ಇಂಡಿ : ಶಕ್ತಿ ಯೋಜನೆ ಜಾರಿಗೆ ಹಿನ್ನೆಲೆ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಸರಿಯಾಗಿ ಬಸ್ ಬರದೆ, ಸಿಗದೆ ಇರುವುದಕ್ಕೆ ಅಖೀಲ ಭಾರತೀಯ ವಿಧ್ಯಾರ್ಥಿ ಪರಿಷತ್ ಇಂಡಿ ಘಟಕದ ಅಡಿಯಲ್ಲಿ ಬೆಳ್ಳಂ ಬೆಳಿಗ್ಗೆ 7 ಘಂಟೆಯಿಂದಲೇ ರಸ್ತೆಯಲ್ಲಿಯೇ ಬಸ್ ತಡೆದು ವಿಧ್ಯಾರ್ಥಿ ಪರಿಷತ್ತ್ ಗುಡುಗಿದರೆ ವಿಧಾನ ಸೌಧ ನಡುಗುತ್ತೆ ಎಂದು ಸರಕಾರದ ವಿರುದ್ಧ ಸೋಮುವಾರ
ಗುಡುಗಿದರು.
ಇಂಡಿ ತಾಲ್ಲೂಕಿನ ಹಲಸಂಗಿ ಗ್ರಾಮದ ಬಳಿ ವಿದ್ಯಾರ್ಥಿಗಳು ಸೋಲಾಪುರ ಮಾರ್ಗವಾಗಿ ಹಲಸಂಗಿ ಇಂಡಿಗೆ ತೆರಳುವ ಸುಮಾರು 10 ಕ್ಕೂ ಹೆಚ್ಚು ಬಸ್ ನಿಲ್ಲಿಸಿ, ಸುಮಾರು 3 ರಿಂದ 4 ಘಂಟೆ ಪ್ರತಿಭಟನೆ ನಡೆಸಿದರು. ವಿಧ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುವ ಅಧಿಕಾರಿಗಳ ವಿರುದ್ಧ ಹಾಗೂ ಸರಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ತಿಳಿಯುತ್ತಿದಂತೆ ಸ್ಥಳಕ್ಕೆ ಝಳಕಿ ಪಿ ಎಸ್ ಐ ಬಿಎಸ್ ಪಾಟೀಲ ಹಾಗೂ ಪೋಲಿಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಪ್ರತಿಭಟನೆ ನಿರತ ವಿಧ್ಯಾರ್ಥಿಗಳ ಮನವೊಲಿಸಲು ಮುಂದಾದರು. ಆದರೆ ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಇಂಡಿ KSRTC ಮ್ಯಾನೇಜರ್ ಬರುವವರಿಗೆ ನಾವು ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಭೇಟಿ ನೀಡಿದ ಇಂಡಿಯ KSRTC ಮ್ಯಾನೇಜರ್ ವಾಗೇಶ್ ಎಸ್ ಬಿ ವಿದ್ಯಾರ್ಥಿಗಳಿಗೆ ಮನವೊಲಿಸಿ ಬಸ್ಗಳು ನಾಳೆಯಿಂದ ನಿಗದಿತ ಸಮಯಕ್ಕೆ, ವಿಧ್ಯಾರ್ಥಿಗಳಿಗೆ ಸಹಾಯ ಸಹಕಾರವಾಗುವ ಬಸ್ ಸಂಚರಿಸಲು ಅವಕಾಶ ಮಾಡುತ್ತೆನೆ ಎಂದು ಹೇಳಿ ವಿಧ್ಯಾರ್ಥಿಗಳಿಗೆ ಮನವೋಲಿಸದರು. ತದನಂತರ ವಿಧ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಸಚ್ಚಿನ ಧಾನಗೊಂಡ, ದರ್ಶನ ತೋಳನೂರ, ಪ್ರಜ್ವಲ್ ಬಿಸೆ
ಪ್ರಪುಲ್ ಕಟ್ಟಿಮನಿ, ಈರಣ್ಣ , ಸಮರ್ಥ ಗಾಯಕವಾಡ ಇನ್ನೂ ಅನೇಕ ಎಬಿವಿಪಿ ಕಾರ್ಯಕರ್ತರು, ವಿಧ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.