದರು. ಬಲದಿನ್ನಿ ಧಣಿ, ಶಾಸಕ ಸಿ.ಎಸ್.ನಾಡಗೌಡ ಮತ್ತು ಅವರ ಸಹೋದರರು ಗಂಗಾಧರೇಶ್ವರ ದೇವರಿಗೆ ಸಾಮೂಹಿಕ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಆವರಣದ ಮುಂಭಾಗದಲ್ಲಿ ಸಂಗಣ್ಣ ಪತ್ತಾರ ನೇತೃತ್ವದಲ್ಲಿ ರಥೋತ್ಸವದ ಪುರವಂತಿಕೆ ನೆರವೇರಿತು. 6 ಗಾಲಿಗಳ ಬೃಹತ್ ರಥಕ್ಕೆ ನಾಡಗೌಡ ಬಂಧುಗಳು ಐದು ಬಾರಿ ಪ್ರದಕ್ಷಿಣೆ ಹಾಕಿದರು. ಸುಮಾರು ಅರ್ಧ ಕಿ.ಮೀ ದೂರದ ಪಾದಗಟ್ಟೆಯವರೆಗೆ ಸಹಸ್ರಾರು
ಭಕ್ತರು ಕೈಜೋಡಿಸಿ ರಥ ಎಳೆದರು. ನಾಲತವಾಡ ಸೇರಿ ಹೊರ ಜಿಲ್ಲೆಗಳ ಭಕ್ತರು ರಥಕ್ಕೆ ಕಬ್ಬಿನ ಜೆಲ್ಲೆ ಹಾಗೂ ಉತ್ತತ್ತಿ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು.
ಅಪಾರ ಸಂಖ್ಯೆಯ ಭಕ್ತರ ಆಗಮನದ ಹಿನ್ನೆಲೆ ಅಹಿತಕರ ಘಟನೆಗಳು ಸಂಭವಿಸದಂತೆ ನಾಲತವಾಡ ಹಾಗೂ ಮುದ್ದೇಬಿಹಾಳ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು. ಸಾರಿಗೆ ಹಾಗೂ ರಸ್ತೆ ಸಂಚಾರ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸಲಾಯಿತು. ಕೆಎಸ್ ಡಿ ನಿಗಮದ ಶಾಸಕ ಸಿ ಎಸ್.ನಾಡಗೌಡ ದಂಪತಿಗಳು, ಸೋಮಶೇಖರರಾವ್ ನಾಡಗೌಡ, ಮುನ್ನಾಧಣಿ ನಾಡಗೌಡ, ಪೃಥ್ವಿರಾಜ ನಾಡಗೌಡ, ರಾಹುಲ್ ನಾಡಗೌಡ, ಬಸವರಾಜ ನಾಡಗೌಡ ಸೇರಿದಂತೆ ತಾಲೂಕಿನ ಗಣ್ಯರು, ಪಕ್ಷದ ಮುಖಂಡರು ಹಾಗೂ ಅಪಾರ ಸಂಖ್ಯೆ ಭಕ್ತರಿದ್ದರು ಸೇರಿದಂತೆ ಉಪಸ್ಥಿತರಿದ್ದರು.