ಇಂಡಿ : ಕರ್ನಾಟಕದ ಮಣ್ಣಿನ ಧೂಳು ಕೂಡ ಮಹಾರಾಷ್ಟ್ರಕ್ಕೆ ಹೋಗಲು ಬಿಡುವುದಿಲ್ಲ. ನೆಲ, ಜಲ, ಭಾಷೆ ಗೋಸ್ಕರ ಉಸಿರು ಬಿಟ್ಟೆವು ಆದರೆ ಅವುಗಳನ್ನು ಬಿಡುವ ಮಾತೇ ಇಲ್ಲ ಎಂದು ಕರವೇ ಅಧ್ಯಕ್ಷ ಹಾಗೂ ಗುತ್ತಿ ಬಸವಣ್ಣ ಹೋರಾಟ ಸಮಿತಿ ಸದಸ್ಯ ಶಿವರಾಜ್ ಕೆಂಗನಾಳ ಹೇಳಿದರು.
ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಮಾತಾನಾಡಿದ ಅವರು,ಸುಮ್ನೆ ಗಡಿ ಕ್ಯಾತೆ ತೆಗೆಯುವುದು ಒಂದು ಕೆಟ್ಟ ಹೇಯ ಕಾಯಕವಾಗಿದೆ. ಇದು ಯಾವತ್ತು ಆಗದ ಮಾತು ಕರ್ನಾಟಕದ ಎಲ್ಲಾ ಜಿಲ್ಲೆಗಳು ಎಲ್ಲಾ ಹಳ್ಳಿಗಳು ಕರ್ನಾಟಕದಲ್ಲಿರುವ ಕನ್ನಡಿಗರು ಎಂದಿಗೂ ಇವುಗಳನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಹೇಳಿದರು.
ಈ ಸಮಯದಲ್ಲಿ ಕರವೇ ಉಪಾಧ್ಯಕ್ಷ ಶಿವಯೋಗಿ ಸರಸಂಬಿ, ಕಾರ್ಯದರ್ಶಿ ಸಂಜೀವ ಜೇವುರ್, ಅಲ್ಲಭಕ್ಸ್ ಧಡೆದ, ಪ್ರಶಾಂತ ದೇಗಿನಲ, ಚಂದು ಕುಂಬಾರ, ಬಸು ದಿವಟಗಿ ರಾಯಗೊಂಡ ಸಿಂದಗಿ ಇನ್ನು ಅನೇಕರು ಉಪಸ್ಥಿತರಿದ್ದರು.