ಇಥೆನಾಲ್ ಕಾರ್ಖಾನೆ ಪ್ರಾರಂಭ, ನಿರುದ್ಯೋಗ ಯುವಕರಿಗೆ ಸಹಕಾರಿ : ಜಗದ್ಗುರು ಬಸವಜಯ ಮೃತ್ಯುಂಜಯ
ಇಂಡಿ: ರಾಜ್ಯ ಹಾಗೂ ದೇಶದಲ್ಲಿ ಇಥೆನಾಲ್ ಉತ್ಪಾದನೆ ಅತಿ ಅವಶ್ಯಕವಾಗಿದೆ. ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಅತ್ಯಂತ ದೊಡ್ಡ ಸಕ್ಕರೆ ಹಾಗೂ ಇಥೆನಾಲ್ ಕಾರ್ಖಾನೆ ಪ್ರಾರಂಭವಾಗುತ್ತಿರುವುದರಿಂದ ಈ ಭಾಗದ ಕಬ್ಬು ಬೆಳೆಯುವ ರೈತರಿಗೆ ಹಾಗೂ ನಿರುದ್ಯೋಗಿ ಯುವಕರಿಗೆ ಅನುಕೂಲವಾಗಲಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.
ಅವರು ಬುಧವಾರ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಗುರುದೇವ ಬಯೋರಿಪೈನರಿಸ್ & ಅಲೈಡ್ ಇಂಡಸ್ಟ್ರೀಸ್ ವತಿಯಿಂದ ಹಮ್ಮಿಕೊಂಡಿದ್ದ ಸಕ್ಕರೆ ಹಾಗೂ ಇಥೆನಾಲ್ ಕಾರ್ಖಾನೆ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮದ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಇಂಡಿ ಭಾಗದಲ್ಲಿ ಐಬಿಸಿ ಕಲುವೆ, ಗುತ್ತಿಬಸವಣ್ಣ, ರೇವಣಸಿದ್ದೇಶ್ವರ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಮೂಲಕ ನೀರು ಹರಿಯುತ್ತಿದ್ದು ಈ ಭಾಗದಲ್ಲಿ ಹೆಚ್ಚಿಗೆ ಕಬ್ಬು ಬೆಳೆ ಬೆಳೆಯಲಾಗುತ್ತಿದೆ. ಈ ಭಾಗದಲ್ಲಿ ಇನ್ನಷ್ಟು ಸಕ್ಕರೆ ಕಾರ್ಖಾನೆಗಳ ನಿರ್ಮಾಣದ ಅವಶ್ಯಕತೆ ಇರುವುದನ್ನು ಕಂಡ ಆನಂದ ಬಿರಾದಾರ ಅವರು ಈ ಭಾಗದ ರೈತರ ಹಾಗೂ ಯುವ ಜನರಿಗೆ ಒಳಿತು ಮಾಡುವ ಸದುದ್ದೇಶದಿಂದ ಈ ರ್ಖಾಣೆ ನಿರ್ಮಿಸಲು ಮುಂದಾಗಿರುವುದು ಸಂತಸ ತಂದಿದೆ ಎಂದರು.
ಕಾಮಗಾರಿಯ ಅಡಿಗಲ್ಲು ಕಾರ್ಯಕ್ರಮವನ್ನು ವಿಜಯಪೂರ ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿ ನೆರವೇರಿಸಿ ಮಾತನಾಡಿ, ನಾನು ರಾಜಕೀಯವಾಗಿ ಬೆಳೆಯಲು ನನಗೆ ಇಂಡಿ ತಾಲ್ಲೂಕಿನ ಕೊಡುಗೆ ಅಪಾರವಾದದ್ದು. ನನ್ನಂತ ದಲಿತ ಮನುಷ್ಯನ್ನು ರಾಜಕೀಯಕ್ಕೆ ತಂದು ರಾಜ್ಯದ ವಿವಿಧ ಸಚಿವ ಸ್ಥಾನ ಹಾಗೂ ಕೇಂದ್ರದಲ್ಲಿ ಸಚಿವ ಸ್ಥಾನ ಸೇರಿದಂತೆ ಅನೇಕ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿದ್ದು ಈ ತಾಲೂಕಿನ ಜನರಿಂದ. ತಡವಲಗಾ ಗ್ರಾಮದಲ್ಲಿ ಗುರುದೇವ ಸಕ್ಕರೆ ಕಾರ್ಖಾನೆ ಆಗುತ್ತಿರುವುದು ತುಂಬಾ ಸಂತೋಷವಾಗಿದೆ. ಈ ಭಾಗದ ರೈತರ ಬಹುಮುಖ್ಯ ಬೇಡಿಕೆಗಳಿಗೆ ಸ್ಪಂದಿಸಿ ಇಂಡಿ ತಾಲ್ಲೂಕಿನ ಅಥರ್ಗಾ, ತಡವಲಗಾ, ಹಂಜಗಿ, ನಿಂಬಾ¼,À ಕೆರೆಗಳನ್ನು ತುಂಬಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆ.ಇಂಡಿ ಮಾರ್ಗವಾಗಿ ಅಕ್ಕಲಕೋಟ ಹಾಗೂ ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಮಾಜಿ ವಿ.ಪ. ಸದಸ್ಯ ಅರುಣ ಶಹಾಪೂರ ಮಾತನಾಡಿ ಕಬ್ಬು ಭಾರತದ ಪ್ರಮುಖ ವಾಣ ಜ್ಯ ಬೆಳೆಗಳಲ್ಲಿ ಒಂದಾಗಿದೆ. ಕಬ್ಬು ಹಾಗೂ ಇಥನಾಲ್ ಎರಡನೇ ಅತಿದೊಡ್ಡ ಸಂಘಟಿತ ಕೃಷಿ ಉದ್ಯಮವಾಗಿ ತನ್ನನ್ನು ಉಳಿಸಿಕೊಳ್ಳುವ ಮೂಲಕ ರಾಷ್ಟ್ರೀಯ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.
ವಿಠ್ಠಲಗೌಡ ಪಾಟೀಲ ಮಾತನಾಡಿದರು. ಗುರುದೇವ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಆನಂದ ಬಿರಾದಾರ ಮಾತನಾಡಿ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಸುಮಾರು ೪೮೭ ಕೋಟಿ ರೂಪಾಯಿ ವೆಚ್ಚದಲ್ಲಿ ಸಕ್ಕರೆ ಹಾಗೂ ಇಥೆನಾಲ್ ಕಾರ್ಖಾನೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಿಸುವ ಗುರಿ ಹೊಂದಲಾಗಿದೆ. ಶೀಘ್ರದಲ್ಲೇ ಕೆಲಸ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ತಡವಲಗಾ ಹೀರೆಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಚಿತ್ರದುರ್ಗ ಗುರುಪೀಠದ ಮಾದರ ಚೆನ್ನಯ್ಯ ಪೂಜ್ಯರು, ಹಾಗೂ ಗುರುದೇವ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಹಣಮಂತ ಗಿರಡ್ಡಿ, ಮಹೇಂದ್ರ ಓಸ್ವಾಲ್, ಗುರುದೇವ ಸಕ್ಕರೆ ಎಮ್.ಡಿ. ಸಾಬು ದೊಡ್ಡಮನಿ, ಹಾಗೂ ವೆಂಕಟೇಶ್ ಜಿ, ಶ್ರೀನಿವಾಸ ಜಿ, ಸೇರಿದಂತೆ ಅನೇಕರು ಮಾತನಾಡಿದರು.
ವೇದಿಕೆಯಲ್ಲಿ ಎಸ್.ಎಸ್ ಪಾಟೀಲ, ವಿ.ಎಚ್. ಬಿರಾದಾರ, ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಾ ವಾಲಿಕಾರ, ರವಿ ಹೊಸಮನಿ, ಚಂದ್ರಶೇಖರ ರೂಗಿ, ತಮ್ಮಣ್ಣ ಪೂಜಾರಿ, ಲಕ್ಷಣ ಆಳೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಂಡಿ: ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಗುರುದೇವ ಬಯೋರಿಪೈನರಿಸ್ & ಅಲೈಡ್ ಇಂಡಸ್ಟ್ರೀಸ್ ವತಿಯಿಂದ ಹಮ್ಮಿಕೊಂಡಿದ್ದ ಸಕ್ಕರೆ ಹಾಗೂ ಇಥೆನಾಲ್ ಕಾರ್ಖಾನೆ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮವನ್ನು ಸಂಸದ ರಮೇಶ ಜಿಗಜಿಣಗಿ ನೆರವೇರಿಸಿದರು. ಬಸವಜಯ ಮೃತ್ಯುಂಜಯ ಸ್ವಾಮೀಜಿ, ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಆನಂದ ಬಿರಾದಾರ, ಅರುಣ ಶಹಾಪೂರ ಸೇರಿದಂತೆ ಇನ್ನಿತರರು ಇದ್ದರು.