ತಳವಾರ ಸಮಾಜದ ಉತ್ತಮ ಭವಿಷ್ಯಕ್ಕಾಗಿ ಜನಗಣತಿಯಲ್ಲಿ ಪಾಲ್ಗೊಳ್ಳಿ..! ರೇವಣ್ಣ
ಇಂಡಿ : ತಳವಾರ ಸಮಾಜದ ಉತ್ತಮ ಭವಿಷ್ಯಕ್ಕಾಗಿ ಕೇಂದ್ರ ಸರಕಾರ ಹಮ್ಮಿಕೊಂಡಿರುವ ಜನಗಣತಿಯಲ್ಲಿ ಎಲ್ಲರೂ ಪಾಲ್ಗೊಂಡು ಸರಕಾರಕ್ಕೆ ಸರಿಯಾದ ಮಾಹಿತಿ ಕೊಡುವುದು ಅವಶ್ಯಕತೆಯಾಗಿದೆ ಎಂದು ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿಯ ತಾಲ್ಲೂಕು ಅಧ್ಯಕ್ಷ ರೇವಣ್ಣ ಹತ್ತಳ್ಳಿ ತಿಳಿಸಿದ್ದಾರೆ.
ಇಂಡಿ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದವರು, ಕೇಂದ್ರ ಸರಕಾರ ಪ್ರತಿ 10 ವರ್ಷಕೊಮ್ಮೆ ಜನಗಣತಿ ಮಾಡುತ್ತಿದೆ. ಜನಗಣತಿಯ ಉದ್ದೇಶ ಮತ್ತು ಗುರಿ ನೋಡುವುದಾದರೆ ಸರಕಾರ ಕೈಗೊಂಡರುವ ಕಾರ್ಯಕ್ರಮಗಳು ಯೋಜನೆಗಳು ಎನಾಗುತ್ತಿವೆ. ಆ ಯೋಜನೆಗಳು ಜನರಿಗೆ ಎಷ್ಟು ಲಾಭ ಮತ್ತು ಹಾನಿ ಬಗ್ಗೆ ಅಭಿಪ್ರಾಯ ತಿಳಿದುಕೊಳ್ಳಲು ಸಹಕಾರವಾಗುತ್ತೆದೆ. ದೇಶದ ಜನರ ಪರಿಸ್ಥಿತಿ ಯಾವ ಹಂತದಲ್ಲಿದೆ, ಎಷ್ಟು ಬದಲಾವಣೆಯಾಗಿದೆ.ಯಾವ ಯಾವ ಸಮುದಾಯ, ಸಮಾಜಕ್ಕೆ ಇನ್ನೂ ಏನು ಏನು ನ್ಯಾಯಸಿಗಬೇಕಾಗಿದೆ. ಮೂಲಭೂತ ಸೌಲಭ್ಯ ಮತ್ತು ಸೌಕರ್ಯಗಳ ಬಗ್ಗೆ ವಸ್ತು ಸ್ಥಿತಿ ತಿಳಿದುಕೊಳ್ಳಲು ಈ ಜನಗಣತಿ ಸಹಾಯ ಮಾಡುತ್ತಿದೆ ಎಂದು ಹೇಳಿದರು.
ಇನ್ನೂ ನಮ್ಮ ತಳವಾರ ಸಮಾಜದ ಉತ್ತಮ ಭವಿಷ್ಯಕ್ಕಾಗಿ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಜೊತೆಯಲ್ಲಿ ಹಲವಾರು ಕ್ಷೇತ್ರದಲ್ಲಿ ರಂಗದಲ್ಲಿ ನಮ್ಮ ಸಮಾಜ ಕಾಣಿಸಿಕೊಳ್ಳಬೇಕಾದರೆ ಜನಗಣತಿಯಲ್ಲಿ ಪಾಲ್ಗೊಂಡು ಸರಕಾರಕ್ಕೆ ನಮ್ಮ ಬಗ್ಗೆ ಸಂಪೂರ್ಣ ಮಾಹಿತಿ ಕೊಡಬೇಕಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲವೂ ನಿರ್ಧಾರವಾಗುತ್ತಿದೆ. ಹಾಗಾಗಿ ನಮ್ಮ ಸಮಾಜದ ಭವಿಷ್ಯಕ್ಕಾಗಿ ಯಾರು ಒಬ್ಬರು ಹೊರಗೆ ಉಳಿಯದಂತೆ ಜನಗಣತಿಯಲ್ಲಿ ಪಾಲ್ಗೊಂಡು ಸರಕಾರಕ್ಕೆ ಸರಿಯಾದ ಮಾಹಿತಿ ಕೊಡಬೇಕು ಎಂದು ತಳವಾರ ಸಮಾಜದ ಜನರಲ್ಲಿ ವಿನಂತಿ ಮಾಡಿಕೊಳ್ಳುತ್ತೆನೆ ಎಂದು ಹೇಳಿದರು.



















