ಇಂಡಿ | ಬಾರದ ಮಳೆ, ಚಾತಕಪಕ್ಷಿಯಂತೆ ಕಾಯುತ್ತಿರುವ ರೈತರು: ಮಳೆಗಾಗಿ ಪ್ರಾರ್ಥನೆ..
ಇಂಡಿ : ಜೂನ್ ತಿಂಗಳ ಕೊನೆಯ ವಾರಕ್ಕೆ ಕಾಲಿಟ್ಟರೂ ಮುಂಗಾರು ಮಳೆಯ ಸುಳಿವೇ ಇಲ್ಲ. ಇದರಿಂದಾಗಿ ರೈತರು ತೀವ್ರ ಆತಂಕಗೊಂಡಿದ್ದಾರೆ. ಜೂನ್ ಅರಂಭದ ವೇಳೆಗೆ ವಾಡಿಕೆಗಿಂತ ಹೆಚ್ಚು ಮಳೆ ಸುರಿಯಬೇಕಿತ್ತು. ಆದರೆ, ಈ ಬಾರಿ ಇಲ್ಲಿಯವರೆಗೆ ಮಳೆಯ ದರ್ಶನ ಇಲ್ಲದೇ ಸಂಪೂರ್ಣ ಬರ ಆವರಿಸಿದ್ದರಿಂದ ರೈತರು ದೇವರ ಮೊರೆ ಹೋಗುತ್ತಿದ್ದಾರೆ.
ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದಲ್ಲಿ ಸುಮಂಗಲೆಯರು ಕುಂಭ ಹೊತ್ತು ಆಗಮಿಸಿ ಹಾಗೂ ರೈತರು ಎತ್ತಿನ ಗಾಡಿಯಲ್ಲಿ ನೀರು ತಂದು ಗ್ರಾಮ ದೇವತೆಗಳಿಗೆ ನೀರು ಹಾಕಿದರು. ಬೀರಲಿಂಗೇಶ್ವರ, ಶರಣ ಬಸವೇಶ್ವರ, ರೇವಣಸಿದ್ದೇಶ್ವರ , ಯಲ್ಲಾಲಿಂಗ, ಲಕ್ಷ್ಮಿ , ಈರಮುತ್ಯಾ ದೇವರ ಪಾದಕ್ಕೆ ನೀರು ಹಾಕಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಾಂತೇಶ ಉಪ್ಪಾರ, ರಾಯಗೊಂಡ ತಳವಾರ, ರಾಮು ಹಂಜಗಿ, ಮಲಕಪ್ಪ ಆಸಂಗಿಹಾಳ, ಮುತ್ತಪ್ಪ ಹಂಜಗ ಹಾಗೂ ಇನ್ನೂ ಅನೇಕ ರೈತರು, ಸುಮಂಗಲಿಯರು, ಮಹಿಳೆಯರು ಉಪಸ್ಥಿತರಿದ್ದರು.