ಶಾಸಕ ಬಸನಗೌಡ ಉಚ್ಚಾಟನೆ ಖಂಡಿಸಿ ಇಂಡಿಯಲ್ಲಿ ಬೃಹತ್ ಪ್ರತಿಭಟನೆ
ಇಂಡಿ : ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಿದನ್ನು ವಿರೋಧಿಸಿ ಪಟ್ಟಣದ ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಮಂಗಳವಾರ ಹಿಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಅಕ್ರೋಶ ವ್ಯಕ್ತ ಪಡಿಸಿದರು.
ನಾಗರಾಳ ಹುಲಿ ಬಸನಗೌಡ ಪಾಟೀಲರು ಮಾತನಾಡಿ ಯಡಿಯೂರಪ್ಪ ವಿಜಯೇಂದ್ರ ಅವರ ಕುತಂತ್ರ ಕುಮ್ಮಕ್ಕಿನಿಂದ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿರುವದು ಹಿಂದು ಸಮುದಾಯಕ್ಕೆ ಮಾಡಿದುವ ಅಪಮಾನ. ಈ ತಪ್ಪು ನಿರ್ಧಾರದಿಂದ ಬಿಜೆಪಿ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ. ಕೂಡಲೇ ಅವರನ್ನು ಪಕ್ಷಕ್ಕೆ ಮರಳಿ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಎಂ.ಎಸ್.ರುದ್ರಗೌಡ ಮಾತನಾಡಿ ಹೈಕಮಾಂಡ ತನ್ನ ನಿರ್ಧಾರವನ್ನು ಬದಲಿಸಿ ಮತ್ತೆ ಯತ್ನಾಳ ಅವರನ್ನು ಪಕ್ಷಕ್ಕೆ ಗೌರವಯುತವಾಗಿ ಸ್ವಾಗತಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಯಾಸಾಗರ ಪಾಟೀಲ ಮತ್ತು ಇಂಡಿ ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಎಚ್. ಬಿರಾದಾರ ಮಾತನಾಡಿದರು.
ಪ್ರತಿಭಟನೆಯಲ್ಲಿ ಶರಣಗೌಡ ಬಂಡಿ, ಗಿರಿಮಲ್ಲಗೌಡ ಬಿರಾದಾರ, ರಮೇಶ ಬಿರಾದಾರ, ಅಣ್ಣಪ್ಪ ಬಡಿಗೇರ, ಸೋಮಶೇಖರ ದೇವರ, ಸೋಮನಾಥ ಪ್ರಚಂಡಿ, ಶ್ರೀಶೈಲ ಕಲ್ಲೂರ,ವಿಠ್ಠಲ ಬಾಬಳಗಾಂವ, ಅಶೋಕಗೌಡ ಪಾಟೀಲ,ಪಂಚಪ್ಪ ಪಾಟೀಲ, ವಿನೋದ ಹದಗಲ್ಲ, ಆನಂದ ದೇವರ, ಶಾಂತೇಶ ಕ್ಷತ್ರಿ, ರತನ ಹಲವಾಯಿ ಅಕ್ಷಯ ಪಾಟೀಲ ಮತ್ತಿತರಿದ್ದರು.
ಇಂಡಿಯಲ್ಲಿ ಶಾಸಕ ಬಸನಗೌಡ ಪಾಟೀಲರ ಉಚ್ಚಾಟನೆ ಖಂಡಿಸಿ ಅಭಿಮಾನಿಗಳು ಬೃಹತ ಪ್ರತಿಭಟನೆ ನಡೆಸಿದರು.



















