ಇಂಡಿ : ಪುರಸಭೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಸರಕಾರಕ್ಕೆ ಗಮನಕ್ಕೆ ಬಂದಿದೆಯೇ ಎಂದು ಚುಕ್ಕೆ ಗುರುತಿಲ್ಲದ ಪ್ರಶ್ನೆ ಮೂಲಕ ಸದನದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಸರಕಾರದ ಗಮನಕ್ಕೆ ತಂದರು. ಜೊತೆಗೆ ಕಳೆದ 3 ವರ್ಷಗಳಿಂದ ವಿವಿಧ ಯೋಜನೆಗಳಡಿ ಹಾಗೂ ವಿಶೇಷ ಅನುದಾನ ಸೇರಿದಂತೆ ಪುರಸಭೆಗೆ ಮಂಜೂರಾದ ಅನುದಾನ ಮತ್ತು ಕೈಗೊಂಡಿರುವ ಕಾಮಗಾರಿ ಕುರಿತು ಸರಕಾರಕ್ಕೆ ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು.ಉತ್ತರಿಸಿದ ಅವರು, ಇಂಡಿ ಪುರಸಭೆ ವ್ಯಾಪ್ತಿಯ ರಸ್ತೆಗಳು ಹಾಳಾಗಿದ್ದು ಗಮನಕ್ಕೆ ಬಂದಿದ್ದು, 1050.00 ಲಕ್ಷ ಅನುದಾನ ಅವಶ್ಯವಿರುತ್ತದೆ. ಮುಖ್ಯಮಂತ್ರಿ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಹಂತ 4ರ ಯೋಜನೆಯಡಿ ಇಂಡಿ ಪುರಸಭೆಗೆ ಸರಕಾರದ ಆದೇಶ ಸಂಖ್ಯೆ: ನಅಇ 124 ಸಮಸ 2021 : ದಿನಾಂಕ :14 /01/2022 ರಲ್ಲಿ 10 ಕೋಟಿ ಅನುದಾನ ಹಂಚಿಕೆ ಮಾಡಲಾಗಿರುತ್ತೆದೆ. ಆರ್ಥಿಕ ಇಲಾಖೆ ನಿರ್ದೇಶನ್ವಯದ ಸರಕಾರ ಪತ್ರ ಸಂಖ್ಯೆ ನಅಇ 339 ಎಸ್ ಎಫ್ ಸಿ 2021, ದಿನಾಂಕ :17/02/2022 ರಲ್ಲಿ ಎಸ್ ಎಫ್ ಸಿ ವಿಶೇಷ ಅನುದಾನದಡಿ ತಡೆಹಿಡಿದಿರುವ ಎಲ್ಲಾ ಕಾಮಗಾರಿಗಳನ್ನು ಮರು ಆರಂಭಿಸಲು ಸಹಮತಿ ನೀಡಲಾಗಿರುತ್ತೆದೆ. ಈ ಪೈಕಿ ಇಂಡಿ ಪುರಸಭೆಯ 8:00 ಕೋಟಿ ರೂ ಗಳ ಪ್ರಸ್ತಾವನೆ ಒಳಗೊಂಡಿರುತ್ತೆದೆ.
ಕಳೆದ 3 ವರ್ಷಗಳಲ್ಲಿ ಅನುದಾನ ನಗರೋತ್ಥಾನ ಯೋಜನೆಗೆ : ಲಕ್ಷಗಳಲ್ಲಿ 414.00, 12.16, 7.34 ಬಿಡುಗಡೆಯಾಗಿದ್ದು ಇರುತ್ತೆದೆ.
14 ನೇ ಮತ್ತು 15 ನೇ ಹಣಕಾಸು ಆಯೋಗದ : ಯೋಜನೆಯಲ್ಲಿ 198.73 , 267.00 , 268.00 , 198.66
ಸ್ವಚ್ಛ ಭಾರತ ಯೋಜನೆ : 28.93, 58.78, 21.59
ಈ ಎಲ್ಲಾ ಯೋಜನೆಯ ಕಾಮಗಾರಿಗಳನ್ನು ಅನುಭಂದ 1, 2 3, 4, 5 ರಲ್ಲಿ, ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.