ಲಿಂಗಸೂಗೂರು: ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಜಾತ್ರೆಯ ಮೊದಲ ದಿನದ ಪ್ರಯುಕ್ತ ಈಚನಾಳ ಗ್ರಾಮದಲ್ಲಿ ದೇವರಗಡ್ಡಿ ಗದ್ದೆಮ್ಮ ದೇವಿ ಹಾಗೂ ಈಚನಾಳ ಶ್ರೀ ಗದ್ದೇಮ್ಮ ದೇವಿಯರ ಮೆರವಣಿಗೆ ನಡೆಯಿತು.ಗ್ರಾಮದ ಹೊರಭಾಗದಿಂದ ಪ್ರಾರಂಭವಾದ ದೇವಿಯರ ಮೆರವಣಿಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ದೇವಿಯ ಗುಡಿಗೆ ತಲುಪಿ ನಂತರ ಪೂಜಾರಿಗಳ ಅಗ್ನಿ ಪ್ರವೇಶ ಹಾಗೂ ಅಕ್ಕಿ ಪಾಯಸ ಕಾರ್ಯಕ್ರಮ ನಡೆಯುವುದು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆದಪ್ಪ ಮೇಟಿ, ಬಸನಗೌಡ ಪಾಟೀಲ್, ಸೋಮಪ್ಪ ಗುಜ್ಜಲ್, ಅಮರೇಗೌಡ ಪಾಟೀಲ್, ಹನುಮಂತ ದ್ಯಾಪುರಿ, ಗದ್ದೆಪ್ಪ ಡೊಳ್ಳಿನ, ಯಮನಪ್ಪ ಕಟ್ಟಿಮನಿ, ಅಯ್ಯಪ್ಪ ಗಾಳಪೂಜಿ, ಸಂಗಪ್ಪ ಹಳ್ಳಿ , ಗದ್ದೆಪ್ಪ ಬಡಿಗೇರ ಇನ್ನಿತರರಿದ್ದರು.