ಲಿಂಗಸಗೂರು : 1996/97 ನೇ ಸಾಲಿನ ಎಸ್ ಎಸ್ ಎಲ್ ಸಿ ಸ್ನೇಹಿತರ ಬಳಗದ ವತಿಯಿಂದ ಮುದಗಲ್ ಕೋಟೆ ಸ್ವಚ್ಛತೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಐತಿಹಾಸಿಕ ಮುದಗಲ್ ಪಟ್ಟಣದ ಎರಡು ಸುತ್ತಿನ ಕೋಟೆಯ ಸ್ವಚ್ಛತಾ ಅಭಿಯಾನವು ಸತತವಾಗಿ 20 ದಿನಗಳಿಂದ ನಡೆಯುತ್ತಿದೆ ಇದು 1996/97ಸಾಲಿನ ಎಸ್ ಎಸ್ ಎಲ್ ಸಿ ಸ್ನೇಹಿತರ ಬಳಗದ ವತಿಯಿಂದ ಕೋಟೆ ಸ್ವಚ್ಛತೆ ಮಾಡಲಾಯಿತು.
ಲಿಂಗಸುಗೂರು ಸಿ.ಪಿ.ಐ. ಮಹಾಂತೇಶ ಸಜ್ಜನ್ ಅವರ ನೇತೃತ್ವದಲ್ಲಿ ಕೋಟೆ ಸ್ವಚ್ಛತಾ ಅಭಿಯಾನ ಮಾಡಲಾಯಿತು. 1996/97ಸಾಲಿನ ಎಸ್ ಎಸ್ ಎಲ್ ಸಿ ಸ್ನೇಹಿತರ ಬಳಗದ ವತಿಯಿಂದ ಪುರಸಭೆ ಮಾಜಿ ಅದ್ಯಕ್ಷರು ಅಶೋಕ್ ಗೌಡ ಪಾಟೀಲ್, ಮುಖಂಡ ಮಹೇಬೂಬ್ ಬಾರಿಗಿಡ , ಗ್ಯಾನಪ್ಪ ಬಿಲ್ ಕೇರಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಕೋಟೆ ಸ್ವಚ್ಛತಾ ಅಭಿಯಾನಕ್ಕೆ ಆಗಮಿಸಿದ ಲಿಂಗಸಗೂರು ಸಿಪಿಐ ಮಹಾಂತೇಶ ಸಜ್ಜನ್ ಅವರಿಗೆ ರಾಮಲಿಂಗೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷರು ಸುರೇಶ್ ಗೌಡ ಪಾಟೀಲ್, ಗುರುಬಸಪ್ಪ ಸಜ್ಜನ್ , ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್ ಎ ನಯೀಮ್ ಅವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮೈಬೂಬ್ ಕಡ್ಡಿಪುಡಿ, ಮಲ್ಲಣ್ಣ ಮಾಟ್ಟೂರು , ಸೈಯದ್ ಅಬ್ದುಲ್ ರೌಫ್ ಜುನೈದಿ,
ನಾಗರಾಜ್ ತಳವಾರ, ಶಾನೂರು, ಅಂಬಿಕಾ , ದೀಪಾ , ಸುಧಾ, ಸಾವಿತ್ರಿ, ಮಮತಾ, ರವಿ ಜೀಡಿ, ಮಾನಪ್ಪ ಕಂಭಾರ, ಆರೋಗ್ಯ, ಚಂದ್ರಕಾಂತ್, ಕಿರಣ್, ಶಿವಾನಂದ್ ಮಹ್ಮದ್ ಆಸೀಫ್, ಸಮರ್ಥ, ಪ್ರಕಾಶ್, ಬಸವರಾಜ್, ಮಾರುತಿ, ಆರೋಗ್ಯ ಸ್ವಾಮಿ, ಸಾಬೀರ ಸೇರಿದಂತೆ ಮುಂತಾದವರು ಇದ್ದರು.