ಇಂಡಿ: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ಬರಗುಡಿ, ಪಡ್ನೂರು, ಲೋಣಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಅಕಾಲಿಕ ಮಳೆಗೆ ಬಾಳೆ, ಉಳ್ಳಾಗಡ್ಡಿ, ನಿಂಬೆ, ಮಾವು, ಟೆಂಗು, ದಾಳಿಂಬೆ, ದ್ರಾಕ್ಷಿ, ಬೆಳೆಗಳು ಆಲಿಕಲ್ಲ ಮಳೆಗೆ ಬೆಳೆಗಳು ಹಾನಿಯಾಗಿವೆ. ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡಾದೆಯವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪಾಟೀಲರು ರೈತರು ಶ್ರಮಪಟ್ಟು ಬೆಳೆದ ಬೆಳೆ ಅಕಾಲಿಕ ಮಳೆಯಿಂದ ಸಂಪೂರ್ಣ ಬೆಳೆ ಹಾಳಾಗಿವೆ. ಕೂಡಲೆ ಸಂಭಂದಪಟ್ಟ ಅಧಿಕಾರಿಗಳು ಬೆಳೆ ಹಾನಿ ಸರ್ವೇ ಮಾಡಿ ಸೂಕ್ತ ಪರಿಹಾರ ನೀಡಬೇಕು. ರೈತರು ಶ್ರಮಪಟ್ಟು ಬೆಳೆದ ಬೆಳೆ ಮಳೆಗೆ ಹಾಿಯಾಗಿದೆ. ಫಸಲು ರೈತರ ಕೈಗೆ ಸಿಗದೆ ಆನೆಕಲ್ಲು ಮಳೆಯಿಂದ ರೈತನ ಬದುಕು ಕಣ್ಣಿರಲಿ ಕೈತೋಳೆದಂತೆ ಆಗಿದೆ. ಸರ್ಕಾರ ಕೂಡಲೆ ಸಂಬಂಧಿಸಿದ ಇಲಾಖೆಗೆ ಸೂಚಿಸಿ ಸರ್ವೇ ಮಾಡಿಸಿ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪರುತಯ್ಯ ಮಠಪತಿ, ಸುಧಾಮ ನಾಗಣಿ, ಸೈಪನ ಇಂಡಿಕರ, ಯಶವಂತ ಹೂಗಾರ, ನಾಗೇಂದ್ರ ಬಿರಾದಾರ, ಗುಂಡುಗೌಡ ಬಿರಾದಾರ ಮುಂತಾದ ರೈತರು ಉಪಸ್ಥಿತರಿದ್ದರು.