ಲಿಂಗಸೂಗೂರು: ಕೇಂದ್ರ ಜಲ ಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ರವರು ಇಂದು ಕೃಷ್ಣ ಭಾಗ್ಯ ಜಲ ನಿಗಮಕ್ಕೆ ಬೇಟಿ ನೀಡಿ ಪರಿಶೀಲಿಸಿದರು.
ಇದೆ ವೇಳೆ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಮಾನಪ್ಪ ಡಿ ವಜ್ಜಲ್ ಮಾನ್ಯ ಸಚಿವರಿಗ ಲಿಂಗಸುಗುರ ಕ್ಷೇತ್ರದ ರೈತರ ಕಷ್ಟವನ್ನು ಮನವರಿಕೆ ಮಾಡಿ ಈ ಭಾದಲ್ಲಿ ಇನ್ನೂ ಹೆಚ್ಚಿನ ಭೂಮಿಗೆ ನೀರುನ್ನು ಹರಿಸಿ, ಈ ಭಾಗವನ್ನು ಸಂಪೂರ್ಣ ನೀರಾವರಿ ಪ್ರದೇಶವನ್ನು ಮಾಡಬೇಕು. ಜತೆಗೆ ಶ್ರೀ ಅಮರೇಶ್ವರ ಏತ ನೀರಾವರಿ ಯೋಜನೆ, ಡಾ. ಬಿ ಆರ್ ಅಂಬೇಡ್ಕರ್ ಏತ ನೀರಾವರಿ ಯೋಜನೆ, ಕಾಚಾಪುರ ಏತ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ನೆರವನ್ನು ನೀಡಿ ಯೋಜನೆಗಳನ್ನು ಜಾರಿಗೆ ತರಲು ಕೊರಿ ಮನವಿಯನ್ನು ಮಾಡಿದರು. ಕೇಂದ್ರ ಸಚಿವರು ಮನವಿಗೆ ಸ್ಪಂದಿಸಿ ಈ ಯೋಜನೆಗಳಿಗೆ ಶೀಘ್ರವಾಗಿ ಕೇಂದ್ರ ಅಗತ್ಯ ನೇರವು ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ರಾಯಚೂರು ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಸುರಪುರ ಕ್ಷೇತ್ರದ ಶಾಸಕರಾದ ರಾಜುಗೌಡ, ಮುಖಂಡರಾದ ಗಿರಿಮಲ್ಲನಗೌಡ ಮಾಲಿ ಪಾಟೀಲ್,
ನಯೋಪ್ರಾ ಅಧ್ಯಕ್ಷರಾದ ಡಾ. ಶಿವಬಸಪ್ಪ ಹೆಸರೂರು, ವೇಂಕನಗೌಡ ಪಾಟೀಲ್ ಹಾಗೂ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.