ಬ್ಲಾಕ್ ಮೆಲ್ ಮಾಡುವ ನಕಲಿ ನಾಯಕರ ಬಗ್ಗೆ ಆತಂಕ ಬೇಡ..!
ಕಾನೂನು ಹೋರಾಟಕ್ಕೆ ಸದಾಸಿದ್ದಃ : ವಿಜಯ
ದೇವರ ಹಿಪ್ಪರಗಿ : ಅಧಿಕಾರಿ ವರ್ಗಕ್ಕೆ ಸುಖಾ ಸುಮ್ನೆ ಕ್ರಿಮಿನಲ್ ಪ್ರಕರಣಗಳು ದಾಖಲೆ ಮಾಡುತ್ತೆವೆ. ನಿಮ್ಮ ವಿರುದ್ಧ ಕಾನೂನು ಹೋರಾಟ ಮಾಡುತ್ತೆವೆ ಎಂದು ಗೊಡ್ಡು ಬೆದರಿಕೆ ಹಾಕುವ, ವಿವಿಧ ಕಡೆ ಸುಳ್ಳು ಆರೋಪ ಮಾಡುವ ಕೆಟ್ಟ ಕುತಂತ್ರ ಬುದ್ಧಿಶಕ್ತಿಯ ನಾಯಕರಿಗೆ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತ ರಕ್ಷಣೆ ಸಮಿತಿಯ ತಾಲೂಕು ಅಧಕ್ಷ ವಿಜಯ ಸಾಲೊಡಗಿ ಹೇಳಿದರು.
ಪಟ್ಟಣದ ಖಾಸಗಿ ಹೊಟೆಲ್ ಯೊಂದರಲ್ಲಿ ಆಯೋಜಿಸಿದ್ದ ತಳವಾರ ಸಮಾಜದ ಶೈಕ್ಷಣಿಕ ಹಾಗೂ ಸಾಮಾಜಿಕ ಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು.
ತಳವಾರ ಮತ್ತು ಪರಿವಾರ ಜಾತಿಯ ಪದಗಳು, ನಾಯಕ/ನಾಯ್ಕಡ ಜಾತಿ ಪದಗಳಿಂದ ಬಿಟ್ಟು ಹೋದ ಪದಗಳು, ಸಮಾನಾರ್ಥಕ ಪದಗಳು ಎಂದು ರಾಜ್ಯ ಮತ್ತು ಕೇಂದ್ರ ಸರಕಾರ ತಿದ್ದುಪಡಿ ಮಾಡಿ, ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಿ ಅಧಿಕೃತವಾಗಿ ಗೆಟಜ್ ಹೊರಡಿಸುವ ಮೂಲಕ ಈ ಸಮುದಾಯದಗಳಿನೆ ನ್ಯಾಯ ಒದಗಿಸುವ ಕಾರ್ಯ ಮಾಡಿವೆ. ಆದರೆ ಸುಮಾರು 60 ವರ್ಷ ಪ.ಪಂ ಮೀಸಲಾತಿಗಾಗಿ ಉಪವಾಸ, ವನವಾಸ, ಪ್ರತಿಭಟನೆ, ರಾಜಕೀಯ ನಾಯಕರ ಮನೆ ಮುಂದೆ ಕಾದಿರುವ ನಮ್ಮ ಹಿರಿಯರು ಕೆಟ್ಟ ನೆನಪು ಅನುಭವ ಇನ್ನೂ ಮಾಸಿಯಿಲ್ಲ. ಹಾಗಾಗಿ ನಾವು ಎಲ್ಲಾ ಹೋರಾಟಕ್ಕೂ ಸದಾ ಸಿದ್ದ ಎಂದು ಹೇಳಿದರು.
ಆದರೆ ಇತ್ತೀಚಿಗೆ ನಕಲಿ ಜಾತಿ ತಡೆ ಹಿಡಿಯುವ ಎಂದು ನಕಲಿ ಸಂಘಟನೆ ಕಟ್ಟಿಕೊಂಡು, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಿ ಆರ್ ಸೆಲ್ ಇಲಾಖೆಯಲ್ಲಿ ಸುಖಾ ದೂರು ಕೂಡುತ್ತಾ ಅಧಿಕಾರಿ ವರ್ಗಕ್ಕೆ ಕಿರುಕುಳ ಕೊಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಅಧಿಕಾರಿ ವರ್ಗ ಯಾವುದೇ ಕಾರಣಕ್ಕೂ ಸುಳ್ಳು ಆರೋಪಗಳಿಗೆ ಮನ್ನಣೆ ಮಾಡದೆ, ಸರಕಾರದ ಮಾರ್ಗ ಸೂಚಿಯಂತೆ ಕಾನೂನು ಚೌಕಟ್ಟಲ್ಲಿ ಜಾತಿ ಪ್ರಮಾಣ ವಿತರಿಸುವ ಮತ್ತು ಪರಿಶೀಲಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು. ಒಂದು ವೇಳೆ ನಕಲಿ ಪ್ರಮಾಣ ಪತ್ರ ವಿತರಣೆಯಾದಲ್ಲಿ ನಾವು ಸಹ ಕಾನೂನು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ರಾವುತ ಮೇಟಗಾರ, ರಾಜು ಮಣ್ಣೂರ, ಚಂದು ಅಲ್ಲಾಪುರ, ಮುದಕಪ್ಪ ಡೋಣುರ, ರಮೇಶ್ ಕೋರಿ, ಮಲ್ಲು ಉತ್ನಾಳ, ಶಿವಶರಣರ ನಾಟೀಕಾರ, ರೇವಣ್ಣ ಹತ್ತಳ್ಳಿ, ಚಂದು ತಳವಾರ, ಶಂಕರ್ ಜಮಾದಾರ ಇನ್ನೂ ಅನೇಕ ಯುವಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.


















