ಅಫಜಲಪುರ: ವಲಯದ ಉಡಚಾಣ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯತಿಯ ಅದ್ಯಕ್ಷ ಸ್ಥಾನಕ್ಕೆ ನಡೆದ ಚುಣಾವಣೆಯಲ್ಲಿ ಶರಣು ಮೇತ್ರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುಣಾವಣಾ ಅದಿಕಾರಿಯಾಗಿ ಕತ್ಯರ್ವ ನಿರ್ವಹಿಸಿದ ತಹಸಿಲ್ದಾರ ಸಂಜೀವಕುವಾರ ದಾಸರ ಹೇಳಿದರು.
ಉಡಚಾಣ ಗ್ರಾಮ ಪಂಚಾಯತ ಅದ್ಯಕ್ಷ ಸ್ಥಾನ ತೇರುವಾದ ನಂತರ ಅದ್ಯಕ್ಷ ಸ್ಥಾನಕ್ಕೆ ಶರಣು ಮೇತ್ರೆ ಅವರು ಒಬ್ಬರೆ ನಾಮಪತ್ರ ಸಲ್ಲಿಸಿದ್ದರು. ಚುಣಾವಣೆಯಲ್ಲಿ ಉಡಚಾಣ ಗ್ರಾಮ ಪಂಚಾಯತಿಯಲ್ಲಿ 18 ಜನ ಸದ್ಯಸರಿದ್ದು ಅದರಲ್ಲಿ 2 ಜನ ಸದ್ಯಸರು ಗೈರು ಹಾಜರಿದ್ದರು. ಉಳಿದ 16 ಜನ ಸದ್ಯಸರು ಶರಣು ಮೇತ್ರೆ ಅವರಿಗೆ ಬೆಂಬಲ ಸೂಚಿಸಿದ್ದರಿಂದ ಅವರು ಅವಿರೋದವಾಗಿ ಆಯ್ಕೆಯಾದರು.
ಉಪಾದ್ಯಕ್ಷರಾದ ಮಹಾದೇವಿ ಮಸೂತಿ ಅವರು ಉಪಾದ್ಯಕ್ಷ ಸ್ಥಾನಕ್ಕೆ ಅವರನ್ನೆ ಮುಂದುವರೆಸಲಾಯಿತು.
ಅವಿರೋಧವಾಗಿ ಆಯ್ಕೆಯಾಗುತ್ತಿದಂತೆ ಕಾರ್ಯಕ್ರರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಬ್ರಮಿಸಿದರು.
ಸಿ.ಪಿ.ಐ ಜಗದೇವಪ್ಪಾ ಪಾಳಾ ಮತ್ತು ಪಿ,ಎಸ್,ಐ, ಸುರೇಶ ಚವ್ಹಾಣ, ಎ,ಎಸ್,ಐ, ಮಹಾತೇಂಶ ಬಡದಾಳ ಇವರ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೊಬಸ್ತ ಒದಗಿಸಲಾಗಿತ್ತು.
ಈ ಸಂದರ್ಭದಲ್ಲಿ ಚುಣಾವಣಾ ಶಿರಸ್ತೆದಾರ ಮಂಜುನಾಥ, ಕಂದಾಯ ನಿರಿಕ್ಷಕರಾದ ಆನಂದ ನೆರಳೆ, ಈರಣ್ಣಾ, ಶ್ರಿಶೈಲ ನಂದಿಕೋಲ, ಬಸಣ್ಣಾ,
ಪ್ರಮುಖರಾದ ಗಡೆಪ್ಪಾ ಮೆತ್ರೆ, ಜಗು ಸಾಂಗಲಿ, ಮಡಿವಾಳಗೌಡ ಪಾಟೀಲ, ಬಾಗಪ್ಪಾ ಖೇಡ, ಮಲ್ಲು ಎಮ್, ಡಿ,ಸಂಜು ಕಡ್ಲಾಜಿ, ಲಕ್ಮಣ ಪ್ಯಾಟಿ, ಜಗನ್ನಾಥ ಬಿರಾದಾರ, ಲಕ್ಷ್ಮಣ್ ಪ್ಯಾಟಿ, ಬಿಮಾಶಂಕರ ನಾವಿ, ಶರಣು ಜಮಾದಾರ, ದಯಾನಂದ ಹಿರಿಯಾಳ, ಬಾಗಪ್ಪ ತಳವಾರ ಹಾಗು ಇತರರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.