ಸಂತ ಸೇವಾಲಾಲರು ಅನಕ್ಷರಸ್ಥ ಜನಾಂಗಕ್ಕೆ ಸಂಸ್ಕಾರ ನೀಡಿದ್ದಾರೆ : ಬಿ.ಡಿ ಪಾಟೀಲ್
ಇಂಡಿ: ಸಂತ ಸೇವಾಲಾಲರು ಅನಕ್ಷರಸ್ಥ ಜನಾಂಗಕ್ಕೆ
ದಾರ್ಮಿಕ, ನೈತಿಕ, ಹಾಗೂ ಶೈಕ್ಷಣಿಕ ಸಂಸ್ಕಾರವನ್ನು
ನೀಡಿದ್ದಾರೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಹೇಳಿದರು.
ಗುರುವಾರ ತಾಲೂಕಿನ ಹಂಜಗಿ ಎಲ್ಟಿ ಗ್ರಾಮದಲ್ಲಿ ಸಂತ ಸೇವಾಲಾಲರ 285ನೇ ಜಯಂತಿಯ ಕಾರ್ಯಕ್ರಮನದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮತನಾಡಿದರು. ಸೇವಾಲಾಲರು ಬಹುದೊಡ್ಡ ಸಾಧುಪುರುಷ. ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಆಧ್ಯಾತ್ಮವನ್ನು ಅಪ್ಪಿಕೊಂಡು, ದೇವರನ್ನು ಒಲಿಸಿಕೊಂಡು, ತಮ್ಮ ಜನಾಂಗದ ಸೇವೆಯನ್ನು ಮಾಡಿದ ಮಹಾನ್ ಹಿತಚಿಂತಕರು. ದಾರ್ಶನಿಕರು. ಈ ಸಮಾಜವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ ಮಹಾನ ಸಂತ ಸೇವಾಲಾಲರ ಆದರ್ಶ ಚಿಂತನೆಗಳು ಪ್ರತಿಯೊಬ್ಬರ ಜೀವನದಲ್ಲೂ ಅಳವಡಿಸಿಕೊಂಡು ಉತ್ತಮ ಮಾರ್ಗದಲ್ಲಿ ಸಾಗಬೇಕು ಎಂದರು.
ಈ ಸಂದರ್ಭದಲ್ಲಿ ಬಿ.ಎಲ್. ರಾಠೋಡ, ರಮೇಶ ರಾಠೋಡ, ಬಾಬು ನಾಯಕ, ಕೃಷ್ಣ ನಾಯಕ, ಶ್ರೀಶೈಲ ಕಾರಬಾರಿ, ನಾಗೇಶ ಕಾರಬಾರಿ, ಅಬ್ಬಾಸಲಿ ಜಮಖಂಡಿ, ಬಾಬು ಮೇತ್ರಿ, ಗಣೇಶ ರಾಠೋಡ, ಸಚಿನ ರಾಠೋಡ ಸೇರಿದಂತೆ ಅನೇಕರು ಉಸ್ಥಿತರಿದ್ದರು.
ತಾಂಡಾದಲ್ಲಿ ಶ್ರೀ ಸಂತಸೇವಾಲಾಲರ 285ನೆಯ
ಜಯಂತಿಯನ್ನು ಗ್ರಾಮದ ಸಮಸ್ತ ಮುಖಂಡರು
ಹಾಗೂ ಶ್ರೀಸಂತಸೇವಾ ಲಾಲರ ಅಭಿಮಾನಿಗಳು
ಅದ್ಧೂರಿಯಾಗಿ ಆಚರಿಸಲಾಯಿತು. ಮಹಿಳೆಯರು
ಕುಂಭಮೇಳದೊಂದಿಗೆ ಶ್ರೀಶೇವಾಲಾಲರ ಭಾವಚಿತ್ರಕ್ಕೆ
ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ,
ನಂತರ ತಾಂಡಾದಲ್ಲಿರುವ ದೇವಾಲಯದ ಆವರಣದಲ್ಲಿ
ಧರ್ಮ ಸಭೆಯಲ್ಲಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ನಂತರ ಮಾತನಾಡಿದರು.
ಇಂಡಿ: ತಾಲೂಕಿನ ಹಂಜಗಿ ಎಲ್ಟಿ ಗ್ರಾಮದಲ್ಲಿ ಸಂತ ಸೇವಾಲಾಲರ 285ನೇ ಜಯಂತಿಯ ಕಾರ್ಯಕ್ರಮನದಲ್ಲಿ ಬಿ.ಡಿ. ಪಾಟೀಲ ಮತನಾಡಿದರು.