• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

    ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

    ಅಬ್ಬರದ ಆಚರಣೆಗಿಂತ ಅಂಬೇಡ್ಕರ್ ವಿಚಾರಧಾರೆಗೆ ಒತ್ತು ನೀಡಿ: ಡಾ. ಚನ್ನವೀರ ಶ್ರೀ

    ಅಬ್ಬರದ ಆಚರಣೆಗಿಂತ ಅಂಬೇಡ್ಕರ್ ವಿಚಾರಧಾರೆಗೆ ಒತ್ತು ನೀಡಿ: ಡಾ. ಚನ್ನವೀರ ಶ್ರೀ

    ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದ್ದು : ಉದಯ ರಶ್ಮಿ ದಿನ ಪತ್ರಿಕೆ ಸಂಪಾದಕ ‌ಮಣ್ಣೂರ

    ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದ್ದು : ಉದಯ ರಶ್ಮಿ ದಿನ ಪತ್ರಿಕೆ ಸಂಪಾದಕ ‌ಮಣ್ಣೂರ

    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

      ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

      ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

      ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

      ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

      ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

      ಅಬ್ಬರದ ಆಚರಣೆಗಿಂತ ಅಂಬೇಡ್ಕರ್ ವಿಚಾರಧಾರೆಗೆ ಒತ್ತು ನೀಡಿ: ಡಾ. ಚನ್ನವೀರ ಶ್ರೀ

      ಅಬ್ಬರದ ಆಚರಣೆಗಿಂತ ಅಂಬೇಡ್ಕರ್ ವಿಚಾರಧಾರೆಗೆ ಒತ್ತು ನೀಡಿ: ಡಾ. ಚನ್ನವೀರ ಶ್ರೀ

      ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದ್ದು : ಉದಯ ರಶ್ಮಿ ದಿನ ಪತ್ರಿಕೆ ಸಂಪಾದಕ ‌ಮಣ್ಣೂರ

      ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದ್ದು : ಉದಯ ರಶ್ಮಿ ದಿನ ಪತ್ರಿಕೆ ಸಂಪಾದಕ ‌ಮಣ್ಣೂರ

      ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

      ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

      APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

      ಇಂಡಿಯಲ್ಲಿ ಬರ್ಬರ ಹತ್ಯೆ!

      ಇಂಡಿಯಲ್ಲಿ ಬರ್ಬರ ಹತ್ಯೆ!

      ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

      ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

      ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

      ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ರಾಜ್ಯ

      ರಾಜ್ಯ ಮಟ್ಟದಲ್ಲಿ ಲಾಭದಲ್ಲಿ ಡಿಸಿಸಿ ಬ್ಯಾಂಕ್ 3ನೇ ಸ್ಥಾನ-ಶಿವಾನಂದ

      Voiceofjanata.in

      August 30, 2025
      0
      ರಾಜ್ಯ ಮಟ್ಟದಲ್ಲಿ ಲಾಭದಲ್ಲಿ ಡಿಸಿಸಿ ಬ್ಯಾಂಕ್ 3ನೇ ಸ್ಥಾನ-ಶಿವಾನಂದ
      0
      SHARES
      39
      VIEWS
      Share on FacebookShare on TwitterShare on whatsappShare on telegramShare on Mail

      ವಿಡಿಸಿಸಿ 2024-25ನೇ ಹಾಗೂ 106ನೇ ವಾರ್ಷಿಕ ಸಭೆ-
      7094 ಕೋಟಿ ರೂ. ವ್ಯವಹಾರ-25.18 ಕೋಟಿ ರೂ. ನಿವ್ವಳ ಲಾಭ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಡಿಸಿಸಿ ಕೊಡುಗೆ ಅನುಪಮ ರಾಜ್ಯ ಮಟ್ಟದಲ್ಲಿ ಲಾಭದಲ್ಲಿ ಡಿಸಿಸಿ ಬ್ಯಾಂಕ್ 3ನೇ ಸ್ಥಾನ-ಶಿವಾನಂದ

       

       

      ವಿಜಯಪುರ: ನಷ್ಟದಲ್ಲಿರುವ ಜಿಲ್ಲೆಯ ಸಹಕಾರಿ ಸಂಸ್ಥೆಗಳು ಹಾಗೂ ಸಕ್ಕರೆ ಕಾರ್ಖಾನೆಗಳು, ಹಾಲು ಒಕ್ಕೂಟಗಳಿಗೆ ನೆರವು ನೀಡಿ ಅವುಗಳ ‍ಪುನ‍ ಶ್ಚೇತನಕ್ಕೆ ಕಾರಣವಾದ ಹೆಗ್ಗಳಿಕೆ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗೆ ಸಲ್ಲುತ್ತದೆ. ಪರಿಣಾಮವೇ ಇದೀಗ ರಾಜ್ಯದಲ್ಲೇ ನಮ್ಮ ಬ್ಯಾಂಕ್ ಲಾಭದಲ್ಲಿ 3ನೇ ಸ್ಥಾನ ಪಡೆದಿರುವುದಕ್ಕೆ ಸಾಕ್ಷಿ ಎಂದು ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.

      ನಗರದಲ್ಲಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬ್ಯಾಂಕಿನ 106ನೇ ವಾರ್ಷೀಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2024-25ನೇ ಸಾಲಿನಲ್ಲಿ ನಮ್ಮ ಬ್ಯಾಂಕ್8.53 ಕೋಟಿ ರೂ. ತೆರಿಗೆ ಪಾವತಿ ಬಳಿಕ 25.18 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಇತಿಹಾದಲ್ಲೇ ಇದು ದಾಖಲೆ ಬರೆದಿದೆ. 106 ವರ್ಷಗಳ ಇತಿಹಾಸದಲ್ಲಿ ನಮ್ಮ ಬ್ಯಾಂಕ್ 99 ವರ್ಷಗಳಲ್ಲಿ 245.90 ಕೋಟಿ ರೂ. ಲಾಭದಲ್ಲಿ ಮುನ್ನಡೆದು ಆರ್ಥಿಕ ಸ್ಥಿರತೆ ಕಾಯ್ದುಕೊಂಡಿರುವುದು ನಮ್ಮ ಬ್ಯಾಂಕಿನ ಸಾಧನೆ. 7 ವರ್ಷಗಳ 6.08 ಕೋಟಿ ರೂ. ನಷ್ಟದಿಂದ ಹೊರಬಂದು ಒಟ್ಟು 239.82 ಕೋಟಿ ರೂ. ಲಾಭ ಗಳಿಸಿದೆ. ಹೀಗಾಗಿ ಲಾಭದತ್ತ ಮುಖ ಮಾಡಿದ ಬಳಿಕ ಬ್ಯಾಂಕ್‌ ಮತ್ತೆ ಹಿಂತಿರುಗಿ ನೋಡುವ ಪರಿಸ್ಥಿತಿ ಬಂದಿಲ್ಲ ಎಂದು ಹೇಳಿದರು.

      ಅವಳಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಹಕಾರಿ ಆಗಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಸಹಕಾರಿ ಸಕ್ಕರೆ ಕಾರ್ಖಾನೆಗಳು, ಅರ್ಬನ್‌ ಬ್ಯಾಂಕುಗಳು, ಪತ್ತಿನ ಸಹಕಾರಿ ಸಂಘಗಳು, ಹಾಲು ಒಕ್ಕೂಟಗಳು ನಷ್ಟದಲ್ಲಿದ್ದವು. ನಷ್ಟದಲ್ಲಿ ಇಂಥ ಸಹಕಾರಿ ವಲಯಗಳಿಗೆ ವಿಡಿಸಿಸಿ ಬ್ಯಾಂಕ್‌ ನೆರವು ನೀಡಿ ಎಲ್ಲ ಸಂಸ್ಥೆಗಳು ಪುನಶ್ಚೇತನ ಗಳಿಸಲು ನೆರವಾಗಿದೆ. ಇದರಿಂಧ ಜಿಲ್ಲೆಯಲ್ಲಿ ಸಹಕಾರಿ ರಂಗ ಬಲಿಷ್ಟವಾಗಿದ್ದು, ರಾಜ್ಯದಲ್ಲಿ ಮಾತ್ರವಲ್ಲ ದೇಶವೇ ನಮ್ಮ ಜಿಲ್ಲೆಯತ್ತ ನೋಡುವಂತಾಗಿದೆ ಎಂದು ಬಣ್ಣಿಸಿದರು.

      ಕೇವಲ 63,000 ರೂ.ಗಳೊಂದಿಗೆ ಆರಂಭವಾಗಿದ್ದ ಡಿಸಿಸಿ ಬ್ಯಾಂಕ್‌ ಇಂದು 14,500 ಕೋಟಿ ರೂ. ವಹಿವಾಟು ಹೊಂದಿದ್ದು, ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಆದಾಯ ತೆರಿಗೆ ಪಾವತಿಯಲ್ಲಿನ ಶಿಸ್ತಿಗೆ ಕೇಂದ್ರ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದೆ.

      ಹೊಸ ಜಿಲ್ಲೆಗಳ ರಚನೆ ನಂತರ ಸರ್ಕಾರದ ನಿಯಮಗಳ ಪ್ರಕಾರ ವಿಜಾಪುರ ಡಿಸಿಸಿ ಬ್ಯಾಂಕ್‌ ವಿಭಜನೆ ಮಾಡಿದಾಗ ಬಾಗಲಕೋಟ ಡಿಸಿಸಿ ಬ್ಯಾಂಕ್‌ ಸ್ಥಿತಿ ವಿಜಯಪುರ ಬ್ಯಾಂಕಿಗಿಂತ ಉತ್ತಮವಾಗಿತ್ತು. ವಿಭಜನೆ ಸಂದರ್ಭದಲ್ಲಿ ಇದ್ದ ಸ್ಥಿತಿ ಗಮನಿಸಿದರೆ ಆಗ 317 ಕೋಟಿ ರೂ.ಗಳಿಂದ ದುಡಿಯುವ ಬಂಡವಾಳ 4902 ಕೋಟಿ ರೂ.ಗೆ ಏರಿದ್ದು, ಗಮನಾರ್ಹ ಸಾಧನೆ ಎಂದು ಹೇಳಿದರು.

      ರೈತರಿಗೆ ನೆರವು ನೀಡುವಲ್ಲಿ ನಾವು ಇತರ ಬ್ಯಾಂಕುಗಳಿಗಿಂತ ಮುಂದೆ ಇದ್ದೇವೆ. ವಿಭಜನೆ ಹಂತದಲ್ಲಿ 25 ಶಾಖೆಗಳಿದ್ದು, ಇದೀಗ ಎರಡು ದಶಕಗಳಲ್ಲಿ 26 ಹೊಸ ಶಾಖೆಗಳನ್ನು ಸ್ಥಾಪಿಸಿರುವುದು ನಮ್ಮ ಬ್ಯಾಂಕಿನ ಸಾಧನೆ.
      ಶಿರಹಟ್ಟಿ, ಬಾಲೆಹೊಸೂರ ಶ್ರೀ ಫಕ್ಕೀರೇಶ್ವರ ಭಾವೈಕ್ಯತಾ ಸಂಸ್ಥಾನಮಠದ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮತ್ತು ತಿಕೋಟದ ಶ್ರೀ ಚನ್ನಮಲ್ಲಿಕಾರ್ಜುನ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

      ಬ್ಯಾಂಕಿನ ಉಪಾಧ್ಯಕ್ಷರಾದ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಸುರೇಶ ಬಿರಾದಾರ, ಶೇಖರ ದಳವಾಯಿ, ಬಿ.ಎಸ್. ಪಾಟೀಲ ಯಾಳಗಿ, ಕಲ್ಲನಗೌಡ ಪಾಟೀಲ, ಹಣಮಂತರಾಯಗೌಡ ಪಾಟೀಲ, ಗುರುಶಾಂತ ಬಿ. ನಿಡೋಣಿ, ಚಂದ್ರಶೇಖರ ಪಾಟೀಲ ಮನಗೂಳಿ, ಅರವಿಂದ ಪೂಜಾರಿ, ಎಸ್‌.ಎಸ್‌. ಜಹಗೀರದಾರ್‌, ಸಹಕಾರಿ ಸಂಘಗಳ ಉಪನಿಬಂಧಕಿ ಎಸ್‌.ಕೆ. ಭಾಗ್ಯ‍ ಶ್ರೀ, ನಬಾರ್ಡ್‌ ಡಿಡಿಎಂ ವಿಕಾಸ್‌ ರಾಠೋಡ್‌, ಸಹಕಾರಿ ಸಂಘಗಳ ನಿವೃತ್ತ ಅಪರ ನಿಬಂಧಕರಾದ ಅಭಿವೃದ್ಧಿ ಅಧಿಕಾರಿ ಎಂ.ಜಿ.ಪಾಟೀಲ, ನಿವೃತ್ತ ಜಂಟಿ ನಿಬಂಧಕರಾದ ಾಡಳಿತ ಮಂಡಳಿ ಸಲಹೆಗಾರರಾದ ಕೊಟ್ರೇಶ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

      ಸಿಇಒ ಎಸ್.ಎ.ಡವಳಗಿ ಪ್ರಾಸ್ತಾವಿಕ ಮಾತನಾಡಿದರೆ, ನಿರ್ದೇಶಕರಾದ ಗುರುಶಾಂತ ನಿಡೋಣಿ ಸ್ವಾಗತಿಸಿದರು. ಆರ್.ಎಂ.ಬಣಗಾರ, ಅಶೋಕ ಹಂಚಲಿ, ನಾಗರಾಜ ಬಿರಾದಾರ ನಿರೂಪಿಸದರೆ, ಉಪ ಪ್ರಧಾನ ವ್ಯವಸ್ಥಾಪಕ ಎಂ.ಜಿ.ಬಿರಾದಾರ ವಂದಿಸಿದರು.

       

      80 ಕೋಟಿ ವೆಚ್ಚದಲ್ಲಿ ತರಬೇತಿ ಸಂಸ್ಥೆ ವಿಡಿಸಿಸಿ ಬ್ಯಾಂಕ್‌ ಆವರಣದಲ್ಲಿ ಸಹಕಾರಿಗಳಿಗೆ ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ತರಬೇತಿ ಸಂಸ್ಥೆ ನಿರ್ಮಿಸಲಾಗುವುದು ಎಂದು ಅಧ್ಯಕ್ಷ, ಸಚಿವ ಶಿವಾನಂದ ಪಾಟೀಲ ಹೇಳಿದರು.ಈಗ ಬೆಂಗಳೂರಿನಲ್ಲಿ ಒಂದು ತರಬೇತಿ ಸಂಸ್ಥೆ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಸಂಸ್ಥೆ ಇಲ್ಲ. ಹೀಗಾಗಿ ಸಹಕಾರಿಗಳ ಅನುಕೂಲಕ್ಕಾಗಿ 2,300 ಆಸನಗಳ ಸಾಮರ್ಥ್ಯದ ಸುಸಜ್ಜಿತ ತರಬೇತಿ ಕಟ್ಟಡ ನಿರ್ಮಿಸಲಾಗುವುದು.

      ದುಡ್ಡು ಬ್ಲಡ್ಡು ಎರಡೂ ಬೇಕು

       

      ಪ್ರಾಮಾಣಿಕತೆ, ಪಾರದರ್ಶಕತೆ ಇದ್ದರೆ ಸಹಕಾರಿ ವಲಯ ನಿರೀಕ್ಷೆ ಮೀರಿ ಸಾಧನೆ ಮಾಡುತ್ತದೆ ಎಂಬುದಕ್ಕೆ ಸಚಿವ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಕಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುನ್ನಡೆಯುತ್ತಿರುವುದೇ ಸಾಕ್ಷಿ. ಭವಿಷ್ಯದಲ್ಲಿ ನಿಮ್ಮ ಬ್ಯಾಂಕು ದೇಶದಲ್ಲೇ ಮೊದಲ ಸ್ಥಾನಕ್ಕೇರಲೆಂದು ಆಶಿಸುತ್ತೇನೆ.

      ‍‍ಫಕೀರ ದಿಂಗಾಲೇಶ್ವರ ಶ್ರೀಗಳು
      ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನ ಮಠ, ಶಿರಹಟ್ಟಿ

       

      30 ಸಹಕಾರಿ ಸಂಘಗಳಿಗೆ ಬಹುಮಾನ
      ವಿಡಿಸಿಸಿ ವಾರ್ಷಿಕ ಮಹಾಸಭೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಉತ್ತಮ ನಿರ್ವಹಣೆಗಾಗಿ ಸಹಕಾರಿ ವಲಯದ ವಿವಿಧ 30 ಸಂಸ್ಥೆಗಳಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.

      ಬ್ಯಾಂಕಿನ ಆರ್ಥಿಕ ಸ್ಥಿತಿಗತಿ

      ಶೇರು – 185.40 ಕೋಟಿ ರೂ.
      ನಿಧಿಗಳು – 412.36 ಕೋಟಿ ರೂ.
      ಠೇವು – 3814.58 ಕೋಟಿ ರೂ.
      ದುಡಿಯುವ ಬಂಡವಾಳ – 4901.60 ಕೋಟಿ ರೂ.
      ನಿವ್ವಳ ಲಾಭ – 25.18 ಕೋಟಿ ರೂ.

      Tags: #DCC Bank 3rd place in profit at state level#indi / vijayapur#Public News#Today News#Voice Of Janata#Voiceofjanata.in#ರಾಜ್ಯ ಮಟ್ಟದಲ್ಲಿ ಲಾಭದಲ್ಲಿ ಡಿಸಿಸಿ ಬ್ಯಾಂಕ್ 3ನೇ ಸ್ಥಾನ-ಶಿವಾನಂದ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಇಂಡಿಯಲ್ಲಿ ಮಿತಿಮಿರಿದ ಡೋನೇಷನ್ ಹಾವಳಿ..! ತಡೆಗಟ್ಟಲು ಕರ್ನಾಟಕ ಯುವ ರಕ್ಷಣಾ ವೇದಿಕೆ ಆಗ್ರಹ

      ಇಂಡಿಯಲ್ಲಿ ಮಿತಿಮಿರಿದ ಡೋನೇಷನ್ ಹಾವಳಿ..! ತಡೆಗಟ್ಟಲು ಕರ್ನಾಟಕ ಯುವ ರಕ್ಷಣಾ ವೇದಿಕೆ ಆಗ್ರಹ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಇಂಡಿಯಲ್ಲಿ ಮಿತಿಮಿರಿದ ಡೋನೇಷನ್ ಹಾವಳಿ..! ತಡೆಗಟ್ಟಲು ಕರ್ನಾಟಕ ಯುವ ರಕ್ಷಣಾ ವೇದಿಕೆ ಆಗ್ರಹ

      ಇಂಡಿಯಲ್ಲಿ ಮಿತಿಮಿರಿದ ಡೋನೇಷನ್ ಹಾವಳಿ..! ತಡೆಗಟ್ಟಲು ಕರ್ನಾಟಕ ಯುವ ರಕ್ಷಣಾ ವೇದಿಕೆ ಆಗ್ರಹ

      June 3, 2026
      ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಇಂಡಿ ನಗರದಲ್ಲಿ ಬೃಹತ್ ಪ್ರತಿಭಟನೆ

      ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಇಂಡಿ ನಗರದಲ್ಲಿ ಬೃಹತ್ ಪ್ರತಿಭಟನೆ

      June 1, 2026
      ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಪಟ್ಟ, ಎಂ.ವೈ. ಪಾಟೀಲರಿಗೆ ಸಚಿವ ಸ್ಥಾನಕ್ಕೆ  ಮನವಿ

      ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಪಟ್ಟ, ಎಂ.ವೈ. ಪಾಟೀಲರಿಗೆ ಸಚಿವ ಸ್ಥಾನಕ್ಕೆ  ಮನವಿ

      May 31, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.