ಲಿಂಗಸೂಗೂರು : ತಾಲೂಕಿನ ಈಚನಾಳ ಗ್ರಾಮಕ್ಕೆ ಶವಸಂಸ್ಕಾರಕ್ಕೆ ಹೋದಂತಹ ವ್ಯಕ್ತಿ ನೀರಿನಲ್ಲಿ ಕೊಚ್ಚಿಹೋದ ದಾರುಣ ಘಟನೆಯೊಂದು ನಡೆದಿದೆ.
ತಾಲೂಕಿನ ಈಚನಾಳ ಗ್ರಾಮದ ಜಸ್ಕಾಂ ಇಲಾಖೆ ಪ್ರತಿನಿಧಿ ಈಶ್ವರ(30) ಯರಗುಂಟಿ ಗ್ರಾಮದ ಬಳಿ ಕೃಷ್ಣಾ ಬಲದಂಡೆ ನಾಲೆಯ 11ನೇ ಮೈಲ್ ಬಳಿಯ ಕಾಲುವೆ ನೀರುಪಾಲಾಗಿದ್ದಾನೆ. ಇನ್ನೂ ಈಚನಾಳ ಗ್ರಾಮದಲ್ಲಿ ಸಂಬಂದಿಯೊಬ್ಬರು ಮೃತಪಟ್ಟ ಹಿನ್ನಲೆ ಮೃತನ ಅಂತ್ಯ ಸಂಸ್ಕಾರ ಮುಗಿಸಿ ಸ್ನಾನ ಮಾಡಲು ಕೃಷ್ಣಾ ಕಾಲುವೆಗೆ ಇಳಿದು ಸ್ನಾನ ಮಾಡಲು ಮುಂದಾದಾಗ, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ. ಕಾಲುವೆ ದಡದಲ್ಲಿ ವ್ಯಕ್ತಿ ಬೈಕ್, ಬಟ್ಟೆಗಳು ಪತ್ತೆಯಾಗಿವೆ. ಘಟನೆ ವಿಚಾರ ತಿಳಿದು ಲಿಂಗಸೂಗೂರು ಅಗ್ನಿಶಾಮಕ ಸಿಬ್ಬಂದಿಗಳು ಕಾಲುವೆಯಲ್ಲಿ ವ್ಯಕ್ತಿ ದೇಹವನ್ನು ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ. ಲಿಂಗಸೂಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.