ಇಂಡಿ : ಭೀಮಾತೀರದ ಭಾಗದ ಜನತೆ ಪೊಲೀಸರಿಗೆ ಸಾತ್ ನೀಡಬೇಕು ಎಂದು ಡಿವೈಎಸ್ಪಿ ಶ್ರೀಧರ ದೊಡ್ಡಿ ಮನವಿ ಮಾಡಿದರು. ಇಂಡಿ ಡಿವೈಎಸ್ಪಿ ಕಚೇರಿಯಲ್ಲಿ ಮಾತಾನಾಡಿದ ಅವರು, ಇಂಡಿ, ಚಡಚಣ ಹಾಗೂ ಸಿಂದಗಿ ಭಾಗದ ಜನರು ಸಹಕಾರ ಪೊಲೀಸರಿಗೆ ಅವಶ್ಯಕವಾಗಿದೆ. ಇನ್ನು ಅಕ್ರಮ ಚಟುವಟಿಕೆಗಳಾದ ಓಸಿ, ಇಸ್ಪೀಟ್, ಜೂಜಾಟ, ಮರಳು ಮಾಫಿಯಾದಂತಹ ಚಟುವಟಿಕೆಗಳು ನಡೆಯುವುದು ಕಂಡು ಬಂದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದರು. ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಿ ಈ ಭಾಗದಲ್ಲಿ ಶಾಂತಿ ನೆಲುಸುವಂತೆ ಮಾಡಲಾಗುವದು. ಇನ್ನು ಯಾವುದೇ ರೌಡಿಗಳು ಬೆದರಿಕೆ ಹಾಕುವದಾಗಲಿ, ಹಣಕ್ಕೆ ಬೇಡಿಕೆ ಇಡುವದಾಗಲಿ ಕಂಡುಬಂದರೆ ತಕ್ಕಪಾಠ ಕಲಿಸಲಾಗುತ್ತದೆ ಎಂದರು.