ಅಫಜಲಪುರ: ತಾಲೂಕಿನ ಸುಕ್ಷೇತ್ರ ಮಣ್ಣೂರ ಗ್ರಾಮದಲ್ಲಿ ದಿನಾಂಕ 14 ರಿಂದ 20 ರ ವರೆಗೆ ಗ್ರಾಮದೇವತೆ ಶ್ರೀ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಜರುಗಲಿದೆ. 14 ರಂದು ಶನಿವಾರ ಸಾಯಂಕಾಲ ಶಿವಬಾಳನಗರ ಭಕ್ತಾದಿಗಳಿಂದ ನಂದಿಕೋಲು ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ವೈಭವಗಳೊಂದಿಗೆ ದೇವಿಯ ಮಂದಿರಕ್ಕೆ ತಲುಪುವುದು. 15 ರಂದು ರವಿವಾರ ಶ್ರೀ ಯಲ್ಲಮ್ಮ ದೇವಿಯ ಬಾಸಿಂಗ ಮೆರವಣಿಗೆ ಜರುಗುವುದು. ರಾತ್ರಿ 9 ಗಂಟೆಗೆ ಬಾಸಿಂಗ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸುವುದು. 16 ರಂದು ಸೋಮವಾರ ಆಗಿ ಹುಣ್ಣಿಮೆಯಂದು ಬೆಳಿಗ್ಗೆ 5 ಗಂಟೆಗೆ ಷ, ಬ್ರ, ಡಾ!! ಶಂಭುಲಿಂಗ ಶಿವಾಚಾರ್ಯರು ಪಡಸಾವಳಗಿ ಉದಗಿರ ಮಠ ಇವರಿಂದ ದೇವಿಯ ರುದ್ರಾಭಿಷೇಕ, 7 ಗಂಟೆಗೆ ದೇವಿಯ ವಸ್ತ್ರಾಭರಣ 9 ಗಂಟೆಯಿಂದ ನೈವೇದ್ಯ ಅರ್ಪಣೆ, ಸಾಯಂಕಾಲ 4 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ಭೀಮಾ ನದಿಯಲ್ಲಿರುವ ಶ್ರೀ ಯಲ್ಲಮ್ಮ ದೇವಿ ಮಂದಿರಕ್ಕೆ ಹೋಗುವ ಕಾರ್ಯಕ್ರಮ,5 ಗಂಟೆಗೆ ಬಾಸಿಂಗ ಮೆರವಣಿಗೆಯೊಂದಿಗೆ ಪಲ್ಲಕ್ಕಿ ಸ್ವಾಗತಿಸುವುದು, 7 ರಿಂದ 9 ಗಂಟೆಯವರೆಗೆ ಚಿತ್ರ ವಿಚಿತ್ರ ಮದ್ದು ಸುಡುವ ಕಾರ್ಯಕ್ರಮ, ಪಲ್ಲಕ್ಕಿ ಮೆರವಣಿಗೆಯಲ್ಲಿ ನವಿಲು ಕುಣಿತ, ಕುದುರೆ ಕುಣಿತ, ಕರಡಿ ಕುಣಿತ ಸಂಪ್ರದಾನಿವಾದನ, ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ದೇವಿಯ ಮಂದಿರಕ್ಕೆ ಆಗಮಿಸುವುದು. ರಾತ್ರಿ ಗೀ ಗೀ ಪದಗಳು ಜರುಗುವವು. 17 ರಂದು ಸಾಯಂಕಾಲ ಸುಪ್ರಸಿದ್ಧ ಜಂಗೀ ಪೈಲ್ವಾನರಿಂದ ಕುಸ್ತಿಗಳು ಜರುಗುವವು, ಜಾತ್ರೆಯ ಅಂಗವಾಗಿ 14 ರಿಂದ 20 ರ ವರೆಗೆ, ಮಹಾಕಾಳಿ ಮಂದಿರ ಹಾಗೂ ಹೊಸ ಪಾದಗಟ್ಟೆ ಹತ್ತಿರ ಜಾನುವಾರುಗಳ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಉತ್ತಮ ಜಾನುವಾರುಗಳಿಗೆ ಶ್ರೀ ಯಲ್ಲಮ್ಮ ದೇವಿ ಟ್ರಸ್ಟ್ ಕಮಿಟಿಯಿಂದ ಬಹುಮಾನ ವಿತರಿಸಲಾಗುವುದು. ಜಾತ್ರೆಯ ಅಂಗವಾಗಿ ನಾಟಕ ಹಾಗೂ ದೇವಿ ಮಹಾತ್ಮೆ ಬಯಲಾಟ ಜರುಗುವುದು. ಶ್ರೀ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಅಫಜಲ್ಪುರ ಕಲಬುರಗಿ ಇಂಡಿ ವಿಜಯಪುರ ಅಕ್ಕಲಕೋಟ, ಸೋಲಾಪುರ, ಆಳಂದ ರತ್ನಾಗಿರಿ ಮುಂಬೈ ಸೇರಿದಂತೆ ವಿವಿಧ ಕಡೆಗಳಿಂದ ಬಸ್ಸಿನ ಸೌಲಭ್ಯ ವಿರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಪಡೆದುಕೊಳ್ಳಬೇಕು ಎಂದು ಶ್ರೀ ಯಲ್ಲಮ್ಮ ದೇವಿ ಟ್ರಸ್ಟ್ ಕಮೀಟಿಯವರು ತಿಳಿಸಿದ್ದಾರೆ.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.