ಇಂಡಿ : ಲೇಖಕಿ ಪಾರ್ವತಿ ಸೊನ್ನದ (ತಳವಾರ) ಬರೆದಿರುವ “ಅರಳುವ ಹೂಗಳು” ಮಕ್ಕಳ ಕವನ ಸಂಕಲನ ಪುಸ್ತಕವನ್ನು ಕಂದಾಯ ಉಪವಿಭಾಗ ಅಧಿಕಾರಿ ರಾಮಚಂದ್ರ ಗಡದೆ ಹಾಗೂ ತಾಲ್ಲೂಕು ಅಧಿಕಾರಿಗಳು ಬಿಡುಗಡೆ ಮಾಡಿದರು. ಪಟ್ಟಣದ ಪೋಲಿಸ್ ಪರೆಡ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ವೇದಿಕೆಯಲ್ಲಿ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ, ಭೈರುಣಿಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಮಾತೆಯಾಗಿ ಸೇವೆಸಲ್ಲಿಸುತ್ತಿರುವ ಪಾರ್ವತಿ ಸೊನ್ನದ ಅವರು ಬರೆದ ಪುಸ್ತಕ ಬಿಡುಗಡೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬನ್ನೆಮ್ಮ ಹದಿರಿ, ತಹಶಿಲ್ದಾರ ನಾಗಯ್ಯ ಹಿರೇಮಠ, ಡಿವಾಯ್ಎಸ್ಪಿ ಚಂದ್ರಕಾಂತ ನಂದರೆಡ್ಡಿ, ತಾಲ್ಲೂಕು ಪಂಚಾಯತ ಅಧಿಕಾರಿ ಸುನೀಲ್ ಮದ್ದಿನ, ಪುರಸಭೆ ಮುಖ್ಯ ಅಧಿಕಾರಿ ಕೆಎಸ್ ಲಕ್ಷ್ಮೀಷ ಉಪಸ್ಥಿತರಿದ್ದರು.