ಲಿಂಗಸೂಗೂರು: ಜಿಲ್ಲಾ ಪಂಚಾಯತ್ ರಾಯಚೂರು, ತಾ.ಪಂ.ಲಿಂಗಸೂಗೂರು ಸಂಯುಕ್ತಾಶ್ರಯದ ರೋಜಗಾರ ವಾಹಿನಿ ರಥಕ್ಕೆ ಹಸಿರು ನಿಶಾನೆ ತೋರುವ ಮೂಲಕ ನರೇಗಾ ಎಡಿ ಸೋಮನಗೌಡ ಪಾಟೀಲ್ ಚಾಲನೆ ನೀಡಿದರು.
ಈ ವೇಳೆ ತಾಲೂಕಾ ನರೇಗಾ ಎಡಿ ಸೋಮನಗೌಡ ಪಾಟೀಲ್ ಮಾತನಾಡಿ ರೋಜಗಾರ ವಾಹಿನಿ ರಥ ಮಾರ್ಚ್ 15-30 ರ ವರೆಗೆ ತಾಲೂಕಿನ ಎಲ್ಲಾ ಗ್ರಾ.ಪಂ.ಗಳಿಗೆ ಸಂಚಾರ ಮಾಡಲಿದೆ. ಈ ರಥ ರಾಷ್ಟ್ರೀಯ ಉದ್ದೋಗ ಖಾತ್ರಿ ಯೋಜನೆಯ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಲಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ 2006 ರಿಂದ ಆರಂಭವಾಗಿದ್ದು, ಇಲ್ಲಿಯವರೆಗೆ ಯಶಸ್ವಿಯಾಗಿ ನಡೆದಿದೆ. ರೈತರ ಅವಶ್ಯಕ ಕಾಮಗಾರಿಗಳಿಗೆ ಹಾಗೂ ಇತರೆ ಕಾಮಗಾರಿಗಳನ್ನು ಈ ಯೋಜನೆಯಲ್ಲಿ ಅಳವಡಿಸುವ ಪ್ರಯತ್ನ ನಡೆದಿದೆ.
ಅಲ್ಲದೆ ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರ ಈ ಸೌಲಭ್ಯವನ್ನು ಒದಗಿಸಿದೆ. ರೈತರ ಅಭಿವೃಧ್ಧಿಗಾಗಿ ಸರ್ಕಾರ ವ್ಯಯಕ್ತಿಕ ಕಾಮಗಾರಿ ಹಾಗೂ ಸಾಮೂಹಿಕ ಕಾಗಾರಿಗಳನ್ನು ಮಾಡಲು ಅವಕಾಶ ಕಲ್ಪಸಿದೆ.
ಇದರ ಸದುಪಯೋಗವನ್ನು ಕೂಲಿ ಕಾರ್ಮಿಕರು ಪಡೆದುಕೊಳ್ಳಬೇಕು ಎಂದರು.