ಲಿಂಗಸೂಗೂರು: ಕುಡಿದ ನಶೆಯಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸರ್ಕಾರಿಯ ನೌಕರನೊಬ್ಬ ಕಳ್ಳತನಕ್ಕೆ ಮುಂದಾಗಿ ಸಿಕ್ಕಿಬಿದ್ದು ಮಹಿಳೆಯ ಕೈಯಲ್ಲಿ ಚೆನ್ನಾಗಿ ಚಪ್ಪಲಿ ಏಟು ತಿಂದ ಘಟನೆ ಲಿಂಗಸುಗೂರಿನಲ್ಲಿ ಬೆಳಕಿಗೆ ಬಂದಿದೆ.
ಹೌದು ಲಿಂಗಸಗೂರು ಪಟ್ಟಣದ ಸಾರಿಗೆ ಇಲಾಖೆಯ ಡೀಪೋದ ಹತ್ತಿರ ಘಟನೆ ಜರುಗಿದೆ. ಮಹಿಳೆ ಮಾರುಕಟ್ಟೆಯಲ್ಲಿ ಸಾಮಗ್ರಿಗಳನ್ನು ಕೊಂಡುಕೊಂಡು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಮಹಿಳೆ ಸಾಮಗ್ರಿಗಳಲ್ಲಿ 2500/ ಬೆಲೆ ಬಾಳುವ ಪಂಪ್ ಒಂದನ್ನು ಕರೆದಿಸಿರುತ್ತಾಳೆ. ಅದನ್ನು ನೋಡಿದ ವ್ಯಕ್ತಿ ತಾನು ಕುಡಿದ ನಶೆಯಲ್ಲಿ ಇರುವುದನ್ನು ಮರೆತು ಪಂಪ್ ಎಗರಿಸಿಕೊಂಡಿದ್ದಾನೆ.
ಬಸ್ಸಿನಿಂದ ಇಳಿಯುತ್ತಿದ್ದಂತೆ ಮಹಿಳೆಗೆ ಪಂಪು ಕಳುವಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಕೂಡಲೆ ಮಹಿಳೆ ಮತ್ತು ವೃದ್ಧೆ ಆಟೋದಲ್ಲಿ ಬಸನ್ನು ಹಿಂಬಾಲಿಸಿಕೊಂಡು ಬಂದು ಬಸ್ಸು ಶೋಧ ಮಾಡಿದಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಇದರಿಂದ ಆಕ್ರೋಶಗೊಂಡ ವ್ಯಕ್ತಿಯನ್ನು ಹಿಡಿದ ಮಹಿಳೆ ಚಪ್ಪಲಿಯಿಂದ ಥಳಿಸಿದ್ದಾಳೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸಹ ಪ್ರಯಾಣಿಕರು ದರ್ಮದೇಟು ನೀಡಿ ವಿಚಾರಿಸಿದ್ದಾರೆ. ಆಗ ತಿಳಿದಿದೆ ಕುಡಿದ ನಸೆಯಲ್ಲಿ ಕಳತನ ಮಾಡಿದ ವ್ಯಕ್ತಿ ಓರ್ವ ಸರಕಾರಿ ನೌಕರ ಎಂದು. ಆಗ ಎಲ್ಲಾ ಸಹಪ್ರಯಾಣಿಕರು ಕೂಡ ಆ ವ್ಯಕ್ತಿಗೆ ಛೀಮಾರಿ ಹಾಕಿ ಕಳುಹಿಸಿದ್ದಾರೆ.