ಹಾಲುಮತ ಸಮಾಜದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸಾಮರಸ್ಯ ಇಂದಿಗೂ ಪ್ರಸ್ತುತ್
ವಿಜಯಪುರ: ಹಾಲುಮತ ಸಮಾಜ ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸಾಮರಸ್ಯವನ್ನು ಇಂದಿಗೂ ಉಳಿಸಿಕೊಂಡು ಬಂದಿದೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಇಂದು ಗುರುವಾರ ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿಯಲ್ಲಿ ಶ್ರೀ ಬೀರಲಿಂಗೇಶ್ವರ ಮತ್ತು ಶ್ರೀ ಭೀಮರಾಯ ಮುತ್ಯಾ ಜಾತ್ರಾ ಮಹೋತ್ಸವ, ಹಿರಿಯ ಹಬ್ಬದ ಅಂಗವಾಗಿ ದ್ವಾರಬಾಗಿಲು ಗುದ್ದಲಿ ಪೂಜೆ, ಹೊಸ ಬೆಳ್ಳಿ ಪಲ್ಲಕ್ಕಿ ಸಮರ್ಪಣೆ ಹಾಗೂ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಹಾಲುಮತ ಸಮಾಜದ ಆಚರಣೆಗಳು ಹಾಲಿನಷ್ಠೇ ಶುದ್ಧವಾಗಿವೆ. ನಾವು ಯಾವುದೇ ಒಂದು ಶುಭ ಕಾರ್ಯ ಮಾಡುವಾಗ ಮೊದಲು ಕಂಬಳಿ ಹಾಸಿ ಪೂಜೆ ಮಾಡುವುದು ಇದಕ್ಕೆ ಸಾಕ್ಷಿಯಾಗಿದೆ. ನಾಡಿಗೆ ಶ್ರೀ ಬೀರಲಿಂಗೇಶ್ವರ, ಶ್ರೀ ಭೀಮರಾಯ, ಮುಮ್ಮೆಟ್ಟಿಗುಡ್ಡ, ಶ್ರೀ ಸೋಮನಿಂಗ, ಶ್ರೀ ಅಮೋಘಸಿದ್ಧ, ಶ್ರೀ ಮಲಕಾಜಿದ್ಧ ಸೇರಿದಂತೆ ನಾನಾ ಪವಾಡ ಪುರುಷರನ್ನು ನೀಡಿದ ಕೀರ್ತಿ ಬಸವನಾಡು ವಿಜಯಪುರ ಜಿಲ್ಲೆಗಿದೆ. ಈ ಪವಾಡ ಮಹನೀಯರು ತಮ್ಮ ಪವಾಡಗಳ ಮೂಲಕ ಸಮಾಜವನ್ನು ಉದ್ಧಾರ ಮಾಡಿದ್ದಾರೆ ಎಂದು ಅವರು ಹೇಳಿದರು.
ಗ್ರಾಮಸ್ಥರ ದೈವಭಕ್ತಿ ಮತ್ತು ಆಮಂತ್ರಣವನ್ನು ಒಪ್ಪಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಚಿಕ್ಕರೂಗಿ ಗ್ರಾಮಕ್ಕೆ ಬಂದಿದ್ದು, ಸಮಾಜದ ಶ್ರೇಯೋಭಿವೃದ್ಧಿಗೆ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಎಂ. ಬಿ. ಪಾಟೀಲ ಅವರು ಈ ಮುಂಚೆ ಈ ಭಾಗದಲ್ಲಿ ಸಾಕಷ್ಟು ನೀರಾವರಿ ಮಾಡುವ ಮೂಲಕ ಜಿಲ್ಲೆಗೆ ಅಂಟಿದ್ದ ಬರಪೀಡಿತ ಹಣೆಪಟ್ಟಿಯನ್ನು ಅಳಿಸಿ ಹಾಕಿದ್ದಾರೆ. ಈಗ ಕೈಗಾರಿಕೆ ಸಚಿವರಾಗಿ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ತರುತ್ತಿದ್ದಾರೆ. ಯುವಕರಿಗೆ ಉದ್ಯೋಗ ಒದಗಿಸುತ್ತಿದ್ದಾರೆ. ಬಸವನಾಡನ್ನು ಸಮೃದ್ಧಿಯ ಬೀಡನ್ನಾಗಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಸುಕ್ಷೇತ್ರ ಹುಲಜಂತಿ ಪೀಠಾಧಿಪತಿ ಶ್ರೀ ಮಾಳಿಂಗರಾಯ ಮಹಾರಾಯರು ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಸಚಿವ ಭೈರತಿ ಸುರೇಶ, ಮಾಜಿ ಶಾಸಕರಾದ ಪ್ರೊ. ರಾಜು ಆಲಗೂರ, ಶರಣಪ್ಪ ಸುಣಗಾರ, ಖ್ಯಾತ ನೇತ್ರತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ, ಮುಂಖಡರಾದ ಸುರೇಶಗೌಡ ಬಿರಾದಾರ, ಆನಂದ ದೊಡಮನಿ, ಬಿ. ಡಿ. ಪಾಟೀಲ, ಬಸೀರಶೇಠ ಬೇಪಾರಿ, ಬಸವರಾಜ ಎನ್. ಕುಮಸಗಿ, ಜಿ. ಪಂ. ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಗೌರಮ್ಮ ಮುತ್ತತ್ತಿ ಮುಂತಾದವರು ಉಪಸ್ಥಿತರಿದ್ದರು.
1 and 2 SBP Chikkaroogi Programme :
ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿಯಲ್ಲಿ ಶ್ರೀ ಬೀರಲಿಂಗೇಶ್ವರ ಮತ್ತು ಶ್ರೀ ಭೀಮರಾಯ ಮುತ್ಯಾ ಜಾತ್ರಾ ಮಹೋತ್ಸವ, ಹಿರಿಯ ಹಬ್ಬದ ಅಂಗವಾಗಿ ದ್ವಾರಬಾಗಿಲು ಗುದ್ದಲಿ ಪೂಜೆ, ಹೊಸ ಬೆಳ್ಳಿ ಪಲ್ಲಕ್ಕಿ ಸಮರ್ಪಣೆ ಹಾಗೂ ಜನಜಾಗೃತಿ ಸಭೆಯ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಸಚಿವ ಭೈರತಿ ಸುರೇಶ, ಮಾಜಿ ಶಾಸಕರಾದ ಪ್ರೊ. ರಾಜು ಆಲಗೂರ, ಶರಣಪ್ಪ ಸುಣಗಾರ, ಡಾ. ಪ್ರಭುಗೌಡ ಲಿಂಗದಳ್ಳಿ, ಸುರೇಶಗೌಡ ಬಿರಾದಾರ, ಆನಂದ ದೊಡಮನಿ, ಬಿ. ಡಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.