ಇಂಡಿ ಜಿಲ್ಲೆ : 51 ಕ್ಕೂ ಹೆಚ್ಚು ಮಠಾಧೀಶರ ಕೂಗು
ಇಂಡಿ : ಇಂಡಿ ಜಿಲ್ಲೆ ಆಗಬೇಕೆಂದು ಆಗ್ರಹಿಸಿ ಆಲಮೇಲ,ಇಂಡಿ ಮತ್ತು ಚಡಚಣ ಭಾಗದ 51 ಕ್ಕೂ ಹೆಚ್ಚು ಮಠಾಧೀಶರು ಸಭೆ ಸೇರಿ ಜಿಲ್ಲಾ ಮಾಡುವ ಕುರಿತು ತಮ್ಮ ಬೆಂಬಲ ವ್ಯಕ್ತ ಪಡಿಸಿ ಚಿಂತನೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಬಂಥನಾಳದ ಶ್ರೀ ವೃಷಭಲಿಂಗೇಶ್ವರ ಶ್ರೀಗಳು ಮಠಾಧೀಶರು ಕೇವಲ ಧಾರ್ಮಿಕ ಕೆಲಸ ಮಾಡದೇ ಶೈಕ್ಷಣಿಕ,ಸಾಮಾಜಿಕ ಮತ್ತು ಇನ್ನಿತರ ರಂಗಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ
ಮುಂದಿನ ದಿನಗಳಲ್ಲಿ ಮಠಾಧೀಶರೆಲ್ಲರೂ ಇಂಡಿ
ಜಿಲ್ಲಾ ಕೂಗಿಗೆ ರೂಪರೇಷೆ ನಿರ್ಮಿಸಿ ಸಮಸ್ತ ಮಠಾಧೀಶರು ಒಕ್ಕೂಟದ ಕೂಗು ಮಾಡುವದಾಗಿ
ತಿಳಿಸಿದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು ಮಾತನಾಡಿ ಇಂಡಿ ಜಿಲ್ಲೆ ಆಗಬೇಕೆಂದು ಮಠಾಧೀಶರು ಈಗಾಗಲೇ ಅನೇಕ ದಿನಗಳಿಂದ ಬೆಂಬಲ ವ್ಯಕ್ತ ಪಡಿಸುತ್ತ ಬಂದಿದ್ದು ಮುಂದಿನ ದಿನಗಳಲ್ಲಿ ಮಠಾಧೀಶರು ಯಾವದೇ ತ್ಯಾಗಕ್ಕೂ ಸಿದ್ದ ಎಂದರು. ಆಲಮೇಲದ ಚಂದ್ರಶೇಖರ ಶಿವಾಚಾರ್ಯರರು ಮಾತನಾಡಿ ಮಠಾಧೀಶರು ಒಮ್ಮತದ ಅಭಿಪ್ರಾಯದಿಂದ ಬೆಂಗಳೂರಿಗೆ ಹೋಗಲು ಅಥವಾ ಯಾವದೇ ರೀತಿಯ ಹೋರಾಟಕ್ಕೆ ಸಿದ್ಧರಿರುವದಾಗಿ ತಿಳಿಸಿದರು.
ತಡವಲಗಾದ ರಾಚೋಟೇಶ್ವರ ಶಿವಾಚಾರ್ಯರರು,
ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರರು ಮಾತನಾಡಿ ಹೋರಾಟ ಪಕ್ಷಾತೀತವಾಗಿದ್ದು ಇಲ್ಲಿ ಯಾವದೇ ರೀತಿಯ ಪಕ್ಷ,ಜಾತಿ ಕಾರಣ ಮಾಡದೇ ಮಠಾಧೀಶರು ಕೇವಲ ಜಿಲ್ಲೆಗಾಗಿ ಮಾತ್ರ ಗುರಿಯಾಗಿಟ್ಟುಕೊಂಡು ಹೋರಾಟ ಮಾಡುವದಾಗಿ ತಿಳಿಸಿದರು.
ಸಭೆಯಲ್ಲಿ ಅಥರ್ಗಾದ ಮುರಗೇಂದ್ರ ಶಿವಾಚಾರ್ಯರರು, ಗೋಳಸಾರದ ಅಭಿನವ
ಪುಂಡಲಿಂಗ ಶ್ರೀಗಳು,ಚಡಚಣದ ಷಡಷ್ಕರಿ
ಶ್ರೀಗಳು,ಜೈನಾಪುರದ ರೇಣುಕಾಚಾರ್ಯರರು, ಇಂಚಗೇರಿಯ ರುದ್ರಮುನಿ ಶಿವಾಚಾರ್ಯರರು, ರೋಡಗಿಯ ಅಭಿನವ ಶಿವಲಿಂಗ ಶಿವಾಚಾರ್ಯರರು, ಹಿರೇರೂಗಿಯಮಾತೋಶ್ರೀ ಸುಗಲಾದೇವಿ,ಕುಮಸಗಿಯ
ಶಿವಾನಂದ ಹಿರೇಮಠ ಶ್ರೀಗಳು, ಹಾಲಹಳ್ಳಿಯ
ವಿಜಯಮಹಾಂತೇಶ ಶಿವಾಚಾರ್ಯರರು ಸೇರಿದಂತೆ 50
ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು.