ಇಂಚಗೇರಿಮಠದಲ್ಲಿ ಗಲಿಬಿಲಿ ಗೋವಿಂದ ಹಾಸ್ಯ ಚಲಚಿತ್ರ ಚಿತ್ರೀಕರಣಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆ
ವಿಜಯಪುರ :’ಮನುಷ್ಯನ ಒತ್ತಡದ ಬದುಕಿನಲ್ಲಿ ಗಲಿಬಿಲಿ ಗೋವಿಂದ ಹಾಸ್ಯ ಈ ಚಲಚಿತ್ರವು ಉತ್ತಮ ಆರೋಗ್ಯಕ್ಕೆ ಪೂರಕವಾಗಳಲಿದೆ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸಮೀಪದ ಸುಕ್ಷೇತ್ರ ಇಂಚಗೇರಿ ಮಠದಲ್ಲಿ ಭಾನುವಾರ 3ದಿನಗಳವರೆಗೆ ಇಂಚಗೇರಿ ಮಠ ಮತ್ತು ಸುತ್ತಲಿನ ವಿವಿಧ ಸ್ಥಳಗಳಲ್ಲಿ ಹಮ್ಮಿಕೊಂಡ ‘ಗಲಿಬಿಲಿ ಗೋವಿಂದ’ ಹಾಸ್ಯ ಚಲಚಿತ್ರ ಚಿತ್ರೀಕರಣಕ್ಕೆಚಾಲನೆ ನೀಡಿ ಮಾತನಾಡಿದರು.
ಈ ಗಲಿಬಿಲಿ ಗೋವಿಂದ ಚಲನಚಿತ್ರದ ಸಂಭಾಷಣೆ, ಸಾಹಿತ್ಯ, ಚಿತ್ರ ಕಥೆ ರಚನೆಕಾರ ಸಂಗೀತ ನಿರ್ದೇಶಕ ನಾಯಕ ನಟ ಡಾ.ಸಂಗಮೇಶ ಉಪಾಸೆ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಅನಾಥ ಮಕ್ಕಳ ಕುರಿತು ಅವರ ಸಮಸ್ಯೆ ಮೇಲೆ ಬೆಳಕು ಚೆಲ್ಲುವ ಹಾಗೂ ಜಿಲ್ಲೆಯ ಇಂಚಗೇರಿಮಠ, ಸಾವಳಸಂಗದ ಗುಡ್ಡದ ಸಿದ್ದೇಶ್ವರ ವೃಕ್ಷೋಧ್ಯಾನದಲ್ಲಿ, ಹೊರ್ತಿ, ಹಳಗುಣಕಿಯ ಅಶೋಕ ಹೊಟೇಲ್ ವಿಲೇಜ್ ರೇಸೊರ್ಟ ಹೋಟೆಲ್, ಅಂಜುಟಗಿ, ಇಂಡಿ ಇನ್ನಿತರೆಡೆಗಳಲ್ಲಿ ರೂ.1ಕೋಟಿ ವೆಚ್ಚದ ಈ ಚಲಚಿತ್ರ ಚಿತ್ರೀಕರಣ ಮಾಡಲಾಗುತ್ತಿದೆ. ಇದೊಂದು ಅನಾಥ ಮಕ್ಕಳ ಮತ್ತು ಸಾಮಾಜಿಕ ಕಳಕಳಿಯ 5ಜನ ನಿರ್ಮಾಪಕರ ತಂಡ, ವಿವಿಧ ಕಲಾವಿದರ ತಂಡ ವಿದೆ ಎಂದವರು ಈ ಚಿತ್ರಕ್ಕೆ ಎಲ್ಲ ಕಲಾವಿ ಅಭಿಮಾನಿಗಳು ಮತ್ತು ಎಲ್ಲರೂ ಪ್ರೋತ್ಸಾಹಿಸಿ, ಆಶೀರ್ವದಿಸಬೇಕು ಪ್ರೋತ್ಸಾಹಿಸಬೇಕು ಎಂದು ವಿನಂತಿ ಸಿದರು.
ನಾಗಠಾಣ ವಿಜೆಪಿ ಮುಖಂಡ ಸಂಜೀವ ಐಹೊಳೆ, ಇಲಿಯಾಸ ಬೋರಾಮಣಿ, ಸುರೇಶ ಗೋಣಸಗಿ, ಪಾರ್ವತಿ ಕುಲೆ೯, ಭೀಮಣ್ಣ ಕೌಲಗಿ, ಸಂದೀಪ ರಾಠೋಡ, ಜೆಟ್ಟೆಪ್ಪ ರವಳಿ, ಮಲ್ಲಣ್ಣ ಸಕ್ರಿ, ಕಲ್ಲಪ್ಪ ಅರವತ್ತಿ ಹಾಗೂ ಗ್ರಾಮ ಮತ್ತು ಸುತ್ತಲಿನ ನೂರಾರು ಕಲಾಭಿಮಾನಿಗಳು ಭಾಗವವಿಸಿದ್ದರು.


















